ಕರ್ನಾಟಕದ ಕನ್ನಡ, ತುಳು, ಕೊಂಕಣಿ, ಕೊಡವ, ಬಂಜಾರ ಹಾಗೂ ಇತರೆಲ್ಲಾ ಭಾಷೆ, ಸಮುದಾಯಗಳ ಬಂಧುಗಳಲ್ಲಿ ನಮ್ರ ವಿನಂತಿ.

Most read

ಒಬ್ಬ ಪ್ರಜ್ಞಾವಂತ ಕನ್ನಡಿಗ

ನೀವೆಲ್ಲರೂ ಮನಸ್ಸು ಮಾಡಿ ಈ ನಾಡನ್ನು, ದೇಶವನ್ನು ಉಳಿಸಬೇಕು, ನಮ್ಮ ಸಂಸ್ಕೃತಿ, ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಬೇಕು.

  1. ಬಿಜೆಪಿ ಗೆದ್ದರೆ ಕರ್ನಾಟಕ ಗುಜರಾತಿಗಳ ಸೊತ್ತಾಗುತ್ತದೆ. ಈಗಾಗಲೆ ಗುಜರಾತಿಗಳು ನಮ್ಮ ಆಸ್ತಿಗಳನ್ನು ಕಬಳಿಸುತ್ತಿದ್ದಾರೆ. ಮಾರವಾಡಿಗಳು ಗಿರವಿ ಅಂಗಡಿಗಳನ್ನು ತೆರೆದು ನಮ್ಮ ಹೆಣ್ಣು ಮಕ್ಕಳ ಒಡವೆಗಳನ್ನು, ಕೆಲವು ಕಡೆ ಮಾಂಗಲ್ಯ ಸರಗಳನ್ನು ಗಿರವಿ ಇಟ್ಟುಕೊಂಡು ಬಡ್ಡಿ, ಚಕ್ರ ಬಡ್ಡಿ, ಸುಸ್ತಿ ಬಡ್ಡಿ ಹಾಕಿ ಸಾಲ ತೀರಿಸಲಾಗದಂತೆ ಮಾಡಿ ಒಡವೆ ಲಪಟಾಯಿಸುತ್ತಿದ್ದಾರೆ.
  2. ಗುಜರಾತಿಗಳು ಕರ್ನಾಟಕದ ಎಲ್ಲಾ ನಗರ, ಪಟ್ಟಣಗಳಲ್ಲಿ ನೆಲೆಸಿ ನಾವು ದುಡಿದ ಸಂಪತ್ತನ್ನೆಲ್ಲ ಕೊಳ್ಳೆ ಹೊಡೆಯುತ್ತಿದ್ದಾರೆ. ಕೊರೋನ ಸಂದರ್ಭದಲ್ಲಿ ಕಳಪೆ ಔಷಧ, ಕಳಪೆ ಮಾಸ್ಕು ಸಪ್ಲೈ ಮಾಡಿ ನಮ್ಮ ಜನರನ್ನು ಕೊಂದವರು ಗುಜರಾತಿಗಳೆ. ಮೋದಿ, ಅಮಿತ್ ಶಾ, ಅದಾನಿ, ಅಂಬಾನಿ, ಡಿ ಡಿ ಮಾರ್ಟ್‌ ನ ಧಮಾನಿ ಎಲ್ಲರೂ ಗುಜರಾತಿಗಳೆ. ಬಿಜೆಪಿ ಸೋತರೆ ಮಾತ್ರ ಕರ್ನಾಟಕ ಉಳಿಯುತ್ತದೆ. ಭಾರತ ಉಳಿಯುತ್ತದೆ. ನಾವು ಕನ್ನಡಿಗರು ಬಿಜೆಪಿಯನ್ನು ಸೋಲಿಸಿ ತಲೆ ಎತ್ತಿ ಬಾಳಬೇಕಾ? ಅಥವಾ ಗುಜರಾತಿ/ಮಾರವಾಡಿಗಳ ಗುಲಾಮರಾಗಿ ನಾಶವಾಗಬೇಕಾ? ಎಂದು ಓಟು ಹಾಕುವ ಮುನ್ನ ದಯಮಾಡಿ ತೀರ್ಮಾನಿಸಿ.
  3. ಬಿಜೆಪಿಯವರು 407 ಸೀಟು ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಯಾಕೆ ಗೊತ್ತಾ? 