ಹಲವು ಊಹಾಪೋಹಗಳಿಗೆ ತರೆ ಎಳೆದ ಡಿವಿ ಸದಾನಂದ ಗೌಡ : ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

Most read

ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿವಿ ಸದಾನಂದ ಗೌಡ ಗುರುವಾರ ತುರ್ತು ಪತ್ರಿಕಾಗೋಷ್ಠಿ ಕರೆದು, ಟಿಕಟ್ ಸಿಗದಿದಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಬಜೆಪಿಯಲ್ಲಿ ಕೊಟ್ಟು ಎಲ್ಲಾ ಸ್ಥಾನವನ್ನು ನಾನು ಸಮರ್ಪಕವಾಗಿ ನಿಭಾಯಿಸಿದ್ದೇನೆ‌. ಆದರೆ ನನಗೆ ಟಿಕೆಟ್ ಕೊಡದೆ ಬಿಜೆಪಿ ಅನ್ಯಾಯ ಮಾಡಿರುವುದು ಬೇಸರ ತಂದಿದೆ. ನನಗೆ ಕಾಂಗ್ರೆಸ್ ನಿಂದ ಆಹ್ವಾನ ಬಂದಿರುವುದು ಸತ್ಯ. ನನ್ನನ್ನು ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ನನಗೆ ಭರವಸೆ ನೀಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಮುಂದಿನ ನಡೆ ರಾಜ್ಯ ಬಿಜೆಪಿಯ ಶುದ್ದೀಕರಣ. ನನಗೆ ಅಪಮಾನ ಮಾಡಿದವರು ಪಶ್ಚಾತ್ತಾಪಪಡ್ತಾರೆ. ಎಲೆಕ್ಷನ್ ಟಿಕೆಟ್ ಸಿಗದಿದ್ದಕ್ಕೆ ನನಗೆ ಬೇಸರ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

More articles

Latest article