ಚನ್ನಪಟ್ಟಣ ಉಪಚುನಾವಣೆ | ಡಿಕೆ ಬ್ರದರ್ಸ್ ಪೈಕಿ ಯಾರೇ ಸ್ಪರ್ಧಿಸಿದರೂ ಸೋಲಿಸ್ತೀವಿ: ಆರ್.ಅಶೋಕ್

Most read

ಚನ್ನಪಟ್ಟಣದ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್‌ ಅಥವಾ ಡಿಕೆ ಸುರೇಶ್‌ ಇಬ್ಬರ ಪೈಕಿ ಯಾರೇ ಸ್ಪರ್ಧಿಸಿದರೂ ಸೋಲಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ಗೆ ಸವಾಲು ಹಾಕಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಬಿಜೆಪಿ ಆಗಬಹುದು ಅಥವಾ ಜೆಡಿಎಸ್ ಆಗಬಹುದು ಇಮ್ಮತದಿಂದ ಇಂದೇ ಅಭುರ್ಥಿಯನ್ನು ನಿಲ್ಲಿಸುತ್ತೇವೆ. ದೆಗಲಿಗೆ ಹೋದಾಗ ಕುಮಾರಸ್ವಾಮಿ ಕೂಡ ಹೇಳಿದ್ದಾರೆ ನಾವು ಚನ್ನಪಟ್ಟಣವನ್ನು ಗೆಲ್ಲಬೇಕು ಅಷ್ಟೇ ಎಂದು ಓಪನ್ ಮೈಂಡ್ ನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ

ಚನ್ನಪಟ್ಟಣದಲ್ಲಿ ದುಷ್ಟ ಸರ್ಕಾರ ಹಣದ ಹೊಳೆ ಹರಿಸುತ್ತೆ. ಯಾರೇ ಅಭ್ಯರ್ಥಿ ಆದ್ರೂ ಗೆಲ್ಲೋಣ ಎಂದು ಹೇಳಿದ್ದಾರೆ. ನಾವು, ಕುಮಾರಸ್ವಾಮಿ ಈ ವಿಚಾರದಲ್ಲಿ ಮುಕ್ತರಾಗಿದ್ದೇವೆ ಎಂದು ಆರ್ ಅಶೋಕ್‌ ಹೇಳಿದ್ದಾರೆ.

20 ವರ್ಷಗಳಿಂದ ಡಿಕೆ ಶಿವಕುಮಾರ್ ಚನ್ನಪಟ್ಟಣಕ್ಕೆ ಹೋಗಿಲ್ಲ. ಈಗ ನಾಟಕ ಮಾಡ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಂದಿದ್ದು 20 ಸಾವಿರ ಮತ. ಬಿಜೆಪಿ-ಜೆಡಿಎಸ್ಗೆ ಒಂದು ಲಕ್ಷದ ಮೇಲೆ ಮತಗಳು ಬಂದಿತ್ತು. 20 ಸಾವಿರ ಮತ ಹಾಕೋರಿಗೆ ನಮಸ್ಕಾರ ಹಾಕೋಕೆ ಹೋಗ್ತಾರಂತೆ. ಬೆಲೆ ಏರಿಕೆ ಮಾಡಿರೋದ್ರಿಂದ ಈ ಉಪಚುನಾವಣೆಯಲ್ಲಿ ಜನ ಇವರಿಗೆ 3 ನಾಮ ಹಾಕಬೇಕು ಎಂದು ಟೀಕಿಸಿದ್ದಾರೆ.

More articles

Latest article