ಹಾಸನದಲ್ಲಿ ಮತ್ತೆ ಹೆಚ್ಚಾದ ಪುಂಡಾನೆಗಳ ಉಪಟಳ

Most read

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ಸುಣ್ಣದ ಹೊಳೆಯ ಲಕ್ಕುಂದ ಗ್ರಾಮದ ಬಳಿ ಸುಮಾರು 25 ಕ್ಕೂ ಹೆಚ್ಚು ಕಾಡಾನೆಗಳು ಕಾಣಿಸಿಕೊಂಡಿವೆ. ಈ ಕಾಡಾನೆಗಳು ಗುಂಪು ಗು‌ಂಪಾಗಿ ಸಂಚಾರ ಮಾಡುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಮಾಡಿದೆ.

ಮುಖ್ಯವಾಗಿ ಹಾಸನ ಜಿಲ್ಲೆ ಹಾಗೂ ಮಲೆನಾಡು ಭಾಗದಲ್ಲಿ ಬೀಟಮ್ಮ ಎಂಬ ಹೆಸರಿನ ಕಾಡಾನೆಗಳ ಹಿಂಡು ತಿರುಗಾಡುತ್ತಿದೆ ಎಂದು ಅರಣ್ಯ ಇಲಾಖೆ ಹೇಳಿದೆ. ಈ ರೀತಿಯ ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಗುಂಪು ಗುಂಪಾಗಿ ಓಡಾಡುತ್ತ ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ.

ಕೆಲವೇ ದಿನಗಳ ಹಿಂದೆ ಅರಣ್ಯ ಇಲಾಖೆಯು ಕಾಡಾನೆಗಳು ಮದದಲ್ಲಿವೆ ಎನ್ನುವ ಕಾರಣವನ್ನಿಟ್ಟು ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು‌. ಕಾಡಾನೆಗಳ ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿದ್ದಂತೆ ಗುಂಪು ಗುಂಪಾಗಿ ಆನೆಗಳ ಹಿಂಡು ಕಾಣಿಸತೊಡಗಿದೆ. ಯಾವ ಪುಂಡಾನೆಯನ್ನು ಸೆರೆ ಹಿಡಿಯದೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯನ್ನು ಸ್ಥಗಿತ ಮಾಡಿದ್ದಾರೆ.

More articles

Latest article