Sunday, September 8, 2024

ಉಪನ್ಯಾಸಕರಿಂದ ಉಪವಾಸ ಸತ್ಯಾಗ್ರಹ: ಅತಿಥಿ ಉಪನ್ಯಾಸಕ ಲೋಕೇಶ್ ಅಸ್ವಸ್ಥ

Most read

ರಾಜ್ಯದಲ್ಲಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸುವಂತೆ ನಾಲ್ಕು ದಿನದ ಹಿಂದೆ ಎಲ್ಲಾ ಅತಿಥಿ ಉಪನ್ಯಾಸಕರು ʼಬೆಂಗಳೂರು ಚಲೋʼ ಪಾದಯಾತ್ರೆ ಹಮ್ಮಿಕೊಂಡಿದ್ದರು. ತುಮಕೂರಿನಿಂದ ಹೊರಟ ಪಾದಯಾತ್ರೆ ನಿನ್ನೆ (ಬುಧವಾರ) ಬೆಂಗಳೂರಿನ ಪ್ರೀಡಂ ಪಾರ್ಕಿಗೆ ಬಂದು ತಲುಪಿದೆ.

ಇಂದು ಪ್ರೀಡಂ ಪಾರ್ಕಿನಲ್ಲಿ ಸಾವಿರಾರು ಮಂದಿ ಧರಣಿ ಕುಳಿತ ಉಪನ್ಯಾಸಕರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈ ವೇಳೆ ಅತಿಥಿ ಉಪನ್ಯಾಸಕ ಲೋಕೇಶ್ ಅಸ್ವಸ್ಥಗೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಲೋಕೇಶ್ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಇದನ್ನು ಓದಿ – ಅತಿಥಿ ಉಪನ್ಯಾಸಕರನ್ನು ಫ್ರೀಡಂ ಪಾರ್ಕಿಗೆ ಕರೆತರುತ್ತಿರುವ ಪೊಲೀಸರು!

More articles

Latest article