Tuesday, September 17, 2024

ಯಶ್ ನಿರ್ಮಾಣ ಮಾಡುತ್ತಿದ್ದಾರೆನ್ನಲಾದ ಬಾಲಿವುಡ್ ನ ‘ರಾಮಯಣ’ ಸಿನಿಮಾ ಕಾಪಿರೈಟ್ಸ್ ಕಾರಣಕ್ಕೆ ಸ್ಥಗಿತ..!

Most read

ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾ ಬಗ್ಗೆ ಹೆವಿ ಎಕ್ಸ್ ಪೆಕ್ಟೇಷನ್ಸ್ ಇದೆ. ಸಿನಿಮಾ ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಮಾಡ್ತಾರಂತೆ ಎಂಬ ಸುದ್ದಿ ವೈರಲ್ ಆಗಿತ್ತು. ಆ ಬಳಿಕ ಇಲ್ಲ ರಾವಣನಾಗಿ ಅಲ್ಲ ಈ ಸಿನಿಮಾಗೆ ನಿರ್ಮಾಣದ ಹೊಣೆಯನ್ನೇ ಯಶ್ ಅವರು ಹೊತ್ತಿದ್ದಾರೆ ಎಂಬುದಾಗಿ ಮಾತುಕಥೆಗಳು ಬಂದವು. ನಮೀತ್ ಮಲ್ಹೋತ್ರಾ ಜೊತೆಗೆ ಯಶ್ ಕೂಡ ಒನ್ ಆಫ್ ದಿ ಪ್ರೊಡ್ಯೂಸರ್ ಎಂದೇ‌ ಹೇಳಲಾಗುತ್ತಿದೆ. ಇದೀಗ ಸಿನಿಮಾ ಮತ್ತೆ ಸುದ್ದಿಯಲ್ಲಿದ್ದು, ಬೇರೆ ವಿಚಾರಕ್ಕೇನೆ ಚರ್ಚೆಯಾಗುತ್ತಿದೆ.

ರಾಮಾಯಣ ಸಿನಿಮಾ ಬಿಗ್ ಬಜೆಟ್ ಸಿನಿಮಾ. 800 ಕೋಟಿಯಲ್ಲಿ ತಯಾರಾಗುತ್ತಿರುವ ಸಿನಿಮಾ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಶುರುವಾಗಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿದ್ದು ಸೆಟ್ ನಲ್ಲಿ ನಡೆದುಕೊಂಡು ಬರುತ್ತಿದ್ದ ಫೋಟೋ ಗಳು ವೈರಲ್ ಆಗಿದ್ದವು. ಆದರೆ ಈಗ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ.

ನಿತೇಶ್ ತಿವಾರಿ ರಾಮಾಯಣ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತಂಡಕ್ಕೆ ‘ಅಲ್ಲು ಮಂಟೇನಾ ಮೀಡಿಯಾ ವೆಂಚರ್ಸ್​ ಎಲ್​ಎಲ್​ಪಿ’ ಕಂಪನಿಯು ನೋಟಿಸ್​ ಕಳಿಸಿತ್ತು. ಅದರ ಅನ್ವಯ ‘ರಾಮಾಯಣ’ ಸಿನಿಮಾದ ನಿರ್ಮಾಪಕರು ಈ ಕಂಪನಿಯ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಸ್ಕ್ರಿಪ್ಟ್​ಗೆ ಸಂಬಂಧಿಸಿದ ಕೆಲವು ಹಕ್ಕುಗಳನ್ನು ಖರೀದಿಸಬೇಕಿತ್ತು. ಆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ನೋಟಿಸ್​ ಕಳಿಸಲಾಗಿತ್ತು. ಕಳೆದ ವಾರದಿಂದ ಶೂಟಿಂಗ್​ ನಿಲ್ಲಿಸಲಾಗಿದೆ. ಕಾನೂನಿನ ತೊಡಕುಗಳು ಬಗೆಹರಿದ ನಂತರವೇ ಶೂಟಿಂಗ್​ ಮುಂದುವರಿಸಲು ತೀರ್ಮಾನಿಸಲಾಗಿದೆ ಎನ್ನುತ್ತಿವೆ ಮೂಲಗಳು.

More articles

Latest article