407 ಸೀಟು ಗೆದ್ದರೆ ಲೋಕಸಭೆಯಲ್ಲಿ ಈಗ ಇರುವ 543 ಸೀಟುಗಳ ಬದಲಾಗಿ, 800-1000 ಸೀಟುಗಳಿಗೆ ಹೆಚ್ಚಿಸಿಕೊಳ್ಳುತ್ತಾರೆ. ಉತ್ತರದ ರಾಜ್ಯಗಳ ಸೀಟುಗಳ ಸಂಖ್ಯೆ ಈಗ ಇರುವುದಕ್ಕಿಂತ ಡಬಲ್ ಆಗುತ್ತವೆ. ನಮ್ಮಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಕರ್ನಾಟಕ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣದ ಎಲ್ಲಾ ರಾಜ್ಯಗಳಿಂದಲೂ ಒಟ್ಟು 5 ಸೀಟುಗಳೂ ಹೆಚ್ಚಾಗುವುದಿಲ್ಲ. ಪರಿಸ್ಥಿತಿ ಹೀಗಾದರೆ ನಮ್ಮ ಎಂಪಿಗಳಿಗೆ ಕವಡೆ ಕಾಸಿನ ಬೆಲೆಯೂ ಇರುವುದಿಲ್ಲ. ನಮ್ಮ ಸಂಕಟಗಳಿಗೆ ಕಿವಿಕೊಡುವವರೂ ಇರುವುದಿಲ್ಲ.
  4. ದೇಶಕ್ಕೆ 100 ರೂಪಾಯಿ ತೆರಿಗೆ ಬಂದರೆ ಅದರಲ್ಲಿ 65 ರೂಪಾಯಿಯನ್ನು ದಕ್ಷಿಣ ಭಾರತದ ರಾಜ್ಯಗಳೆ ಕೊಡುತ್ತವೆ. ಆದರೂ ನಮ್ಮನ್ನು ಗುಲಾಮರಂತೆ ನೋಡುತ್ತಾರೆ. ಓಟು ಹಾಕುವ ನಮ್ಮ ಹಿರಿಯರು ಮಾಡಿದ ಹೋರಾಟವನ್ನು ನೆನಪಿಸಿಕೊಳ್ಳಿ, ಮೋದಿ ಪಟಾಲಮ್ಮಿನ ಉತ್ತರ ಭಾರತದ ದರ್ಬಾರನ್ನು ಅಂತ್ಯಗಾಣಿಸಿ.
  5. ಮೋದಿಯವರು 407 ಸೀಟು ಕೊಡಿ ಎಂದು ಕೇಳುತ್ತಿದ್ದಾರೆ. 407 ಸೀಟು ಬಂದರೆ ಸಂವಿಧಾನ ಬದಲಾಯಿಸುತ್ತಾರೆ. ಸಂವಿಧಾನ ಬದಲಾಯಿಸಿ ನಮ್ಮ ಭೂಮಿಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಬಲವಂತವಾಗಿ ಕಿತ್ತುಕೊಳ್ಳುವ ಕಾನೂನು ತರುತ್ತಾರೆ. ನಮ್ಮ ಬೆಟ್ಟ, ಕಾಡು, ನದಿ, ಸಮುದ್ರ ಈ ಯಾವುದರ ಮೇಲೂ ನಮಗೆ ಹಕ್ಕೇ ಇಲ್ಲದಂತೆ ಮಾಡುತ್ತಾರೆ. ಬಾಯಿ ಬಿಟ್ಟರೆ ಜೈಲಿಗೆ ಹಾಕುತ್ತಾರೆ. ಗುಂಡು ಹಾರಿಸಿ ಕೊಲ್ಲುತ್ತಾರೆ. ಮುಂದೆ ಈ ನೆಲದಲ್ಲಿ ನಮ್ಮ ಮಕ್ಕಳು ಬದುಕಬೇಕಾ? ಇಲ್ಲ ಜೈಲುಗಳಲ್ಲಿರಬೇಕಾ? ಯೋಚನೆ ಮಾಡಿ ಓಟು ಹಾಕಿ.
  6. ಸಂವಿಧಾನ ಬದಲಾಯಿಸಿ, ಹಿಂದೆ ಬ್ರಾಹ್ಮಣರು ಮಾಡಿದ್ದ ಮನುವಾದಿ ನಿಯಮಗಳನ್ನು ಮತ್ತೆ ಜಾರಿಗೆ ತರುತ್ತಾರೆ. 7 ವರ್ಷದ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕು, ಅಕಸ್ಮಾತ್ ಗಂಡ ಸತ್ತರೆ ಹೆಣ್ಣು ಮಗುವನ್ನು ಬೆಂಕಿ ಹಚ್ಚಿ ಕೊಲ್ಲಬೇಕು, ಅಥವಾ ಇಡೀ ಜೀವನಪೂರ್ತಿ ತಲೆ ಕೂದಲು ಬೋಳಿಸಿಕೊಂಡು ಕತ್ತಲಲ್ಲೆ ಬದುಕಬೇಕು, ಹೆಣ್ಣು ಮಕ್ಕಳು ಹೊರಗೆ ಕೆಲಸ ಮಾಡಬಾರದು, ಶೂದ್ರರಿಗೆ ಉದ್ಯೋಗ ಮಾಡುವ ಅಧಿಕಾರವಿಲ್ಲ. ಒಕ್ಕಲಿಗರು, ಲಿಂಗಾಯತರು, ದಲಿತರು, ಮಡಿವಾಳರು, ತಿಗಳರು, ವಿಶ್ವಕರ್ಮರು, ಸವಿತಾ ಸಮಾಜದವರು, ಗೊಲ್ಲರು, ಹೆಳವರು, ನಾಯಕರು, ಪರಿವಾರದವರು, ಬೆಸ್ತರು, ಈಡಿಗರು, ಬಿಲ್ಲವರು, ಕುರುಬರು ಮುಂತಾದ ಸಕಲೆಂಟು ಜಾತಿಗಳ ಜನರ ಮಕ್ಕಳು ಓದಬಾರದು, ಓದಿ ಉದ್ಯೋಗಕ್ಕೆ ಹೋಗಬಾರದು ಎಂಬ ಕಾನೂನು ತರಲು ತೋಳಗಳಂತೆ ಹೊಂಚು ಹಾಕುತ್ತಿದ್ದಾರೆ. ಅದಕ್ಕಾಗಿ 407 ಸೀಟು ಗೆಲ್ಲಿಸಿ ಎಂದು ನಮಗೆ ಮಂಕು ಬೂದಿ ಹಾಕುತ್ತಿದ್ದಾರೆ.
  7. ಮುಸ್ಲಿಮರಿಗೆ ಬುದ್ಧಿ ಕಲಿಸಬೇಕಾದರೆ 407 ಸೀಟು ಗೆಲ್ಲಿಸಿ ಎನ್ನುತ್ತಾರೆ. ಇದಂತೂ ದೊಡ್ಡ ಮೋಸ. ಬಿಜೆಪಿ ಮತ್ತು ಆರೆಸ್ಸೆಸ್‌ನ ದೊಡ್ಡ ನಾಯಕರ ಹೆಣ್ಣು ಮಕ್ಕಳೆಲ್ಲ ಮುಸ್ಲಿಮರನ್ನು ಮದುವೆ ಮಾಡಿಕೊಂಡಿದ್ದಾರೆ. ಅಷ್ಟೆ ಅಲ್ಲ ಮೋದಿ ಸರ್ಕಾರವು ತಾಲಿಬಾನಿಗಳ ಫ್ರೆಂಡ್‌ಶಿಪ್ ಬೆಳೆಸಿದೆ. ಅಫಘನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ ಮೋದಿ ಸರ್ಕಾರ 50,000 ಟನ್ ಗೋದಿಯನ್ನು ಫ್ರೀಯಾಗಿ ಕಳಿಸಿಕೊಟ್ಟಿದೆ. ಸಾವಿರಾರು ಟನ್ ಔಷಧಿಯನ್ನು ಸಹ ಫ್ರೀಯಾಗಿ ಕಳಿಸಿಕೊಡುತ್ತಿದೆ. ಬಿಜೆಪಿ ಆರೆಸ್ಸೆಸ್ಸಿನ ಮನಸ್ಥಿತಿ ಮತ್ತು ತಾಲಿಬಾನ್‌ಗಳ ಮನಸ್ಥಿತಿ ಸೇಮ್ ಟು ಸೇಮ್ ಇದೆ.
  8. 10 ವರ್ಷಗಳಿಂದ 56 ಇಂಚಿನ ಎದೆಯಿದೆ ಎಂದು ಹೇಳಿಕೊಳ್ಳುವ ಮೋದಿಯವರು ಏನು ಸಾಧಿಸಿದರು? ಪಾಕಿಸ್ತಾನಕ್ಕೆ ಹೋಗಿ ಬಿರ್ಯಾನಿ ತಿಂದರು, ಇರಾನ್, ಸೌದಿ, ದುಬೈಗಳ ರಾಜರು, ರಾಜಕಾರಣಿಗಳ ಜೊತೆ ಮಜಾ ಮಾಡಿದರು. ಸಾಬರ ದೇಶಗಳೊಂದಿಗೆ ಅದಾನಿ-ಅಂಬಾನಿಗಳಿಗೆ ಬ್ಯುಸಿನೆಸ್ಸನ್ನು ಕುದುರಿಸಿ ಕೊಟ್ಟರು. ಬೇಕಿದ್ದರೆ ನೀವೆ ಒಂದಿಷ್ಟು ಮಾಹಿತಿ ಹುಡುಕಿ ನೋಡಿ ಬಿಜೆಪಿಯ ಅನೇಕ ರಾಜಕಾರಣಿಗಳು ದುಬೈ, ಮಲೇಶಿಯಾ ಮುಂತಾದ ಕಡೆ ಬಂಡವಾಳ ಹೂಡಿದ್ದಾರೆ.
