ನವದೆಹಲಿ : ಸ್ಪೋರ್ಟ್ಸ್ ಬೈಕ್ ಸವಾರೆಯೊಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆದ ಆರೋಪ ಹೊತ್ತಿರುವ ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ಮಂಗಳವಾರ ರಾಜಸ್ಥಾನದ ರಾಜ್ಗಢದಲ್ಲಿ ಬಂಧಿಸಲಾಗಿದೆ ಎಂದು ಗುರುಗ್ರಾಮ ಪೊಲೀಸ್ ಆಯುಕ್ತ ಶಿಬಾಶ್ ಕಬಿರಾಜ್ ತಿಳಿಸಿದ್ದಾರೆ.
ಗುರುಗ್ರಾಮ ಪೊಲೀಸರು ಈ ಪ್ರಕರಣದಲ್ಲಿ ‘ಕೊಲೆ ಯತ್ನ’ದ (ಬಿಎನ್ಎಸ್ನ ಸೆಕ್ಷನ್ 109) ಆರೋಪವನ್ನು ಸೇರಿಸಿದ ನಂತರ ಈ ಬಂಧನವಾಗಿದೆ. ಈ ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆಯ ಅವಕಾಶವಿದೆ.
ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡ ಗುರುಗ್ರಾಮ ಪೊಲೀಸರು, ಈ ಹಿಂದೆ ಸೆಕ್ಟರ್-56 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎಸಿಪಿ (ಪ್ರಧಾನ ಕಚೇರಿ) ಅಭಿಲಕ್ಷ್ ಜೋಶಿ ಅವರ ಪ್ರಕಾರ, ಆರೋಪಿ ಚಾಲಕ ಕಲ್ಯಾಣ್ ಬೈನ್ಸ್ಲಾ ವಿರುದ್ಧ ಬಿಎನ್ಎಸ್ನ ಸೆಕ್ಷನ್ 281 (ಅಜಾಗರೂಕತೆಯಿಂದ ವಾಹನ ಚಲಾಯಿಸುವುದು) ಮತ್ತು ಸೆಕ್ಷನ್ 125 (ಗಾಯ ಉಂಟುಮಾಡುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಭಾನುವಾರ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದ ರಸ್ತೆ ಜಗಳದ ಘಟನೆಯ ನಂತರ, ಬೈನ್ಸ್ಲಾ ತನ್ನ ಕಾರನ್ನು ಸಿಯಾ ಎಂಬ ಸ್ಪೋರ್ಟ್ಸ್ ಬೈಕ್ ಸವಾರೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅವರು ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ಭಾನುವಾರ ಬೆಳಿಗ್ಗೆ ನಡೆದ ಈ ಘಟನೆಯು, ಬೈಕ್ ಸವಾರೆಯಾದ ಸಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವೀಡಿಯೊವನ್ನು ಹಂಚಿಕೊಂಡ ನಂತರ ಬೆಳಕಿಗೆ ಬಂದಿತು. ಅವರ ಮೋಟಾರ್ಸೈಕಲ್ ಮತ್ತು ಅವರ ಸಹ ಸವಾರರ ವಾಹನಗಳಿಗೆ ಅಳವಡಿಸಲಾಗಿದ್ದ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳಲ್ಲಿ, ಡಿಕ್ಕಿಯ ನಂತರ ಅವರು ಬೈಕ್ನಿಂದ ಕೆಳಗೆ ಬೀಳುವುದು ಮತ್ತು ಮೋಟಾರ್ಸೈಕಲ್ ರಸ್ತೆಯ ಮೇಲೆ ಹಲವಾರು ಮೀಟರ್ಗಳಷ್ಟು ಜಾರಿಕೊಂಡು ಹೋಗುವುದು ಕಂಡುಬರುತ್ತದೆ.
