ರಾಜ್ಯಪಾಲರು ದೆಹಲಿಯ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ: ಸಚಿವ ಕೃಷ್ಣ ಬೈರೇಗೌಡ

Most read

ರಾಜ್ಯಪಾಲರು ಪ್ರತಿ ಕನ್ನಡಿಗನ ಮೇಲೆ ದಾಳಿ ಮಾಡಿದ್ದಾರೆ. ಅವರು ದೆಹಲಿ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುಲಾಮರಾಗಿ ಕೆಲಸ ಮಾಡುವವರು ಬೇಕು ಕೇಂದ್ರಕ್ಕೆ. ನಮ್ಮ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ತೆರಿಗೆ, ಕಾವೇರಿ, ಕೃಷ್ಣ, ಮಹಾದಾಯಿ ವಿಚಾರದಲ್ಲಿ ಹೋರಾಟ ಮಾಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹೀಗಾಗಿ ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರ ಬುಡಮೇಲು ಮಾಡಲು ಹೊರಟಿದ್ದಾರೆ. ಕನ್ನಡಿಗರ ಮೇಲೆ ದೌರ್ಜನ್ಯ ಮಾಡಲು ಹೊರಟಿದ್ದಾರೆ. 17(A) ನಲ್ಲಿ ರಾಜ್ಯಪಾಲರು ಜನಪ್ರತಿನಿಧಿಗಳ ವಿರುದ್ಧ ವಿಚಾರಣೆಗೆ ಅನುಮತಿ ಹೇಗೆ ನೀಡಬೇಕು ಎಂಬ ಬಗ್ಗೆ ನಿಯಮ ಇದೆ. ರಾಜ್ಯಪಾಲರು ಈಗ ನೀಡಿರುವ ಆದೇಶ ಕಾನೂನುಬಾಹಿರ. ಸಂವಿಧಾನ ವಿರುದ್ಧ, ಅಪಚಾರ ಮಾಡಿದವರನ್ನ ಘನತೆವೆತ್ತ ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಈ ರಾಜ್ಯಪಾಲರು ನಾಲಾಯಕ್ಕು, ಬಿಜೆಪಿ ಏಜೆಂಟ್ ಆಗಿದ್ದಾರೆ. ಹೀಗಾಗಿ ಅವರಿಗೆ ಮಾನ, ಮರ್ಯಾದೆ ಇದ್ಯಾ? ಇವರು ರಾಜ್ಯ ಬಿಟ್ಟು ತೊಲಗಲಿ. ಕುಮಾರಸ್ವಾಮಿ, ನಿರಾನಿ, ಜೊಲ್ಲೆ, ಜನಾರ್ದನ ರೆಡ್ಡಿ ಮೇಲೆ ಲೋಕಾಯುಕ್ತದವರು ವಿಚಾರಣೆಗೆ ಅನುಮತಿ ಕೇಳಿದ್ದಾರೆ. ರಾಜ್ಯಪಾಲರು ಇದಕ್ಕೆ ಅನುಮತಿ ನೀಡದೇ, ಈ ಮನವಿಯನ್ನು ಕೆಳಗಡೆ ಹಾಕೊಂಡು ಏಕೆ ಕೂತಿದ್ದಾರೆ? ರಾಜ್ಯಪಾಲರು ಬಿಜೆಪಿಯ ಏಜೆಂಟಾಗಿ ಕೆಲಸ ಮಾಡಲು ಇದ್ದಾರಾ? ಕುಮಾರಸ್ವಾಮಿ ರಾಜೀನಾಮೆ ಏಕೆ ಕೇಳುತ್ತಿಲ್ಲ? ಎಂದು ಕೇಳಿದ್ದಾರೆ.

More articles

Latest article