  9. ಬೀಫ್ ಅನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಜಗತ್ತಿನ 196 ದೇಶಗಳ ಪೈಕಿ ಭಾರತವನ್ನು 2ನೇ ಸ್ಥಾನಕ್ಕೆ ಏರಿಸಿದ್ದೇ ಮೋದಿ ಸರ್ಕಾರದ ಸಾಧನೆ ಎಂದು ಬಿಜೆಪಿ ಎಂಪಿ ಸುಬ್ರಹ್ಮಣಿಯನ್ ಸ್ವಾಮಿ, ಪ್ರಮೋದ್ ಮುತಾಲಿಕ್ ಮುಂತಾದವರು ಪದೇ ಪದೇ ಹೇಳುತ್ತಿದ್ದಾರೆ.
  10. ಬಿಜೆಪಿ ಎಂದರೆ ಬ್ರಾಹ್ಮಣ- ಮಾರವಾಡಿ ಪಕ್ಷ. ಉಳಿದವರೆಲ್ಲರೂ ಅವರ ಗುಲಾಮರಾಗಬೇಕು ಎನ್ನುವುದು ಅವರ ಉದ್ದೇಶ. ಈ ಇಬ್ಬರಿಗೆ ಬೇಕಾದ ಹಾಗೆ ಕಾನೂನು ಮಾಡಬೇಕು ಅದಕ್ಕಾಗಿ 407 ಸೀಟು ಗೆಲ್ಲಿಸಿ ಎನ್ನುತ್ತಿದ್ದಾರೆ.
  11. ಭಾರತದಲ್ಲಿರುವ ಸಾಬರೆಲ್ಲ ಈ ಬ್ರಾಹ್ಮಣರು ಸೃಷ್ಟಿಸಿರುವ ಜಾತಿ ದಬ್ಬಾಳಿಕೆ ಸಹಿಸಲಾರದೆ ಓಡಿ ಹೋಗಿ ಮುಸ್ಲಿಮರಾದರು. ಈಗ ಅವರನ್ನು ತೋರಿಸಿ ನಮ್ಮ ತಲೆಗೆ ವಿಷ ಹಾಕಲು ನೋಡುತ್ತಿದ್ದಾರೆ. ಈ 10 ವರ್ಷಗಳಲ್ಲಿ ಬರೀ ಸಾಬರನ್ನು ದೇಶಕ್ಕೆ ತೋರಿಸಿ ಅದಾನಿ-ಅಂಬಾನಿ ಮುಂತಾದ ಮಾರವಾಡಿಗಳನ್ನು ಚೆನ್ನಾಗಿ ಕೊಬ್ಬಿಸಿದ್ದೇ ಮೋದಿ ಸರ್ಕಾರದ ಸಾಧನೆ.
  12. ಪರ್ಸೆಂಟ್ ಮೀಸಲಾತಿ ಕೊಟ್ಟು ಬ್ರಾಹ್ಮಣರನ್ನು ಕೊಬ್ಬಿಸಿದರು. ಸಾಲ ಮನ್ನಾ ಮಾಡಿ, ತೆರಿಗೆ ಕಮ್ಮಿ ಮಾಡಿ ಮಾರವಾಡಿ ಕುಳಗಳನ್ನು ಕೊಬ್ಬಿಸಿದ್ರು. ನಮ್ಮ ಮಕ್ಕಳ ತಲೆಗೆ ಮುಸ್ಲಿಮರ ವಿರುದ್ಧ, ಎಸ್‌ಸಿ, ಎಸ್‌ಟಿ ಜನರ ವಿರುದ್ಧ ವಿಷ ಹಾಕಿದ್ರು ಇದಿಷ್ಟೆ ಮೋದಿ ಸರ್ಕಾರದ ಸಾಧನೆ.
  13. ಹೀಗೆಲ್ಲ ಮಾಡಿದರೆ ಮುಂದಿನ ಚುನಾವಣೆಯಲ್ಲಿ ನೋಡಿಕೊಂಡರಾಯಿತು ಎಂಬ ಉದಾಸೀನ ಮಾಡಬೇಡಿ. ಬಿಜೆಪಿಗೆ ಈ ಬಾರಿ 400 ಕ್ಕಿಂತ ಹೆಚ್ಚು ಸೀಟು ಬಂದರೆ ಮುಂದೆ ಅವರು ಚುನಾವಣೆಗಳನ್ನೆ ಮಾಡುವುದಿಲ್ಲ. ಸೌತ್ ಕೊರಿಯಾ, ರಷ್ಯಾ ಮುಂತಾದ ದೇಶಗಳಂತೆ ಭಾರತವನ್ನು ಮಾಡಿಬಿಡುತ್ತಾರೆ. ಓಟು ಹಾಕಿ ನಮಗೆ ಬೇಕಾದವರನ್ನು ಆರಿಸಿಕೊಳ್ಳುವ ಅಧಿಕಾರ ನಮ್ಮಲ್ಲೆ ಉಳಿಯಬೇಕೆಂದರೆ ಈ ಬಾರಿ ಬಿಜೆಪಿಗೆ ಒಂದೂ ಓಟು ಕೊಡಬೇಡಿ. ನಾವು ಬಿಜೆಪಿ ಸೋಲಿಸಿದರೆ ಮಾತ್ರ ನಮ್ಮ ರಾಜ್ಯ ನಮ್ಮ ದೇಶ ಉಳಿಯುತ್ತದೆ.

