Saturday, July 27, 2024

ರಾಮ ಮಂದಿರ ಉದ್ಘಾಟನೆಯಂದು ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ : ಕೇಂದ್ರ ಸರ್ಕಾರ ಘೋಷಣೆ

Most read

ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ‘ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾನ’ ಸಮಾರಂಭದ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳನ್ನ ಅರ್ಧ ದಿನ ಮುಚ್ಚುವುದಾಗಿ ಘೋಷಿಸಿದರು.

ಬಹುಸಂಖ್ಯಾತರ ಭಾವನೆಗಳಿಂದ ಪ್ರೇರಿತವಾದ ಈ ನಿರ್ಧಾರವು ಮಹತ್ವದ ಕಾರ್ಯಕ್ರಮ ಭಾಗವಹಿಸಲು ಅಥವಾ ವೀಕ್ಷಿಸಲು ಅಧಿಕಾರಿಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಜನವರಿ ೨೨ ರಂದು ನಡೆಯುವ ರಾಮಮಂದಿರ ಉದ್ಘಾಟನೆ ಸಮಾರಂಭ ಪ್ರಯುಕ್ತ ಎಲ್ಲಾ ಕೇಂದ್ರ ಸರ್ಕಾರ ಹಾಗೂ ಕೈಗಾರಿಕಾ ಸಂಸ್ಥೆಗಳಿಗೆ ಅರ್ಧ ದಿನ ಅಂದರೆ 2;30 ವರೆಗೂ ರಜೆ ಇರುತ್ತದೆ ನಂತರ ಎಂದಿನಂತೆ ಕಾರ್ಯ ನಿರ್ವಹಿಸಬಹುದು ಎಂದು ಹೇಳಿದೆ.

ಜನವರಿ 22ರಂದು ಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿ ನಡೆಯುತ್ತಿರುವ ಆಚರಣೆಗಳ ಭಾಗವಾಗಿ ವಿಗ್ರಹವನ್ನ ಟ್ರಕ್ ಬಳಸಿ ದೇವಾಲಯಕ್ಕೆ ಸಾಗಿಸಲಾಗಿದೆ.

More articles

Latest article