ಕೋಲಾರ : ಕೋಲಾರ ಜಿಲ್ಲಾ ಸರ್ಕಾರಿ ನರಸಿಂಹರಾಜ ( ಎಸ್ ಏನ್ ಆರ್) ಆಸ್ಪತ್ರೆಯ ಜಿಲ್ಲಾ ಶಾಸ್ತ್ರಚಿಕಿತ್ಸಕರಾಗಿ ಡಾ. ಆರ್ ಮಹಮ್ಮದ್ ಶರೀಫ್ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಡಾ. ಶರೀಫ್ ʼಕನ್ನಡ ಪ್ಲಾನೆಟ್ʼ ನೊಂದಿಗೆ ಮಾತನಾಡಿ, ನಮ್ಮಲ್ಲಿ ಬರುವ ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಹಾಗೂ ಮಾನವೀಯತೆಯ ಸೇವೆಯನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ನಮ್ಮಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಗಳನ್ನು ಬಳಸಿಕೊಂಡು ರೋಗಿಗಳಿಗೆ ಚಿಕಿತ್ಸೆ ಹಾಗೂ ಸುಗಮ ಸೇವೆಯನ್ನು ವಹಿಸಲು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ಏನೇ ಆಗಲಿ ಜಿಲ್ಲಾ ಪ್ರಮುಖ ಕೇಂದ್ರವಾಗಿರುವ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಒಂದಷ್ಟು ಅಪಸ್ವರಗಳ ಮಧ್ಯೆಯೂ ದಿನನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಹೊಸ ಜಿಲ್ಲಾ ಶಸ್ತ್ರ ಚಿಕಿತ್ಸಕರ ನೇತೃತ್ವದಲ್ಲಿ ಇನ್ನಷ್ಟು ಉತ್ತಮ ಸೇವೆ ಸಾರ್ವಜನಿಕರಿಗೆ ದೊರಕುವಂತಾಗಲಿ ಎಂದು ಎಲ್ಲರ ಅಭಿಲಾಶೆ.