ಸಿಯಾ ಅವರು ತಮ್ಮ ಬೈಕಿಂಗ್ ಗುಂಪಿನ ಸದಸ್ಯರೊಂದಿಗೆ ‘ಏಪ್ರಿಲಿಯಾ ಆರ್ಎಸ್ 457’ ಬೈಕ್ ಚಲಾಯಿಸುತ್ತಿದ್ದಾಗ, ಬಿಳಿ ಬಣ್ಣದ ಸೆಡಾನ್ ಕಾರೊಂದು ಅವರಿಗೆ ಅಪಾಯಕಾರಿಯಾಗಿ ಹತ್ತಿರ ಬಂದಿತ್ತು ಎಂದು ಅವರು ತಿಳಿಸಿದ್ದಾರೆ. ಕಾರಿನಲ್ಲಿದ್ದವರು ಆಕ್ರಮಣಕಾರಿಯಾಗಿ ವರ್ತಿಸಿದರು ಮತ್ತು ಪದೇ ಪದೇ ಬೈಕ್ ನಿಲ್ಲಿಸುವಂತೆ ಸನ್ನೆ ಮಾಡಿದರು ಎಂದು ಅವರು ಆರೋಪಿಸಿದ್ದಾರೆ. ಅಂತರ ಕಾಯ್ದುಕೊಂಡು ವಾಹನ ಚಲಾಯಿಸುವಂತೆ ನಾನು ಅವರಿಗೆ ಹೇಳಿದೆ. ಆದರೆ ಅವರು ನನ್ನ ಬೈಕ್ ನಿಲ್ಲಿಸುವಂತೆ ಕೈ ಸನ್ನೆ ಮಾಡುತ್ತಲೇ ಇದ್ದರು ಎಂದು ಸಿಯಾ ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಯಾ ಅವರ ತಂದೆ ರೋಹ್ಶನ್ ಚೌಹಾಣ್ ಕೂಡ ಧ್ವನಿಗೂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗುವವರೆಗೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಕೊಲೆಯತ್ನ ಹಾಗೂ ಜೀವಕ್ಕೆ ಅಪಾಯ ತರುವಂತೆ ಅತಿವೇಗದ ಚಾಲನೆ ನಿಯಮಗಳ ಅಡಿಯಲ್ಲಿ ತನಿಖೆ ತೀವ್ರಗೊಂಡಿದೆ. ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವುದು ಸಾಬೀತಾದರೆ ಆರೋಪಿಗೆ ಜಾಮೀನು ರಹಿತ ಬಂಧನ ಹಾಗೂ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಗುರುಗ್ರಾಮ ಹಿಟ್ ಅಂಡ್ ರನ್ ಪ್ರಕರಣ : ಕಾರು ಚಾಲಕನ ಬಂಧನ, 10 ವರ್ಷ ಜೈಲು ಶಿಕ್ಷೆ ಸಾಧ್ಯತೆ
ನವದೆಹಲಿ : ಸ್ಪೋರ್ಟ್ಸ್ ಬೈಕ್ ಸವಾರೆಯೊಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆದ ಆರೋಪ ಹೊತ್ತಿರುವ ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ಮಂಗಳವಾರ ರಾಜಸ್ಥಾನದ ರಾಜ್ಗಢದಲ್ಲಿ ಬಂಧಿಸಲಾಗಿದೆ ಎಂದು ಗುರುಗ್ರಾಮ ಪೊಲೀಸ್ ಆಯುಕ್ತ ಶಿಬಾಶ್ ಕಬಿರಾಜ್ ತಿಳಿಸಿದ್ದಾರೆ.
ಗುರುಗ್ರಾಮ ಪೊಲೀಸರು ಈ ಪ್ರಕರಣದಲ್ಲಿ ‘ಕೊಲೆ ಯತ್ನ’ದ (ಬಿಎನ್ಎಸ್ನ ಸೆಕ್ಷನ್ 109) ಆರೋಪವನ್ನು ಸೇರಿಸಿದ ನಂತರ ಈ ಬಂಧನವಾಗಿದೆ. ಈ ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆಯ ಅವಕಾಶವಿದೆ.
ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡ ಗುರುಗ್ರಾಮ ಪೊಲೀಸರು, ಈ ಹಿಂದೆ ಸೆಕ್ಟರ್-56 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎಸಿಪಿ (ಪ್ರಧಾನ ಕಚೇರಿ) ಅಭಿಲಕ್ಷ್ ಜೋಶಿ ಅವರ ಪ್ರಕಾರ, ಆರೋಪಿ ಚಾಲಕ ಕಲ್ಯಾಣ್ ಬೈನ್ಸ್ಲಾ ವಿರುದ್ಧ ಬಿಎನ್ಎಸ್ನ ಸೆಕ್ಷನ್ 281 (ಅಜಾಗರೂಕತೆಯಿಂದ ವಾಹನ ಚಲಾಯಿಸುವುದು) ಮತ್ತು ಸೆಕ್ಷನ್ 125 (ಗಾಯ ಉಂಟುಮಾಡುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಭಾನುವಾರ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದ ರಸ್ತೆ ಜಗಳದ ಘಟನೆಯ ನಂತರ, ಬೈನ್ಸ್ಲಾ ತನ್ನ ಕಾರನ್ನು ಸಿಯಾ ಎಂಬ ಸ್ಪೋರ್ಟ್ಸ್ ಬೈಕ್ ಸವಾರೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅವರು ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ಭಾನುವಾರ ಬೆಳಿಗ್ಗೆ ನಡೆದ ಈ ಘಟನೆಯು, ಬೈಕ್ ಸವಾರೆಯಾದ ಸಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವೀಡಿಯೊವನ್ನು ಹಂಚಿಕೊಂಡ ನಂತರ ಬೆಳಕಿಗೆ ಬಂದಿತು. ಅವರ ಮೋಟಾರ್ಸೈಕಲ್ ಮತ್ತು ಅವರ ಸಹ ಸವಾರರ ವಾಹನಗಳಿಗೆ ಅಳವಡಿಸಲಾಗಿದ್ದ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳಲ್ಲಿ, ಡಿಕ್ಕಿಯ ನಂತರ ಅವರು ಬೈಕ್ನಿಂದ ಕೆಳಗೆ ಬೀಳುವುದು ಮತ್ತು ಮೋಟಾರ್ಸೈಕಲ್ ರಸ್ತೆಯ ಮೇಲೆ ಹಲವಾರು ಮೀಟರ್ಗಳಷ್ಟು ಜಾರಿಕೊಂಡು ಹೋಗುವುದು ಕಂಡುಬರುತ್ತದೆ.
ಸಿಯಾ ಅವರು ತಮ್ಮ ಬೈಕಿಂಗ್ ಗುಂಪಿನ ಸದಸ್ಯರೊಂದಿಗೆ ‘ಏಪ್ರಿಲಿಯಾ ಆರ್ಎಸ್ 457’ ಬೈಕ್ ಚಲಾಯಿಸುತ್ತಿದ್ದಾಗ, ಬಿಳಿ ಬಣ್ಣದ ಸೆಡಾನ್ ಕಾರೊಂದು ಅವರಿಗೆ ಅಪಾಯಕಾರಿಯಾಗಿ ಹತ್ತಿರ ಬಂದಿತ್ತು ಎಂದು ಅವರು ತಿಳಿಸಿದ್ದಾರೆ. ಕಾರಿನಲ್ಲಿದ್ದವರು ಆಕ್ರಮಣಕಾರಿಯಾಗಿ ವರ್ತಿಸಿದರು ಮತ್ತು ಪದೇ ಪದೇ ಬೈಕ್ ನಿಲ್ಲಿಸುವಂತೆ ಸನ್ನೆ ಮಾಡಿದರು ಎಂದು ಅವರು ಆರೋಪಿಸಿದ್ದಾರೆ. ಅಂತರ ಕಾಯ್ದುಕೊಂಡು ವಾಹನ ಚಲಾಯಿಸುವಂತೆ ನಾನು ಅವರಿಗೆ ಹೇಳಿದೆ. ಆದರೆ ಅವರು ನನ್ನ ಬೈಕ್ ನಿಲ್ಲಿಸುವಂತೆ ಕೈ ಸನ್ನೆ ಮಾಡುತ್ತಲೇ ಇದ್ದರು ಎಂದು ಸಿಯಾ ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಯಾ ಅವರ ತಂದೆ ರೋಹ್ಶನ್ ಚೌಹಾಣ್ ಕೂಡ ಧ್ವನಿಗೂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗುವವರೆಗೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಕೊಲೆಯತ್ನ ಹಾಗೂ ಜೀವಕ್ಕೆ ಅಪಾಯ ತರುವಂತೆ ಅತಿವೇಗದ ಚಾಲನೆ ನಿಯಮಗಳ ಅಡಿಯಲ್ಲಿ ತನಿಖೆ ತೀವ್ರಗೊಂಡಿದೆ. ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವುದು ಸಾಬೀತಾದರೆ ಆರೋಪಿಗೆ ಜಾಮೀನು ರಹಿತ ಬಂಧನ ಹಾಗೂ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

