ಸಿಜೆಐ ಮೇಲಿನ ದಾಳಿಗೆ ದೇಶ ಕೆರಳಿದೆ, ಆದರೆ ಬಿಜೆಪಿ ಸಂಭ್ರಮಿಸುತ್ತಿದೆ ಏಕೆ ; ಬಿಕೆ ಹರಿಪ್ರಸಾದ್‌ ಪ್ರಶ್ನೆ

Most read

ಬೆಂಗಳೂರು: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಶೂ ದಾಳಿಗೆ ಭಾರತ ಕೆರಳಿರುವುದು ನಿಜಾ ಪ್ರಧಾನಿಗಳೇ, ಆದರೆ ಬಿಜೆಪಿಗರು ಯಾಕೆ ಕೆರಳಿ ಕೆಂಡವಾಗಲಿಲ್ಲ? ಬಿಜೆಪಿಗರು ನೀವು ಹೇಳಿದ ಕೆರಳಿ ಕೆಂಡವಾದ ಭಾರತದ ಭಾಗವಾಗಿಲ್ಲವೇ? ಅಥವಾ ಕೆರಳಿ ಕೆಂಡವಾಗುವ ಬದಲು ಸಂಭ್ರಮಾಚರಣೆ ಸಡಗರದಲ್ಲಿದ್ದಾರೆಯೇ? ಎಂದು ಕಾಂಗ್ರೆಸ್‌ ಮುಖಂಡ, ವಿಧಾನಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಬಿ ಆರ್‌ ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಕುರಿತು ಬಿಜೆಪಿ ನಿಲುವನ್ನು ಖಂಡಿಸಿ ಅವರು ಎಕ್ಸ್‌ ಮೂಲಕ ಹರಿಹಾಯ್ದಿದ್ದಾರೆ.

ಹಿಂದುತ್ವವಾದಿ ಗೋಡ್ಸೆ ಎಂಬ ಉಗ್ರನಿಂದ ಮಹಾತ್ಮಾ ಗಾಂಧಿಯ ಹತ್ಯೆಯನ್ನು ಸಂಘ ಪರಿವಾರ ದೇಶದಲ್ಲಿ ಸಂಭ್ರಮಾಚರಣೆ ನಡೆಸಿದ ಹೀನ ಪರಂಪರೆಯವರು. ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲಿನ ಸನಾತನಿಯ ಕೃತ್ಯವನ್ನೂ ಸಹ ಸಂಭ್ರಮಿಸುತ್ತಿದ್ದಾರೆಯೇ ಹೊರತು ಖಂಡಿಸಲು ಸಾಧ್ಯವೇ? ಕೆರಳಿ ಕೆಂಡವಾಗಲು ಸಾಧ್ಯವೇ?

ಹತ್ಯೆಗಳನ್ನು ನಡೆಸುವುದು ನಂತರ ಅದರ ಸಮರ್ಥನೆಗೆ ನಿಲ್ಲುವುದು ಸಂಘಿಗಳ ಖಯಾಲಿ. ಗುಜರಾತಿನ ವಡೋದರದ ಬೀದಿಯಲ್ಲಿ ಮುಸ್ಲಿಂ ಗರ್ಬೀಣಿ ಹೆಣ್ಣುಮಗಳ ಹೊಟ್ಟೆಯಿಂದ ಮಗುವನ್ನು ಕೊಂದು ತ್ರಿಶೂಲದಲ್ಲಿ ಸಿಕ್ಕಿಸಿಕೊಂಡು ಮೆರವಣಿಗೆ ಮಾಡಿದವರು ಯಾರು? ಸಂಭ್ರಮಿಸಿದವರು ಯಾರು? ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆಗೆ ಕ್ಷಮಾದಾನ ನೀಡಿದ ಗುಜರಾತಿನ ಸರ್ಕಾರ ಯಾವುದು? ಬಿಡುಗಡೆ ಮಾಡಿ ಅಪರಾಧಿಗಳನ್ನು ಸಂಭ್ರಮಿಸಿದವರು ಯಾರು?

ಗೌರಿ,ಕಲ್ಬುರ್ಗಿ,ದಾಬೋಲ್ಕರ್ ಅಂತಹ ಸಾಹಿತಿ,ಚಿಂತಕರನ್ನ ಹತ್ಯೆ ಮಾಡಿದವರು ಯಾರು? ಸುಪಾರಿ ನೀಡಿದವರು ಯಾರು? ಹತ್ಯೆಯ ನಂತರ ಸಂಭ್ರಮ ಮಾಡಿದವರು ಯಾರು? ಅದ್ಯಾವ ಸಿದ್ದಾಂತ ಸಮಾಜದಲ್ಲಿ ದ್ವೇಷ, ಅಸೂಯೆ, ಕೊಲೆ, ಅತ್ಯಾಚಾರಿಗಳ ಪರವಾಗಿ ರಣಕೇಕೆ ಹಾಕುವಂತೆ ಮಾಡುತ್ತಿದೆ.?

ಪ್ರಶ್ನೆಗಳು ಸಾವಿರಾರು ಹುಟ್ಟತ್ತಲೇ ಇದೆ ಆದರೆ ಉತ್ತರ ಮಾತ್ರ ಅತ್ಯಂತ ಸ್ಪಷ್ಟವಾಗಿದೆ. ಈ ಸಮಾಜಘಾತುಕ ಶಕ್ತಿಗಳ ಲಾಲನೆ,ಪಾಲನೆ,ಪೋಷಣೆ,ರಕ್ಷಣೆಗೆ ನಿಲ್ಲುತ್ತಿರುವುವುದು ಮಾತ್ರ ಆರ್‌ಎಸ್ಎಸ್ ಹಾಗೂ ಅದರ ಇಡೀ ಸಂಘಪರಿವಾರ…! ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಕೊಮುವಾದಿ ಶಕ್ತಿಗಳನ್ನು ಬುಡಸಮೇತ ಕಿತ್ತು ಹಾಕದೆ ಇದ್ದರೆ ಭವಿಷ್ಯತ್ತಿನ ಭಾರತ ಭಾರಿ ಅಪಾಯ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

More articles

Latest article