ವಾಹನ ಡಿಕ್ಕಿ: ದಲಿತ ಮುಖಂಡನ‌ ದುರ್ಮರಣ, ಕೊಲೆ ಶಂಕೆ

Most read

ಕೋಲಾರ: ಕಳೆದ ರಾತ್ರಿ ಶ್ರೀನಿವಾಸಪುರ ತಾಲ್ಲೂಕಿನ ಕಮತ್ಮುಪಲ್ಲಿ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪ್ರಭಾವಿ ದಲಿತ ಮುಖಂಡ ಸಿ. ನಾರಾಯಣಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ಧಾರೆ.

ಗಾಂಡ್ಲಹಳ್ಳಿ ನಿವಾಸಿ ಸಿ. ನಾರಾಯಣಸ್ವಾಮಿ (60) ತಮ್ಮ ದ್ವಿಚಕ್ರ ವಾಹನದಲ್ಲಿ ಗೌನಿಪಲ್ಲಿ ಪೋಲೀಸ್ ಠಾಣಾ ವ್ಯಾಪ್ತಿಗೆ ಬರುವ ಕಮತ್ಮುಪಲ್ಲಿ ತೆರಳುತ್ತಿದ್ದಾಗ ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಾರಾಯಣ ಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದ ನಾರಾಯಣಸ್ವಾಮಿ ತಾಲ್ಲೂಕಿನಲ್ಲಿ ಪ್ರಭಾವಿ ದಲಿತ ಮುಖಂಡನಾಗಿದ್ದು ಸುಮಾರು ನಲವತ್ತು ವರುಷಗಳಿಂದಲೂ ದಲಿತ ಪರ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದರು.

ಅಪಘಾತದ ಭೀಕರತೆಯನ್ನು ಕಂಡ ಹಲವಾರು ದಲಿತಪರ ಸಂಘಟನೆಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಇದು ರಸ್ತೆ ಅಪಘಾತವಲ್ಲವೆಂದೂ ಇದೊಂದು ವ್ಯವಸ್ಥಿತ ರೀತಿಯ ಕೊಲೆ ಎಂಬ ಅನುಮಾನವನ್ನು ವ್ಯಕ್ತಪಡಿಸಿವೆಯಲ್ಲದೇ ಜಿಲ್ಲಾ ರಕ್ಷಣಾಧಿಕಾರಿಗಳವರಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿವೆ.

More articles

Latest article