ಪಾಕ್‌ ಗೆ ಆಪರೇಷನ್‌ ಸಿಂಧೂರ ಮಾಹಿತಿ ಹಂಚಿಕೊಳ್ಳುತ್ತಿದ್ದ ನೌಕಾಪಡೆ ಸಿಬ್ಬಂದಿ ಬಂಧನ

Most read

ಜೈಪುರ: ಪಾಕಿಸ್ತಾನ ಪರ ಗೂಡಾಚಾರಿಣಿಯಿಂದ ಹಣ ಪಡೆದು ಭಾರತದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ದೆಹಲಿಯ ನೌಕಾಪಡೆಯ ಪ್ರಧಾನ ಕಚೇರಿಯ ಉದ್ಯೋಗಿ ವಿಶಾಲ್‌ ಯಾದವ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಆಪರೇಷನ್‌ ಸಿಂಧೂರ, ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲಿನ ದಾಳಿಯ ಮಾಹಿತಿಗಳನ್ನು ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯಾದವ್‌ ಹರಿಯಾಣದ ರೇವರಿ ಜಿಲ್ಲೆಯ ಮೂಲದ ಯದವ್‌  ಭಾರತದ ಮಹಿಳೆಯಂತೆ ವೇಷ ಧರಿಸುತ್ತಿದ್ದ ಗೂಢಾಚಾರಿಣಿಯ ಜತೆಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ. ಈ ಮಹಿಳೆಯಿಂದ 2 ಲಕ್ಷ ರೂ. ಹಣ ಮತ್ತು ಆಪರೇಷನ್‌ ಸಿಂಧೂರ ಮಾಹಿತಿ ಹಂಚಿಕೊಂಡಿದ್ದಕ್ಕೆ ರೂ. 50 ಸಾವಿರ ಹಣ ಪಡೆದಿದ್ದ  ಎಂದು ಪೊಲೀಸರು ತಿಳಿಸಿದ್ದಾರೆ.

ವಿವಿದ ಕಾರ್ಯಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಯಾದವ್‌ ನನ್ನು ಬಂಧಿಸಲಾಗಿದೆ.

ಪ್ರಿಯಾ ಶರ್ಮಾ ಹೆಸರಿನಲ್ಲಿದ್ದ ನಕಲಿ ಫೇಸ್‌ ಬುಕ್‌ ಖಾತೆಯ ಮೂಲಕ ಯಾದವ್ ಅವರನ್ನು ಮಹಿಳೆ ಸಂಪರ್ಕ ಮಾಡಿದ್ದಳು. ನಂತರ ಇಬ್ಬರ ನಡುವೆ ನಿರಂತರವಾಗಿ ಮೆಸೇಜ್‌ ಗಳು ರವಾನೆಯಾಗುತ್ತಿದ್ದವು. ಹೆಚ್ಚು ಹೆಚ್ಚು ಮಾಹಿತಿ ನೀಡುತ್ತಿದ್ದಂತೆ  ಆಕೆ ಯಾದವ್‌ ಗೆ ಹೆಚ್ಚು ಹಣ ಕಳುಹಿಸುತ್ತಿದ್ದಳು ಎಂದೂ ಪೊಲೀಸರು ತಿಳಿಸಿದ್ದಾರೆ.

More articles

Latest article