ಕೋಲಾರ: ಬೆಂಗಳೂರಿನ ಚಿನ್ನಸ್ಡಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿಜಯೋತ್ಸವ ಸಂಭ್ರಮಾಚರಣೆಯನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಕೋಲಾರದ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ಯುವತಿಯನ್ನು ಕೋಲಾರ ತಾಲೂಕು ಬಡಮಾಕನಹಳ್ಳಿಯ ಸಹನಾ 25 ವರ್ಷ ಎಂದು ಗುರುತಿಸಲಾಗಿದೆ.
ಈಕೆ ಬೆಂಗಳೂರಿನಲ್ಲಿ ಬಾಷ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ತನ್ನ ನಾಲ್ವರು ಗೆಳತಿಯರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿಜಯೋತ್ಸವ ವೀಕ್ಷಿಸಲು ಹೋಗಿದ್ದಾಗ ಮೃತಪಟ್ಟಿದ್ದಾರೆ. ವೈದೇಹಿ ಆಸ್ಪತ್ರೆಯಿಂದ ಶವವನ್ನು ತಡರಾತ್ರಿ ಒಂದು ಗಂಟೆಗೆ ಕೋಲಾರಕ್ಕೆ ಕಳುಹಿಸಲಾಗಿದೆ. ಸಹನಾ ಕಾಲ್ತುಳಿತದಲ್ಲಿ ಸಹನಾ ಕೊನೆಯುಸಿರೆಳೆದಿದ್ದಾರೆಂದು ಅವರ ಗೆಳತಿಯರು ತಿಳಿಸಿದ್ದಾರೆ.
ಬಡಮಾಕನಹಳ್ಳಿ ಶಿಕ್ಷಕ ಸುರೇಶ ಬಾಬು ಮಂಜುಳಾ ದಂಪತಿಗಳ ಹಿರಿಯ ಪುತ್ರಿ ಸಹನಾ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇವರೂ ಸಹ ಪುತ್ರಿಯ ಸಾವಿಗೆ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.