ಹಾಸನದ ನಾಯಕರು ರಾಮನಗರದ ಜನರನ್ನ ಗುಲಾಮರಂತೆ ಕಾಣುತ್ತಾರೆ: ಹೆಚ್ ಸಿ ಬಾಲಕೃಷ್ಣ ವಾಗ್ದಾಳಿ

Most read

 ಹಾಸನ ನಾಯಕರು ರಾಮನಗರಕ್ಕೆ ಬಂದು ಇಲ್ಲಿಯ ಜನರ ಮೇಲೆ ಅಧಿಕಾರ ನಡೆಸುತ್ತಾ ಅವರನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಬಾಲಕೃಷ್ಣ, ತಮ್ಮನ್ನು ಅವರು ಗುಲಾಮರಂತೆಯೇ ಟ್ರೀಟ್ ಮಾಡುತ್ತಿದ್ದಾರೆ, ಅವರು ಬಳಸುವ ಭಾಷೆ ಸುಸಂಸ್ಕೃತವಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಮನಗರದ ಜನ ಸ್ವಾಭಿಮಾನದ ಪರ ಮತ ಚಲಾಯಿಸುತ್ತಾರೋ ಅಥವಾ ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತಾರೋ ಅಂತ ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

ರಾಜಕೀಯ ಅಖಾಡದಲ್ಲಿರುವವರೆಲ್ಲ ರಾಜಕಾರಣ ಮಾಡಿಕೊಂಡು ಬಂದಿರುತ್ತಾರೆ, ರಾಮನಗರ ರಾಜಕೀಯದ ಬಗ್ಗೆ ಮಾತಾಡುವ ಕುಮಾರಸ್ವಾಮಿ ತಾವು ಸ್ಪರ್ಧಿಸದೆ ಸಂಬಂಧಿಕರನ್ನು ಯಾಕೆ ಕರೆತಂದಿದ್ದಾರೆ? ಜನಪ್ರಿಯ ಮುಖ್ಯಮಂತ್ರಿಯಾದವರಿಗೆ ಲೋಕಸಭಾ ಚುನಾವಣೆ ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲವೇ? ಎಂದು ಬಾಲಕೃಷ್ಣ ಕುಹುಕವಾಡಿದರು.

 

More articles

Latest article