ಕೋಲಾರದಲ್ಲಿ ತಡರಾತ್ರಿ ಪೋಲೀಸ್ ಫೈರಿಂಗ್: ಇಬ್ಬರ ಕಾಲಿಗೆ ಗುಂಡೇಟು

Most read

ಕೋಲಾರ. ಮಾಲೂರು ತಾಲ್ಲೂಕಿನ ಟೇಕಲ್ ಗ್ರಾಮದ ಈಶ್ವರ್ ಕೆರೆಯಲ್ಲಿ ಮೀನು ಹಿಡಿಯುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿದ ಪರಿಣಾಮ ಲೋಕೇಶ್ ಹಾಗೂ ದರ್ಶನ್ ಎಂಬ ಇಬ್ಬ ಯುವಕರು ಚಾಕುತಿವಿತದಿಂದ ಗಾಯಗೊಂಡು ಲೋಕೇಶ್ ಸ್ಥಳದಲ್ಲೇ ಸಾವನ್ನಪ್ಪಿದರೆ ಗಾಯಾಳು ದರ್ಶನ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾನೆ.

ಈ ಸಂಬಂಧ ಆರೋಪಿಗಳ ಪತ್ತೆಗಾಗಿ ಮಾಸ್ತಿ ಇನ್ಸ್ ಪೆಕ್ಟರ್ ರಾಮಪ್ಪ ಗುತ್ತೇದಾರ್ ಹಾಗೂ ಶ್ರೀನಿವಾಸಪುರ ಇನ್ಸ್ ಪೆಕ್ಟರ್ ಗೊರವಿನಕೊಳ್ಳ ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ಪ್ರಮೋದ್ ಹಾಗೂ ಅನಿಲ್ ಎಂಬುವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದು ಇವರಿಬ್ಬರು ಕಾರಿನಲ್ಲಿ ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದರೆನ್ನಲಾಗಿದ್ದು ತಡ ರಾತ್ರಿಯಲ್ಲಿ ಪೋಲೀಸರು ಹಿಡಿಯಲೆತ್ನಿಸಿದಾಗ ಪೋಲೀಸರೊಂದಿಗೆ ನಡೆದ ಕಾಳಗದಲ್ಲಿ ಪೋಲೀಸರು ಆರೋಪಿಗಳ ಕಾಲಿಗೆ ಫೈರಿಂಗ್ ನಡೆಸಿದ್ದಾರೆ.

ಈ ವೇಳೆ ಮಾಸ್ತಿ ಪೋಲೀಸು ಸಿಬ್ಬಂದಿ ನಿಖಿಲ್ ಕುಮಾರ್ ಹಾಗೂ ಶ್ರೀನಿವಾಸಪುರ ಠಾಣೆಯ ಸಿಬ್ಬಂದಿ ವಾಸು ಎಂಬುವರಿಗೂ ಗಾಯಗಳಾಗಿದ್ದು ಆರೋಪಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

More articles

Latest article