ತಾಳಿ‌ ಬಗ್ಗೆ ಮಾತಾಡುವ ಪ್ರಧಾನಿ ನಮಗೆ ಬೇಕೆ?: ಸಂತೋಷ್ ಲಾಡ್ ಪ್ರಶ್ನೆ

Most read

ಶಿವಮೊಗ್ಗ: ಪ್ರಧಾನಿ ಮೋದಿ ತಾಳಿಯ ಬಗ್ಗೆ ಮಾತಾಡುತ್ತಿದ್ದಾರೆ. ಇಂತಹ ಪ್ರಧಾನಿ ನಮಗೆ ಬೇಕಾ ಎಂದು ಸಚಿವ ಸಂತೋಷ್‌ ಲಾಡ್‌ ಪ್ರಶ್ನಿಸಿದ್ದಾರೆ.

ದೇಶದ ಮಹಿಳೆಯರಿಗೆ ತನ್ನದೇ ಆದ ಶಕ್ತಿ ಇದೆ. ಅವರಿಗೆ ಅವರ ತಾಳಿ ಉಳಿಸಿಕೊಳ್ಳುವ ಶಕ್ತಿ ಇದೆ. ಬಿಜೆಪಿ ಕಾಂಟ್ರವರ್ಸಿ ಮೇಲೆ ಚುನಾವಣೆ ಮಾಡುತ್ತೆ. ಕಾಂಟ್ರವರ್ಸಿ ಇಲ್ಲದೆ ಚುನಾವಣೆ ಮಾಡೋದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ವರ್ಗದವರ ಮೀಸಲಾತಿ ಬಗ್ಗೆ ಮೋದಿಯವರಿಗೆ ಜ್ಞಾನವೇ ಇಲ್ಲ. ಮೋದಿಗೆ ಧೈರ್ಯ ಇದ್ದರೆ ಸುದ್ದಿಗೋಷ್ಠಿ ಕರೆಯಲಿ. ದೇಶ ಉದ್ದಾರ ಆಗಿದ್ರೆ ಮತ್ತೆ ನೀವ್ಯಾಕೆ ಪ್ರಧಾನಿ ಆಗಬೇಕು. ಎಲ್ಲಾ ಕಡೆ ಬಂದು ಯಾಕೆ ಇಷ್ಟು ಪ್ರಚಾರ ಮಾಡ್ತೀರಾ? ಮೋದಿಗೆ ಕಾಪಿ ಮಾಡಿದ್ದು ಬಿಟ್ರೆ ಬೇರೆ ಏನೂ ಗೊತ್ತಿಲ್ಲ ಎಂದು ಅವರು ಲೇವಡಿ ಮಾಡಿದರು.

ಗ್ರಾ.ಪಂ ನಲ್ಲಿ ನೀರು ಬಂದ್ರೆ ಮೋದಿ ಅಂತಾರೆ. ನೀರು ಬರದಿದ್ದರೆ ಅಧಿಕಾರಿಗಳ ಮೇಲೆ ಹಾಕುತ್ತಾರೆ. ಒಬ್ಬ ಹುಡುಗ ಉನ್ನತ ಶ್ರೇಣಿಯಲ್ಲಿ ಪಾಸ್ ಆದರೂ ಮೋದಿ ಅಂತಾರೆ. ರ‌್ಯಾಂಕ್ ಬರದಿದ್ದರೆ ವಿದ್ಯಾರ್ಥಿ ದಡ್ಡ ಎನ್ನುತ್ತಾರೆ ಎಂದು ಲಾಡ್ ಮಾರ್ಮಿಕವಾಗಿ ನುಡಿದರು.

ಬಿಜೆಪಿಯಲ್ಲಿ ಮೋದಿ ಬಿಟ್ಟರೆ ಬೇರೆ ಯಾರೂ ಇಲ್ಲವೇ ಎಂದು ಪ್ರಶ್ನಿಸಿದ ಅವರು ಮೋದಿ ಒಬ್ಬರೇನಾ ಬಿಜೆಪಿಯಲ್ಲಿ ಪ್ರಚಾರಕ್ಕೆ ಬರೋದು. ಮೋದಿ ಉದ್ದೇಶ ತಮ್ಮನ್ನು ತಾವು ಬ್ರಾಂಡ್‌ ಮಾಡಿಕೊಳ್ಳೋದು ಎಂದು ಅವರು ಕಿಡಿಕಾರಿದರು.

More articles

Latest article