ಪದೇ ಪದೇ ಈ ರೀತಿ ಔಟ್ ಆಗುತ್ತಿರುವುದು ನಿರಾಶಾದಾಯಕ : ಪಂತ್ ಬ್ಯಾಟಿಂಗ್ ಶೈಲಿ ಬಗ್ಗೆ ಅಶ್ವಿನ್ ಕಠಿಣ ವಿಮರ್ಶೆ

ಬೆಂಗಳೂರು : ರಿಷಭ್ ಪಂತ್ ತಮ್ಮ ಆಟವನ್ನು ಶತಕವಾಗಿ ಪರಿವರ್ತಿಸುವ ಮುನ್ನವೇ ಬೇಜವಾಬ್ದಾರಿಯಿಂದ ಔಟ್ ಆಗುವ ಶೈಲಿಯ ಬಗ್ಗೆ ಭಾರತದ ಮಾಜಿ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.

ಮುಲ್ಲನ್ಪುರದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಪಂತ್ 81 ರನ್ ಗಳಿಸಿದ್ದಾಗ, ಬೌಂಡರಿ ಲೈನ್ ಬಳಿ ಫೀಲ್ಡರ್ಗಳನ್ನು ನಿಲ್ಲಿಸಿದ್ದರೂ ಹಶ್ಮತುಲ್ಲಾ ಶಾಹಿದಿ ಬೌಲಿಂಗ್‌ನಲ್ಲಿ ಅನಗತ್ಯ ಶಾಟ್‌ಗೆ ಕೈಹಾಕಿ ವಿಕೆಟ್ ಒಪ್ಪಿಸಿದ್ದರು. ಈ ಮೂಲಕ ಟೆಸ್ಟ್ ವೃತ್ತಿಜೀವನದಲ್ಲಿ 9ನೇ ಬಾರಿಗೆ 80-99 ರನ್‌ಗಳ ನಡುವೆ ಔಟಾಗಿ ಶತಕ ವಂಚಿತರಾಗಿದ್ದಾರೆ.

ತಾಳ್ಮೆಯ ಕೊರತೆಯನ್ನು ಪ್ರಶ್ನಿಸಿದ ಅಶ್ವಿನ್

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಸಮಾಧಾನ ಹೊರಹಾಕಿರುವ ಅಶ್ವಿನ್, “ನೀವು 80 ಮತ್ತು 90 ರನ್ ಗಳಿಸಿರುವಾಗ ಇಂತಹ ಶಾಟ್ ಆಡುವುದು ನಿಜಕ್ಕೂ ಆಶ್ಚರ್ಯ ತರುತ್ತದೆ. ಇನ್ನೊಂದು 20 ರನ್‌ಗಳಿಗಾಗಿ ತಾಳ್ಮೆಯಿಂದ ಆಡಲು ನಿಮಗೆ ಸಾಧ್ಯವಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಪಂತ್ ಈಗಾಗಲೇ 50ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಿರುವುದು ನಿರಾಶಾದಾಯಕ ಮತ್ತು ಇವು ತಂಡಕ್ಕೆ ದೊಡ್ಡ ನಷ್ಟ ಉಂಟುಮಾಡುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಅವರು ಈಗಾಗಲೇ ಹಲವು ಸಂದರ್ಭಗಳಲ್ಲಿ ತಂಡಕ್ಕಾಗಿ ಪರಿಸ್ಥಿತಿಗೆ ತಕ್ಕಂತೆ ಆಡುವುದನ್ನು ಕಲಿಯಬೇಕಾಗಿದೆ.” – ಆರ್‌‌. ಅಶ್ವಿನ್

