ಪರಪ್ಪನ ಅಗ್ರಹಾರಕ್ಕೆ ನೂತನ ಅಧಿಕಾರಿಗಳನ್ನು ನೇಮಿಸಿದ ಸರ್ಕಾರ!

Most read

ಪರಪ್ಪನ ಅಗ್ರಹಾರದ ಜೈಲಿನ ಅಕ್ರಮ ಬಯಲಾಗುತ್ತಿದ್ದಂತೆ, 9 ಮಂದಿ ಜೈಲು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿತ್ತು. ಈಗ ಕಾರಾಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ಮಹಿಳಾ ಡಿಐಜಿ ದಿವ್ಯಶ್ರೀ ನೇಮಕಗೊಂಡಿದ್ದಾರೆ. ಕಾರಾಗೃಹ ಅಕಾಡೆಮಿ ಡಿಐಜಿಯಾಗಿ ಸೋಮಶೇಖರ್​ ವರ್ಗಾವಣೆಯಾಗಿದೆ.

ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರಾಗಿ ಸುರೇಶ್ ನೇಮಕವಾಗಿದ್ದಾರೆ. ಈ ಹಿಂದೆ ಇದ್ದ ವಿ ಶೇಷಮೂರ್ತಿ ಅಮಾನತು ಮಾಡಿದ ಬೆನ್ನಲ್ಲೆ, ನೂತನ ಮುಖ್ಯ ಅಧೀಕ್ಷರಾಗಿ ಕೆ.ಸುರೇಶ್ ನೇಮಕಗೊಂಡಿದ್ದಾರೆ.

ದರ್ಶನ್ ಫೋಟೋ ಹಾಗೂ ವಿಡಿಯೋ ಕಾಲ್​​ಗಳು ವೈರಲ್ ಆಗುತ್ತಿದ್ದಂತೆ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ದೊಡ್ಡ ಮುಜುಗರ ಉಂಟಾಗಿತ್ತು. ಈಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ.

More articles

Latest article