ಗೀತಾ ನಿಮ್ಮ ಮನೆಮಗಳು, ನಿಮ್ಮ ಮಡಿಲಿಗೆ ಹಾಕಿದೀನಿ, ಬರಿಗೈಲಿ ಕಳಿಸಬೇಡಿ: ಶಿವಣ್ಣ ಭಾವುಕ ಮನವಿ

Most read

ಲೋಕಸಭಾಕ್ಷೇತ್ರದ ಕಾಂಗ್ರೇಸ್ ಆಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀಮತಿ ಗೀತಾಶಿವರಾಜಕುಮಾರ್ ಅವರು ಇಂದು ಶಿವಮೊಗ್ಗ ಕಾಂಗ್ರೇಸ್ ಕಾರ್ಯಕರ್ತರು ಅದ್ಧೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿದರು. ಪತ್ನಿ ಗೀತಾ ಪರವಾಗಿ ನಟ ಶಿವರಾಜ್ ಕುಮಾರ್ ಪ್ರಚಾರ ಆರಂಭಿಸಿದ್ದಾರೆ. ಗೀತಾ ನಿಮ್ಮ ಮನೆಮಗಳು, ನಿಮ್ಮ ಮಡಿಲಿಗೆ ಹಾಕಿದ್ದೇನೆ. ಒಂದೇ ಒಂದು ಅವಕಾಶ ಕೊಡಿ’ ಎಂದು ಖ್ಯಾತ ನಟ ಶಿವರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಪರವಾಗಿ ಭಾವುಕ ಮನವಿ ಮಾಡಿದ್ದಾರೆ.

ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಟ ಶಿವರಾಜಕುಮಾರ್,  ಗೀತಾ ಅವರು 2014ರ ಚುನಾವಣೆಯಲ್ಲಿ ಸೋತಿದ್ದರರೂ ಧೃತಿಗೆಟ್ಟಿಲ್ಲ. ಸ್ಪರ್ಧೇ ಎಂದ ಮೇಲೆ ಸೋಲು – ಗೆಲುವು ಇದ್ದಿದ್ದೆ. ಆದರೆ ಚುನಾವಣೆಯಲ್ಲಿ ಜನರಿಗೆ ಭರವಸೆಗಳನ್ನು ನೀಡುವುದು ಮುಖ್ಯವಲ್ಲ. ಅದನ್ನು ಈಡೇರಿಸಬೇಕು. ಅದು ಗೀತಾ ಅವರಿಂದ ಅದು ಸಾಧ್ಯ ಎಂದು ಹೇಳಿದ್ದಾರೆ.

ಗೀತಾ ಬಂಗಾರಪ್ಪ ಅವರ ಮಗಳಾಗಿ, ಡಾ ರಾಜಕುಮಾರ್ ಅವರ ಸೊಸೆಯಾಗಿ, ಶಿವರಾಜುಕಮಾರನ ಹೆಂಡತಿಯಾಗಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಹಿಳೆಯರ, ಮಕ್ಕಳ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಗೀತಾರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಅವರನ್ನು ಸಂಸದರನ್ನಾಗಿ ಯಾಕೆ ಮಾಡಬಾರದು?, ಗೀತನಿಗೆ ಒಂದು ಅವಕಾಶ ಕೊಡಿ ಬರಿಗೈಲಿ ಕಳಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮತ ಕೇಳುವಾಗ ಜನರೊಂದಿಗೆ ಬಾಂಧವ್ಯ ಬೆಳೆಯುತ್ತದೆ. ಜನರಿಗೆ ಕೇವಲ ಭರವಸೆಗಳನ್ನು ನೀಡಬಾರದು ಆಗುವ ಕೆಲಸವನ್ನು ಆಗುತ್ತದೆ. ಆಗದ ಕೆಲಸವನ್ನು ಆಗುವುದಿಲ್ಲ ಎಂದು ನೇರವಾಗಿ ಹೇಳಬೇಕು ಅದುವೇ ನಿಜವಾದ ರಾಜಕಾರಣ ಎಂದು ಈ ವೇಳೆ ಹೇಳಿದ್ದಾರೆ.

ಗೀತಾಶಿವರಾಜಕುಮಾರ್ ಮಾತನಾಡಿ, ನನ್ನ ತಂದೆ ಮೊದಲ ಬಾರಿಗೆ ಶಾಸಕರಾಗಿದ್ದಾಗ ನಾನಿನ್ನೂ ಎರಡು ವರ್ಷದವಳು, ಅಲ್ಲಿಂದ ಇಲ್ಲಿಯವರೆಗೂ ರಾಜಕಾರಣವನ್ನು ನೋಡಿಕೊಂಡು ಬಂದಿದ್ದೇನೆ. ನಾನು ಈ ಜಿಲ್ಲೆಯ ಮಗಳು, ಮನೆಯ ಮಗಳನ್ನು ಬರಿಗೈಲಿ ಕಳಿಸಬೇಡಿ, ನಾನು ಗೆದ್ದು ಸಂಸತ್ತಿನಲ್ಲಿ ಶಿವಮೊಗ್ಗದ ಧ್ವನಿಯಾಗಿರುತ್ತೇನೆ. ತಂದೆಯಂತೆ ಜನರಿಗಾಗಿ ದುಡಿಯುತ್ತೇನೆ ಎಂದು ಭಾವುಕರಾಗಿ ಮನವಿ ಮಾಡಿಕೊಂಡರು.

 

More articles

Latest article