ಟೀಕೆಗಳ ನಡುವೆಯೂ ಅಶ್ವಿನ್ ಪಂತ್ ಅವರನ್ನು ‘ಅತ್ಯುತ್ತಮ ಟೆಸ್ಟ್ ಬ್ಯಾಟರ್’ ಎಂದು ಶ್ಲಾಘಿಸಿದ್ದಾರೆ. “ಪಂತ್ ಅವರ ಡಿಫೆಂಡ್ ಮಾಡುವ ಶೈಲಿ ಎಷ್ಟು ಚೆನ್ನಾಗಿರುತ್ತದೆ ಎಂದರೆ ಸುನಿಲ್ ಗವಾಸ್ಕರ್ ಅವರೂ ಅದಕ್ಕೆ ಫಿದಾ ಆಗುತ್ತಾರೆ. ಚೆಂಡು ಎಷ್ಟು ವೇಗವಾಗಿ ಬಂದರೂ, ಅದನ್ನು ಎದುರಿಸಲು ಅವರ ಬಳಿ ಸಾಕಷ್ಟು ಸಮಯವಿರುತ್ತದೆ,” ಎಂದು ಹೊಗಳಿದ್ದಾರೆ.

ಕೊನೆಯದಾಗಿ, ಟೆಸ್ಟ್ ಬ್ಯಾಟಿಂಗ್ ಎಂದರೆ ಆಕ್ರಮಣ ಮಾಡಲು ಸರಿಯಾದ ಕ್ಷಣಗಳನ್ನು ಆಯ್ಕೆ ಮಾಡಿಕೊಳ್ಳುವುದು. ಯಶಸ್ವಿ ಟೆಸ್ಟ್ ಕ್ರಿಕೆಟ್ ಎಂಬುದು ಬೌಂಡರಿ ಫೀಲ್ಡರ್ಗಳ ಮೇಲಿಂದ ಚೆಂಡನ್ನು ಸಿಡಿಸುವ ಸಾಹಸಕ್ಕಿಂತ, ಪರಿಸ್ಥಿತಿಗೆ ತಕ್ಕಂತೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಆಟದ ಮೇಲೆ ನಿರ್ಮಾಣವಾಗುತ್ತದೆ ಎಂದು ಹೇಳುವ ಮೂಲಕ ಅಶ್ವಿನ್ ಪಂತ್‌ಗೆ ಕಿವಿಮಾತು ಹೇಳಿದ್ದಾರೆ.

ಬೆಂಗಳೂರು : ರಿಷಭ್ ಪಂತ್ ತಮ್ಮ ಆಟವನ್ನು ಶತಕವಾಗಿ ಪರಿವರ್ತಿಸುವ ಮುನ್ನವೇ ಬೇಜವಾಬ್ದಾರಿಯಿಂದ ಔಟ್ ಆಗುವ ಶೈಲಿಯ ಬಗ್ಗೆ ಭಾರತದ ಮಾಜಿ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.

ಮುಲ್ಲನ್ಪುರದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಪಂತ್ 81 ರನ್ ಗಳಿಸಿದ್ದಾಗ, ಬೌಂಡರಿ ಲೈನ್ ಬಳಿ ಫೀಲ್ಡರ್ಗಳನ್ನು ನಿಲ್ಲಿಸಿದ್ದರೂ ಹಶ್ಮತುಲ್ಲಾ ಶಾಹಿದಿ ಬೌಲಿಂಗ್‌ನಲ್ಲಿ ಅನಗತ್ಯ ಶಾಟ್‌ಗೆ ಕೈಹಾಕಿ ವಿಕೆಟ್ ಒಪ್ಪಿಸಿದ್ದರು. ಈ ಮೂಲಕ ಟೆಸ್ಟ್ ವೃತ್ತಿಜೀವನದಲ್ಲಿ 9ನೇ ಬಾರಿಗೆ 80-99 ರನ್‌ಗಳ ನಡುವೆ ಔಟಾಗಿ ಶತಕ ವಂಚಿತರಾಗಿದ್ದಾರೆ.

