ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಯ್ಯವರ ನಡೆಗೆ, ಮತ್ತೋರ್ವ ಮತ್ತು ಕೊನೆಯ ನಕ್ಸಲ್ ಕಾರ್ಯಕರ್ತ ರವೀಂದ್ರ ಎಂಬುವರು ಇಂದು ಮುಖ್ಯವಾಹಿನಿಗೆ ಬರುತ್ತಿದ್ದಾರೆ.
ಇಂದು ಮಾಧ್ಯಾಹ್ನ 12 ಗಂಟೆಗೆ ಚಿಕ್ಕಮಗಳೂರು ಎಸ್ಪಿ ಆಫೀಸಿಗೆ ಶಾಂತಿಗಾಗಿ ನಾಗರೀಕರ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸದಸ್ಯರು ಕರೆದುಕೊಂಡು ಬರಲಿದ್ದಾರೆ.
ಶೃಂಗೇರಿ ಸಮೀಪದ ಕಿಗ್ಗ ಗ್ರಾಮದವರಾದ ರವೀಂದ್ರ ಕೋಟೆಹೊಂಡ ಅವರು ಹಲವು ವರ್ಷಗಳಿಂದ ನಕ್ಸಲ್ ಚಳುವಳಿಯಲ್ಲಿ ತೊಡಗಿಕೊಂಡಿದ್ದರು.
ಇದೇ ಜನವರಿ 08 ರಂದು 6 ಜನ ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದರು.