ದುನಿಯಾ ವಿಜಿ ಹಾಗೂ ಎಸ್ ನಾರಾಯಣ್ ಹೊಸ ಸಿನಿಮಾಗೆ ರೆಡಿ

Most read

ಎಸ್.ನಾರಾಯಣ್ ನಿರ್ದೇಶನದ ಸಿನಿಮಾ ಅಂದ್ರೆ ಅದು ಹಿಟ್ ಆಗಲೇಬೇಕು. ಅಷ್ಟು ಒಳ್ಳೊಳ್ಳೆ ಸಿನಿಮಾಗಳನ್ನ ಈ ಮೊದಲು ನೀಡಿದ್ದಾರೆ. ಈಗ ನಟನೆಯ ಜೊತೆಗೆ ನಿರ್ದೇಶನದ ಕಡೆಗೂ ಗಮನ ಕೊಟ್ಟಿದ್ದಾರೆ. ಸದ್ಯ ದುನಿಯಾ ವಿಜಯ್ ಜೊತೆಗೆ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ. ಚಂಡ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಸುಮಾರು ಒಂಭತ್ತು ವರ್ಷಗಳೇ ಕಳೆದಿದೆ, ಆ ಸಿನಿಮಾದ ಬಳಿಕ ಈಗ ಮತ್ತೆ ಒಂದಾಗುತ್ತಿದ್ದಾರೆ. ಚಂಡ ರಿಲೀಸ್ ಆಗಿ 17 ವರ್ಷ ಆಗಿದೆ. ಅದಾದ ಮೇಲೆ ದಕ್ಷ ಎಂಬ ಸಿನಿಮಾವನ್ನು ಒಟ್ಟಿಗೆ ಮಾಡಿದ್ದರು. ಈಗ ಮತ್ತೊಂದು ಸಿನಿಮಾಗೂ ಕೈ ಹಾಕಿದ್ದು, ಆದರೆ ಇನ್ನು ಟೈಟಲ್ ಇಟ್ಟಿಲ್ಲ.

ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಇದೇ ಸಿನಿಮಾದಲ್ಲಿ ದುನಿಯಾ ವಿಜಯ್ ಜೊತೆಗೆ ಶ್ರೇಯಸ್ ಮಂಜು ಕೂಡ ಇದ್ದಾರೆ. ಶ್ರೇಯಸ್ ಮಂಜು ಪಾತ್ರದ ಶೂಟಿಂಗ್ ಅದಾಗಲೇ ಮುಕ್ತಾಯಗೊಂಡಿದೆ. ಜೂನ್ 5ರಿಂದ ದುನಿಯಾ ವಿಜಯ್ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

ಈ ಕಾಂಬಿನೇಷನ್ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾಗೆ ಕೆ.ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಬೃಂದಾ ಆಚಾರ್ಯ ನಾಯಕಿ ಎಂಬ ಮಾಹಿತಿ ಸಿಕ್ಕಿದೆ. ಬಿಟ್ಟರೆ ಇನ್ನುಳಿದ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಂಡಿಲ್ಲ. ಎಸ್.ನಾರಾಯಣ್ ಅವರು ಇಲ್ಲೂ ಚಿತ್ರಕಥೆ-ನಿರ್ದೇಶನ-ಸಂಭಾಷಣೆ-ಗೀತರಚನೆ ಮಾಡಿದ್ದಾರೆ. ಜಸ್ಸಿ ಗಿಫ್ಟ್ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ಪಿ.ಕೆ.ಎಚ್.ದಾಸ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ.

More articles

Latest article