ನಾಳೆ ಮೈಸೂರಿನಲ್ಲಿ ಮಹಿಷಾ ಮಂಡಲೋತ್ಸವ!

Most read

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ಮೈಸೂರು ದಸರಾ ಉದ್ಘಾಟನೆಗೂ ಮೊದಲೇ ನಾಳೆ ಮಹಿಷ ದಸರಾ ಆಚರಣಾ ಸಮಿತಿಯು ಮಹಿಷಾ ಮಂಡಲೋತ್ಸವ ಆಚರಣೆಗೆ ಮುಂದಾಗಿದೆ.

ನಾಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಲು ಮಹಿಷಾ ದಸರಾ ಆಚರಣೆ ಸಮಿತಿಯು ಪ್ಲಾನ್ ರೂಪಿಸಿದ್ದು ಇದಕ್ಕೆ ಪೊಲೀಸರು ಅವಕಾಶ ಕೊಡ್ತಾರ ಎಂಬ ಕುತೂಹಲ ಮೂಡಿದೆ. ಈವರೆಗೆ ಒಮ್ಮೆ ಮಾತ್ರ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಅವಕಾಶ ನೀಡಿದ್ದು, ಅಂದು ಚಾಮುಂಡೇಶ್ವರಿಗೆ ನಿಂಧಿಸಿದ್ದಾರೆ ಎಂದು ಆರೋಪಿಸಿ ಇಲ್ಲಿವರೆಗೂ ಅನುಮತಿ ನಿರಾಕರಿಸಿದ್ದರು. ಈ ಬಾರಿ ಪುಷ್ಪಾರ್ಚನೆಗೆ ಅವಕಾಶ ಮಾಡಿಕೊಡುತ್ತಾ ಜಿಲ್ಲಾಡಳಿತ ಅನ್ನೊದು ಯಕ್ಷ ಪ್ರಶ್ನೆಯಾಗಿದೆ.

ಇದರ ನಡುವೆ ಮಹಿಷಾ ದಸರಾ ಮಾಡೋದಕ್ಕೆ ನಾವು ಬಿಡಲ್ಲ, ಚಾಮುಂಡಿ ಬೆಟ್ಟ ಚಲೋ‌ ಮಾಡ್ತಿವಿ ಅಂತೆಲ್ಲ ಪ್ರತಾಪ್ ಸಿಂಹ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

More articles

Latest article