ಜಗ್ಗೇಶ್-ಗುರುಪ್ರಸಾದ್ 4ನೇ ಸಿನಿಮಾ “ಕಿತ್ತೋದ್ ನನ್ಮಗ” ಘೋಷಣೆ: ಟೈಟಲ್ ಕೇಳಿ ಜಗ್ಗೇಶ್ ಕಕ್ಕಾಬಿಕ್ಕಿ

Most read

ಡೈರೆಕ್ಟರ್ ಗುರುಪ್ರಸಾದ್ (Guruprasad) ಮತ್ತು ನವರಸ ನಾಯಕ ಜಗ್ಗೇಶ್ (Jaggesh) ಜೋಡಿಯ ಮೂರನೇ ಸಿನಿಮಾ ರಂಗನಾಯಕ ಬಿಡುಗಡೆಗೆ ಸಿದ್ದವಾಗಿದೆ. ಅಷ್ಟರಲ್ಲಿಯೇ ಗುರುಪ್ರಸಾದ್ ಅವರು ಜಗ್ಗೇಶ್ ಅವರ ಜೊತೆಗೆ ಇನ್ನೂ ಒಂದು ಸಿನಿಮಾ ಮಾಡೋದಾಗಿ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.

ಹೌದು, ರಂಗನಾಯಕ ಚಿತ್ರದ ಟ್ರೈಲರ್ ರಿಲೀಸ್‌ ವೇದಿಕೆಯಲ್ಲಿ ಮಾತನಾಡಿರುವ ಗುರು ಪ್ರಸಾದ್, ನಾನು ಜಗ್ಗೇಶ್ ಜೊತೆ ಇನ್ನೂ ಒಂದು ಸಿನಿಮಾ ಮಾಡುತ್ತಿದ್ದೇನೆ ಅದಕ್ಕೆ ಕಿತ್ತೋದ್ ನನ್ಮಗ ಅಂತ. ಅದಕ್ಕೆ ರಂಗನಾಯಕ ನಿರ್ಮಾಪಕ ವಿಖ್ಯಾತ್ ಅವರೇ ಈ ಚಿತ್ರಕ್ಕೂ ನಿರ್ಮಾಣ ಮಾಡ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ಪಕ್ಕದಲ್ಲೇ ನಿಂತು ಕೇಳಿಸಿಕೊಳ್ಳುತ್ತಿದ್ದ ಜಗ್ಗೇಶ್ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.

ಗುರುಪ್ರಸಾದ್ ಹೇಳಿಕೆಗೆ ಪ್ರತ್ಯುತ್ತರ ಕೊಟ್ಟು ಜಗ್ಗೇಶ್, ಗುರು ಜೊತೆಗೆ ನಾಲ್ಕನೆಯ ಸಿನಿಮಾ ಮಾತು ಕತೆ ಏನೂ ಆಗಿಲ್ಲ. ಸುಮ್ನೆ ಅವರು ಇಲ್ಲಿ ಹೇಳುತ್ತಿದ್ದಾರೆ. ನಾನು ಇನ್ನು ಡೇಟ್ಸ್ ಕೂಡ ಕೊಟ್ಟಿಲ್ಲ. ಕಥೆಯನ್ನೂ ಓಕೆ ಮಾಡಿಲ್ಲ. ಗುರು ಸುಮ್ನೆ ಹೇಳ್ತಿದ್ದಾರೆ ಎಂದು ಇದಕ್ಕೆ ತೆರೆ ಎಳೆದಿದ್ದಾರೆ.

ಸಿನಿಮಾದಲ್ಲಿ ಇರುವ ಡೈಲಾಗ್ಗಳಿಗೂ ನನಗೂ ಸಂಬಂಧ ಇಲ್ಲ

ರಂಗನಾಯಕ ಚಿತ್ರದಲ್ಲಿರೋ ಮಾತುಗಳೆಲ್ಲ ಗುರು ಪ್ರಸಾದ್ ಬರೆದಿದ್ದಾರೆ. ಇಡೀ ಸಿನಿಮಾ ಅವರದ್ದೇ ಆಗಿದೆ. ನಾನು ಈ ಸಿನಿಮಾದಲ್ಲಿ ಒಬ್ಬ ಕಲಾವಿದನಾಗಿಯೇ ಕೆಲಸ ಮಾಡಿದ್ದೇನೆ. ಹೊರತು ಇಡೀ ಸಿನಿಮಾ ಗುರು ಪ್ರಸಾದ್ ಅವರ ಕಲ್ಪನೆಯ ಮತ್ತು ಮಾತುಗಳ ಮತ್ತು ಕಥೆಯ ಸಿನಿಮಾ ಅಂತಲೇ ಹೇಳಿದ್ದಾರೆ

More articles

Latest article