ದರ್ಶನ್‌ ಅಂಡ್‌ ಗ್ಯಾಂಗ್ ಪೊಲೀಸ್‌ ಕಸ್ಟಡಿ ಅಂತ್ಯ : ನಾಲ್ವರಿಗೂ ಠಾಣೆಯಲ್ಲೇ ಮೆಡಿಕಲ್‌ ಟೆಸ್ಟ್‌!

Most read

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಈಗಾಗಲೇ ಪೊಲೀಸರ ವಿಚಾರಣೆಯಲ್ಲಿ ಎ1 ಆಗಿರುವ ನಟಿ ಪವಿತ್ರಾ ಗೌಡ ಸೇರಿದಂತೆ 13 ಜನರನ್ನು ನ್ಯಾಯಾಂಗ ಬಂದನಕ್ಕೆ ಕಳಿಸಿದ್ದು, ಇಂದು ದರ್ಶನ್‌ ಸೇರಿ ನಾಲ್ವರ ಪೊಲೀಸ್‌ ಕಸ್ಟಡಿ ಅಂತ್ಯವಾಗಿದೆ. ಅವರನ್ನು ಸಹ ಇಂದು  ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದು, ನಾಲ್ವರಿಗೂ ಠಾಣೆಯಲ್ಲೇ ಮೆಡಿಕಲ್‌ ಟೆಸ್ಟ್‌ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಪ್ರಕರಣದ ತನಿಖೆ ಸಲುವಾಗಿ ಮೂರು ಬಾರಿ ವಶಕ್ಕೆ ಪಡದಿರುವ ಕಾರಣ ಮತ್ತೊಮ್ಮೆ ಆರೋಪಿಗಳನ್ನು ಪೊಲೀಸರು ಸುಪರ್ದಿಗೆ ಪಡೆಯುವ ಸಾಧ್ಯತೆಗಳು ಕಡಿಮೆಯಿದೆ. ಹೀಗಾಗಿ ಪೊಲೀಸ್ ಕಸ್ಟಡಿ ಅಂತ್ಯವಾಗಿರಿವ ಹಿನ್ನಲೆ. ಆರೋಪಿಗಳಿಗೆ ಪೊಲೀಸ್ ಠಾಣೆಯಲ್ಲಿಯೇ ಮಲ್ಲತ್ತಹಳ್ಳಿಯ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಮೆಡಿಕಲ್ ಟೆಸ್ಟ್ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನ್ಯಾಯಾಲಯದ ಮುಂದೆ ಗುರುವಾರ  ದರ್ಶನ್, ಪ್ರದೂಶ್, ವಿನಯ್, ಧನರಾಜ್ ಹಾಜರು ಪಡಿಸಿ ಎರಡು ದಿನ ಪೊಲೀಸ್‌ ಕಸ್ಟಡಿ ವಸಕ್ಕೆ ಪಡೆದಿತ್ತು. ಪವಿತ್ರಗೌಡ ಸೇರಿ 13 ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿತ್ತು. ಇಂದು ದರ್ಶನ್‌ ದರ್ಶನ್ ಸೇರಿ ನಾಲ್ವರನ್ನು ಮತ್ತೆ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

More articles

Latest article