ಡಿಸಿಎಂ ಆಜ್ಞೆಯ ಮೇರೆಗೆ ಚನ್ನಪಟ್ಟಣಕ್ಕೆ ನೂತನ ಹೆಚ್ಚುವರಿ ಪಿಡಿಒ ನಿಯೋಜನೆ: ಆದೇಶ ರದ್ದುಗೊಳಿಸಿದ ಸರ್ಕಾರ

Most read

ಡಿಸಿಎಂ ಡಿಕೆ ಶಿವಕುಮಾರ್ ಆಜ್ಞೆಯ ಮೇರೆಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ 20 ಜನ ಹೆಚ್ಚುವರಿ ಪಿಡಿಒಗಳನ್ನ ನಿಯೋಜನೆಗೊಳಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.

ನಿಯೋಜನೆಗೂ ಮೊದಲು ಇಲಾಖೆ ಆಯುಕ್ತರಿಂದ ಅನುಮೋದನೆ ಕಡ್ಡಾಯವಾಗಿರುತ್ತದೆ. ಆದರೆ ಅನುಮೋದನೆ ಪಡೆಯದೆ ತರಾತುರಿಯಲ್ಲಿ ಜಿಲ್ಲಾಮಟ್ಟದ ಸಿಇಒ ಹಂತದಲ್ಲಿಯೇ ನಿಯೋಜನೆ ಮಾಡಲಾಗಿದೆ. ಹೀಗಾಗಿ ಆದೇಶಕ್ಕೆ ತಡೆ ನೀಡಿ RDPR ಆಯುಕ್ತೆ ಅರುಂಧತಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಅವರು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದಲ್ಲಿಯೇ ನೇಮಕ ಮಾಡಲಾಗಿತ್ತು. ಇದೀಗ 20 ಪಿಡಿಒಗಳ ನಿಯೋಜನೆ ಆದೇಶವನ್ನು ಸರ್ಕಾರ ರದ್ದುಗೊಳಿಸಿ ಮತ್ತೊಂದು ಆದೇಶ ಹೊರಡಿಸಿರಲಾಗಿದೆ.

More articles

Latest article