ಬಸನಗೌಡ ಯತ್ನಾಳ್ ಒಬ್ಬ ಕಾಮಿಡಿ ಮುತ್ಯಾ, ಪಾಗಲ್ ಮುತ್ಯಾ: ಶ್ವಾಸಗುರು ವಚನಾನಂದ ಸ್ವಾಮೀಜಿ

Most read

ಎಲ್ಲಾ ಕಡೆ ನಾನು ಸಿಎಂ ಆಗ್ತಿನಿ ಎಂದು ಹೇಳಿಕೊಂಡು ಬಂದಿರುವ ಬಸವನಗೌಡ ಯತ್ನಾಳ್ ಒಬ್ಬ ಕಾಮಿಡಿ ಮುತ್ಯಾ. ಆತ ಸಿಎಂ ಆಗದಿದ್ದರೂ ಆಗ್ತಿನಿ ಎಂದು ಹೇಳ್ಕೊಂಡ್ ಬರ್ತಾನೆ ಹುಚ್ಚು ಮುತ್ಯಾ ಎಂದು ಹರಿಹರ-ದಾವಣಗೆರೆ ಪಂಚಮಸಾಲಿ ಪೀಠದ (Harihar-Davanagere Panchamasali Peetha) ಜಗದ್ಗುರು ಶ್ವಾಸಗುರು ಶ್ರೀ ವಚನಾನಂದ ಸ್ವಾಮಿಗಳು ಯತ್ನಾಳ್ ವಿರುದ್ಧ ಟೀಕಿಸಿದ್ದಾರೆ..

ಯತ್ನಾಳ್ ರನ್ನು ಲೇವಡಿ ಮಾಡುತ್ತಾ ಅವರ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ವಚನಾನಂದ ಸ್ವಾಮಿಗಳು, ಹಿಂದೆ ಒಬ್ಬರು ಲಡ್ಡು ಮುತ್ಯಾ ಅಂತ ಒಬ್ಬರಿದ್ದರು, ಯತ್ನಾಳ್ ಮುತ್ಯಾ ಕೂಡ ಅವರ ಹಾಗೆ. ಏನೇನೋ ಹೇಳಿಕೊಂಡು ತಿರುಗಾಡುತ್ತಾ ಇರ್ತಾರೆ. ತಾನು ಸಿಎಂ ಆಗ್ತೀನಿ ಅನ್ನುತ್ತಾರೆ, ಅದರೆ ಅವರು ಈಗಾಗಲೇ ಸಿಎಂ ಆಗಿದ್ದಾರೆ, ಸಿಎಂ ಅಂದರೆ ಕಾಮಿಡಿ ಮುತ್ಯಾ‌, ಮುಂದೆ ಹೆಚ್ ಎಂ ಆಗ್ತಾರೆ ಹುಚ್ಚ ಮುತ್ಯಾ, ನಂತರ ಪಿಎಂ ಆಗ್ತಾರೆ ಪಾಗಲ್ ಮುತ್ಯಾ ಎಂದು ಲೇವಡಿ ಮಾಡಿದ್ದಾರೆ.

ಪಂಚಮಸಾಲಿ ಮೀಸಲಾತಿ ಬಗ್ಗೆ ಮಾತಾಡಿದ ಅವರು, ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದ್ದು ತಮ್ಮ ಸಮುದಾಯಕ್ಕೆ ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಅಗ್ರಹಿಸಲಾಗಿದೆ ಎಂದು ಹೇಳಿದರು.

More articles

Latest article