ತಾಳ್ಮೆಯ ಕೊರತೆಯನ್ನು ಪ್ರಶ್ನಿಸಿದ ಅಶ್ವಿನ್

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಸಮಾಧಾನ ಹೊರಹಾಕಿರುವ ಅಶ್ವಿನ್, “ನೀವು 80 ಮತ್ತು 90 ರನ್ ಗಳಿಸಿರುವಾಗ ಇಂತಹ ಶಾಟ್ ಆಡುವುದು ನಿಜಕ್ಕೂ ಆಶ್ಚರ್ಯ ತರುತ್ತದೆ. ಇನ್ನೊಂದು 20 ರನ್‌ಗಳಿಗಾಗಿ ತಾಳ್ಮೆಯಿಂದ ಆಡಲು ನಿಮಗೆ ಸಾಧ್ಯವಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಪಂತ್ ಈಗಾಗಲೇ 50ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಿರುವುದು ನಿರಾಶಾದಾಯಕ ಮತ್ತು ಇವು ತಂಡಕ್ಕೆ ದೊಡ್ಡ ನಷ್ಟ ಉಂಟುಮಾಡುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಅವರು ಈಗಾಗಲೇ ಹಲವು ಸಂದರ್ಭಗಳಲ್ಲಿ ತಂಡಕ್ಕಾಗಿ ಪರಿಸ್ಥಿತಿಗೆ ತಕ್ಕಂತೆ ಆಡುವುದನ್ನು ಕಲಿಯಬೇಕಾಗಿದೆ.” – ಆರ್‌‌. ಅಶ್ವಿನ್

ಟೀಕೆಗಳ ನಡುವೆಯೂ ಅಶ್ವಿನ್ ಪಂತ್ ಅವರನ್ನು ‘ಅತ್ಯುತ್ತಮ ಟೆಸ್ಟ್ ಬ್ಯಾಟರ್’ ಎಂದು ಶ್ಲಾಘಿಸಿದ್ದಾರೆ. “ಪಂತ್ ಅವರ ಡಿಫೆಂಡ್ ಮಾಡುವ ಶೈಲಿ ಎಷ್ಟು ಚೆನ್ನಾಗಿರುತ್ತದೆ ಎಂದರೆ ಸುನಿಲ್ ಗವಾಸ್ಕರ್ ಅವರೂ ಅದಕ್ಕೆ ಫಿದಾ ಆಗುತ್ತಾರೆ. ಚೆಂಡು ಎಷ್ಟು ವೇಗವಾಗಿ ಬಂದರೂ, ಅದನ್ನು ಎದುರಿಸಲು ಅವರ ಬಳಿ ಸಾಕಷ್ಟು ಸಮಯವಿರುತ್ತದೆ,” ಎಂದು ಹೊಗಳಿದ್ದಾರೆ.

ಕೊನೆಯದಾಗಿ, ಟೆಸ್ಟ್ ಬ್ಯಾಟಿಂಗ್ ಎಂದರೆ ಆಕ್ರಮಣ ಮಾಡಲು ಸರಿಯಾದ ಕ್ಷಣಗಳನ್ನು ಆಯ್ಕೆ ಮಾಡಿಕೊಳ್ಳುವುದು. ಯಶಸ್ವಿ ಟೆಸ್ಟ್ ಕ್ರಿಕೆಟ್ ಎಂಬುದು ಬೌಂಡರಿ ಫೀಲ್ಡರ್ಗಳ ಮೇಲಿಂದ ಚೆಂಡನ್ನು ಸಿಡಿಸುವ ಸಾಹಸಕ್ಕಿಂತ, ಪರಿಸ್ಥಿತಿಗೆ ತಕ್ಕಂತೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಆಟದ ಮೇಲೆ ನಿರ್ಮಾಣವಾಗುತ್ತದೆ ಎಂದು ಹೇಳುವ ಮೂಲಕ ಅಶ್ವಿನ್ ಪಂತ್‌ಗೆ ಕಿವಿಮಾತು ಹೇಳಿದ್ದಾರೆ.

More articles

Latest article

Most read