ಬಿಜೆಪಿ ಸೋಲಲೇ ಬೇಕು? ಬಿಜೆಪಿಯ ಬ್ರಾಹ್ಮಣರು ಹಿಂದೂ ಧರ್ಮದ ಹೆಸರಿನಲ್ಲಿ ಓಟು ಕೇಳುತ್ತಿದ್ದಾರೆ. ದಯಮಾಡಿ ಮೋಸ ಹೋಗಬೇಡಿ ಮತ ಹಾಕುವಾಗ ಒಂದು ಕ್ಷಣ ಯಾಮಾರಿದರೆ ನಮ್ಮ ಮಕ್ಕಳು ಶಾಶ್ವತ ಗುಲಾಮಗಿರಿಗೆ ಬೀಳುತ್ತಾರೆ. ನಿಮ್ಮ ಮಕ್ಕಳ ಭವಿಷ್ಯ ಯೋಚಿಸಿ ಓಟು ಹಾಕಿ. ಬಿಜೆಪಿಗೆ ಓಟು ಹಾಕಿ ನಾವೆ ನಮ್ಮ ಸಮಾಧಿ ಕಟ್ಟಿಕೊಂಡ ಮೇಲೆ ನಮ್ಮನ್ನು ಕಾಪಾಡುವವರು ಯಾರೂ ಇರುವುದಿಲ್ಲ.

ಅರುಣ್ ಜೋಳದಕೂಡ್ಲಿಗಿ

ಸಂಶೋಧಕರು

More articles

Latest article