ಯಶ್ ಗಾಗಿ ಕಥೆ ರೆಡಿ ಇದೆ.. ಅವರೊಟ್ಟಿಗೆ ಸಿನಿಮಾ ಮಾಡುವಾಸೆ ಎಂದ ತಮಿಳಿನ ಫೇಮಸ್ ನಿರ್ದೇಶಕ..!

Most read

ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ಕನ್ನಡದ ಸ್ಟಾರ್ ಆಗಿ ಉಳಿದಿಲ್ಲ. ನ್ಯಾಷನಲ್ ಸ್ಟಾರ್. ಎಲ್ಲಾ ಭಾಷೆಯಲ್ಲೂ ಯಶ್ ಅವರಿಗೆ ಅಭಿಮಾನಿಗಳಿದ್ದಾರೆ. ಬಿಗ್ ಬಜೆಟ್ ಸಿನಿಮಾ, ಚಾಲೆಂಜಿಂಗ್ ಪಾತ್ರಗಳು ಎಂದರೆ ಬೇರೆ ಭಾಷೆಯವರಿಗೂ ಮೊದಲು ನೆನಪಾಗುವುದು ರಾಕಿಂಗ್ ಸ್ಟಾರ್ ಯಶ್ ಅವರೇನೆ. ಅವರ ಕಾಲ್ ಶೀಟ್ ಗಾಗಿ ಬೇರೆ ಭಾಷೆಯ ನಿರ್ದೇಶಕರೇ ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟು ಖ್ಯಾತಿ ಗಳಿಸಿ ಆಗಿದೆ. ಈಗಾಗಲೇ ಟಾಕ್ಸಿಕ್ ಸಿನಿಮಾ ಎಲ್ಲಾ ಭಾಷೆಗೂ ರೆಡಿಯಾಗುತ್ತಿದೆ.

ಯಶ್ ಅವರ ಡೆಡಿಕೇಷನ್, ಮಾಸ್ ಅಪಿರಿಯೆನ್ಸ್ ಪರಭಾಷಾ ನಿರ್ದೇಶಕರಿಗೂ ಇಷ್ಟ. ಇದೀಗ ತಮಿಳಿನ ಖ್ಯಾತ ನಿರ್ದೇಶಕ, ರಜನೀಕಾಂತ್ ಅವರಿಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಕೆ.ಎಸ್. ರವಿಕುಮಾರ್ ಯಶ್ ಜೊತೆಗೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಮುತ್ತು, ನಾಟಾಮ್ಮೈ, ಪಡೆಯಪ್ಪ ಸೇರಿದಂತೆ ಹಲವು ಸಿನಿಮಾಗಳನ್ನು ರವಿಕುಮಾರ್ ನಿರ್ದೇಶನ ಮಾಡಿದ್ದಾರೆ.

‘ಯಶ್ ಜೊತೆಗೆ ಒಂದು ಸಿನಿಮಾ ಮಾಡುವ ಆಸೆ ಇದೆ‌. ಆತನಿಗೆ ಸೂಕ್ತವಾದ ಪಾತ್ರ ಇರುವಂತಹ ಕಥೆ ನಮ್ಮ ಬಳಿಯಿದೆ. ಬಹಳ ದೊಡ್ಡ ನಟ. ಅದು ಬೇರೆಯದ್ದೇ ರೀತಿಯ ಕಥೆ. ಇನ್ನು ರಜನೀಕಾಂತ್ ನಟನೆಯ ರಟಣಾ ಸಿನಿಮಾ ಆರಂಭದಲ್ಲಿಯೇ ನಿಂತು ಹೋಯಿತು. ಆ ಚಿತ್ರ ಮಾಡುವುದು ನನ್ನ ಕನಸು. ತೆಲುಗಿನಲ್ಲಿ ರಾಮ್ ಚರಣ್ ಇಷ್ಟ ಎಂದು ಹೇಳಿದ್ದಾರೆ. ಯಶ್ ಅವರ ಡೆಡಿಕೇಷನ್ ನಿಂದಾಗಿಯೇ ಅದೆಷ್ಟೋ ನಿರ್ದೇಶಕರ ಪ್ರಿಯವಾದ ನಟರಾಗಿದ್ದಾರೆ ಯಶ್. ಜೊತೆಗೆ ಅವರ ಅಭಿಮಾನಿ ಬಳಗವೂ ದಿನೇ ದಿನೇ ಬೆಳೆಯುತ್ತಲೆ ಇದೆ. ಎಲ್ಲಿಯೇ ಹೋದರೂ ಸುತ್ತುವರೆದುಕೊಂಡು ಬಿಡುತ್ತಾರೆ. ಇನ್ನು ಯಶ್ ಸಿನಿಮಾದ ಜೊತೆ ಜೊತೆಗೆ ಕುಟುಂಬಕ್ಕೆ ಅಷ್ಟೇ ಅಮೂಲ್ಯವಾದ ಸಮಯವನ್ನು ನೀಡುತ್ತಾರೆ.

More articles

Latest article