ಮೋದಿ ಅವರೇ ನಿಮ್ಮ ಪತ್ನಿಗೆ ಮೊದಲು ತಿಲಕ ಕೊಡಿ: ಪ.ಬಂಗಾಳ ಸಿಎಂ ಮಮತಾ ದೀದಿ ವಾಗ್ದಾಳಿ

Most read

ನವದೆಹಲಿ: ಆಪರೇಷನ್‌ ಸಿಂಧೂರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಕ್ಕ ತಿರುಗೇಟು ನೀಡಿದ್ದಾರೆ. ಆಪರೇಷನ್‌ ಸಿಂಧೂರ ಹೆಸರಿನಲ್ಲಿ ಪ್ರತಿದಿನ ಭಾವನಾತ್ಮಕವಾಗಿ ಮಾತನಾಡುತ್ತಿರುವ ಮೋದಿ ಅವರನ್ನು ಟಿಎಂಸಿ ವರಿಷ್ಠೆಯೂ ಆಗಿರುವ ಮಮತಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರತಿಯೊಬ್ಬ  ಮಹಿಳೆಗೂ ಗೌರವ ಇರುತ್ತದೆ. ಅವರು ತಮ್ಮ ಪತಿಯರಿಂದ ಸಿಂಧೂರವನ್ನು ಹಣೆಗೆ ಇಡಿಸಿಕೊಳ್ಳಲು ಬಯಸುತ್ತಾರೆ. ಮೊದಲು ನೀವು ನಿಮ್ಮ ಪತ್ನಿಗೆ ಏಕೆ ಸಿಂಧೂರವನ್ನು ಕೊಡಬಾರದು? ನೀವು ನಮ್ಮನ್ನು ಮಾತನಾಡಲು ಪ್ರಚೋದಿಸುತ್ತಿದ್ದೀರಿ. ಆಪರೇಷನ್‌ ಸಿಂಧೂರ ಅಂದರೆ ಬೆಂಗಾಲ್‌ ಆಪರೇಷನ್‌ ಕೂಡ ಎಂದು ವಾಗ್ದಾಳಿ ನಡೆಸಿದ್ದಾರೆ. ಎಕ್ಸ್‌ ನಲ್ಲಿ ಮಾತನಾಡಿರುವ ಅವರ ಕೆಲವೇ ಸೆಕೆಂಡ್‌ ಗಳ ಈ ಹೇಳಿಕೆ ಸಾಕಷ್ಟು ವೈರಲ್‌ ಆಗಿದೆ.

More articles

Latest article