ಮೋದಿ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳು: ಕಾಂಗ್ರೆಸ್ ಲೇವಡಿ

Most read

ಬೆಂಗಳೂರು: ಪ್ರದಾನಿ ನರೇಂದ್ರ ಮೋದಿಯವರು ಭಾಷಣ ಮಾಡುವಾಗ ಖಾಲಿ ಚೇರುಗಳಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಕನ್ನಡಿಗರಿಗೆ ಕೊಟ್ಟ ಖಾಲಿ ಚೊಂಬಿಗೆ ಉತ್ತರವಾಗಿ ಕನ್ನಡಿಗರಿಂದ ಖಾಲಿ ಕುರ್ಚಿಯ ಉತ್ತರ ನೀಡಿದ್ದಾರೆ ಎಂದು ಲೇವಡಿ ಮಾಡಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಸಭೆ ಏರ್ಪಾಡಾಗಿತ್ತು. ನಿರೀಕ್ಷೆಯಷ್ಟು ಜನರು ಸೇರದ ಹಿನ್ನೆಲೆಯಲ್ಲಿ ಸಾಕಷ್ಟು ಕುರ್ಚಿಗಳು ಖಾಲಿಯಾಗಿಯೇ ಉಳಿದಿದ್ದವು. ಇದರ ವಿಡಿಯೋ ಪೋಸ್ಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮೋದಿಯವರೇ, ನಿಮ್ಮ ಖಾಲಿ ಚೊಂಬಿನ ಸುಳ್ಳಿನ ಭಾಷಣವನ್ನು ಕೇಳಲು ಕನ್ನಡಿಗರು ಮೂರ್ಖರಲ್ಲ, ಈ ಖಾಲಿ ಕುರ್ಚಿಗಳೇ ಬಿಜೆಪಿಯನ್ನು ದೇಶದಿಂದ ಜಾಗ ಖಾಲಿ ಮಾಡಿಸುವುದಕ್ಕೆ ಮುನ್ನುಡಿ ಬರೆಯುತ್ತವೆ ಎಂದು ಹೇಳಿದೆ.

ಪ್ರಧಾನಿ ಮೋದಿ ಇಂದು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಕಳೆದ ವಾರ ಮೈಸೂರಿನಲ್ಲಿ ಸಾರ್ವಜನಿಕ ಸಭೆ ಮತ್ತು ಮಂಗಳೂರಿನಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದ್ದರು. ಮಂಗಳೂರಿನ ರೋಡ್ ಶೋ ಸಂದರ್ಭದಲ್ಲೂ ಸಹ ನಿರೀಕ್ಷೆಯಷ್ಟು ಜನರು ಸೇರದೇ ಇರುವುದು ಬಿಜೆಪಿ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು.

More articles

Latest article