ಕನ್ನಡ ಕಟ್ಟಾಳು ಮ.ರಾಮಮೂರ್ತಿ ಪತ್ನಿ ಕಮಲಮ್ಮ ನಿಧನ

Most read

ಬೆಂಗಳೂರು: ಕನ್ನಡ ಚಳವಳಿಯ ಹೋರಾಟಗಾರ, ಕನ್ನಡ ಬಾವುಟ ಸೃಷ್ಟಿಸಿ ಕೊಟ್ಟಿದ್ದ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ರಾಮಮೂರ್ತಿ(100) ಸೋಮವಾರ ನಿಧನರಾಗಿದ್ದಾರೆ. 58 ವರ್ಷಗಳ ಹಿಂದೆ ಪತಿ ರಾಮಮೂರ್ತಿ ಮತ್ತು ಮಕ್ಕಳಾದ ದಿವಾಕರ ಮತ್ತು ಮಂಜುನಾಥ ಅವರು ಬಾವಿ ಕುಸಿದು ಮೃತಪಟ್ಟ ಬಳಿಕ ಕಮಲಮ್ಮ ಒಂಟಿಯಾಗಿದ್ದರು.

ಅವರು ನಗರದ ಶಾರದಾ ಕುಟೀರದಲ್ಲಿ ವಾಸವಾಗಿದ್ದರು. ಇತ್ತೀಚಿಗೆ ಅನಾರೋಗ್ಯ ಉಂಟಾಗಿತ್ತು. ಅವರ ಆರೈಕೆಗಾಗಿ ಬನಶಂಕರಿ ಸೇವಾಕ್ಷೇತ್ರಕ್ಕೆ ಅವರನ್ನು ಸ್ಥಳಾಂತರಿಸಲಾಗಿತ್ತು. ಮೃತರ ಅಂತಿಮ ದರ್ಶನಕ್ಕೆ ಬನಶಂಕರಿ ಸೇವಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

More articles

Latest article