ಧರ್ಮಸ್ಥಳ ಹತ್ಯೆಗಳು:ಎರಡನೇ ಬಾರಿ ಚಿನ್ನಯ್ಯ ಹೇಳಿಕೆ ದಾಖಲಿಸಿಕೊಳ್ಳಲು ಎಸ್‌ ಐಟಿ ಸಜ್ಜು; ಶಿವಮೊಗ್ಗ ಜೈಲಿನಲ್ಲೇ ಹೇಳಿಕೆ ಪಡೆಯಲು ನಿರ್ಧಾರ; ಶವ ಹೂತಿದ್ದೆ ಎಂಬ ಹೇಳಿಕೆಯೂ ಜೀವಂತ!!!

Most read

ಬೆಳ್ತಂಗಡಿ/ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತುಹಾಕಿರುವ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ಭಾರತೀಯ ನ್ಯಾಯಸಂಹಿತೆ ಸೆ. 183 ಅಡಿಯಲ್ಲಿ ನೀಡಿರುವ ಎರಡನೇ ಹೇಳಿಕೆ ನಂತರವೂ  ಜುಲೈ 11 ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ನೀಡಿದ ಮೊದಲ ಹೇಳಿಕೆ ಅರ್ಹವಾಗಿರುತ್ತದೆ. ತನಿಖೆಯ ಉದ್ದೇಶದಿಂದ ಚಿನ್ನಯ್ಯ ನೀಡಿರುವ ಎರಡೂ ಹೇಳಿಕೆಗಳನ್ನು ಒಟ್ಟಾಗಿಯೇ ಪರಿಗಣಿಸಲಾಗುತ್ತದೆ ಎಂದು ಗೃಹ ಸಚಿವಾಲಯದ ಮೂಲಗಳು ಖಚಿತಪಡಿಸಿವೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಹತ್ಯೆ ಮಾಡಿದ ಶವಗಳನ್ನು ನನ್ನಿಂದ ಹೂತು ಹಾಲಿಸಲಾಗಿದೆ ಎಂದು ಜುಲೈ 3ರಂದು ಚಿನ್ನಯ್ಯ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾನೆ. ನ್ಯಾಯಾಲಯದಲ್ಲಿಯೂ ಬಿಎನ್‌ ಎನ್‌ ಎಸ್‌ ಸೆ-183 ಅಡಿಯಲ್ಲಿ ತನ್ನ ಆರೋಪವನ್ನು ದೃಢೀಕರಿಸಿರುತ್ತಾನೆ. ಈತನ ಹೇಳಿಕೆಯನ್ನು ಆಧರಿಸಿ ಆರೋಪಗಳನ್ನು ಕುರಿತು ತನಿಖೆ ನಡೆಸಲು ಕರ್ನಾಟಕ ಸರ್ಕಾರ ಜುಲೈ 19 ರಂದು ವಿಶೇಷ ತನಿಖಾ ತಂಡ (ಎಸ್‌ ಐಟಿ) ರಚಿಸಲಾಗಿತ್ತು.

ನಂತರ ಎಸ್‌ ಐಟಿ ಸುಮಾರು ಎರಡು ವಾರದ ಕಾಲ ಶವಗಳ ಅವಶೇಷಗಳಿಗಾಗಿ ಮಹಜರು ನಡೆಸಿದೆ. ತದನಂತರ ನ್ಯಾಯಾಲಯದಲ್ಲಿ ತಾನು ಶವಗಳನ್ನು ಹೂತು ಹಾಕಿರುವುದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಸುಳ್ಳು ಹೇಳಿದ್ದಾಗಿ ಹೇಳಿದ ನಂತರ ಆಗಸ್ಟ್‌ 23ರಂದು ಎಸ್‌ ಐಟಿ ಚಿನ್ನಯ್ಯನನ್ನು ಬಂಧಿಸುತ್ತದೆ. ಇದೇ ಸೆಕ್ಷನ್‌ ಅಡಿಯಲ್ಲಿ ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ ಈತನ ಎರಡೂ ಹೇಳಿಕೆಗಳಲ್ಲಿ ಕೆಲವು ಅಂಶಗಳನ್ನು ಕುರಿತು ಹೊಂದಾಣಿಕೆ ಇರುವುದನ್ನು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಚಿನ್ನಯ್ಯನ ಎರಡನೇ ಹೇಳಿಕೆಯೇ ಸತ್ಯ ಎಂಬ ತೀರ್ಮಾನಕ್ಕೆ ಬರಲಾಗದು. ಆದ್ದರಿಂದ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ಅವಶ್ಯಕವಾಗಿದೆ. ನ್ಯಾಯಯುತ ತನಿಖೆ ನಡೆಸಲಿಕ್ಕಾಗಿಯೇ ಈತನ ಎರಡೂ ಹೇಳೀಕೆಗಳನ್ನು ಒಂದಕ್ಕೊಂದು ಪೂರಕವಾಗಿಯೇ ನೋಡಬೇಕಾಗಿದೆ.

ಎರಡನೇ ಹೇಳಿಕೆ ನೀಡಿದ ನಂತರ ಎಸ್‌ ಐಟಿಯು ಚಿನ್ನಯ್ಯನ ಪತ್ನಿ ಮತ್ತು ಸಹೋದರಿಯ ವಿಚಾರಣೆ ನಡೆಸಿದೆ. ಫೊರೆನ್ಸಕ್‌ ತಜ್ಞರ ಜತೆ ಎಸ್‌ ಐಟಿಯು ದಂತ ವೈದ್ಯ ಎಂ ಎಂ ದಯಾಕರ್‌ ಅವರು ನಡೆಸುತ್ತಿರುವ ಕ್ಲಿನಿಕ್‌ ಗೆ ಬೇಟಿ ನೀಡಿ ಪರಿಶೀಲನೆ ನಡೆಸಿದೆ. ತನಿಖೆಯ ಭಾಗವಾಗಿ ಬಿಎನ್‌ ಎಸ್‌ ಎಸ್‌ ಸೆ. 180ರ ಅಡಿಯಲ್ಲಿ ಎಸ್‌ ಐಟಿಯು ಮತ್ತೊಮ್ಮೆ ಚಿನ್ನಯ್ಯನ ಪೊಲೀಸ್‌ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ. ಇದಕ್ಕಾಗಿ ಎಸ್‌ ಐಟಿಯು ನ್ಯಾಯಾಲಯದ ಅನುಮತಿ ಕೇಳಿದೆ. ಬಹುಶಃ ಈತನ ಹೇಳಿಕೆಯನ್ನು ಪ್ರಸ್ತುತ ಚಿನ್ನಯ್ಯ ಇರುವ ಶಿವಮೊಗ್ಗ ಜೈಲಿನಲ್ಲಿಯೇ ಎಸ್‌ ಐಟಿಯು ದಾಖಲಿಸಿಕೊಳ್ಳಲಿದೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.

ಘಟನಾವಳಿಗಳು:

ದೂರು ದಾಖಲು: ಧರ್ಮಸ್ಥಳದ ಮಾಜಿ ಸ್ವಚ್ಚತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಚಿನ್ನಯ್ಯ ಎಂಬಾತ ಜುಲೈ3 ರಂದು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತಾನೆ. ತಾನು 1995 ರಿಂದ 2014 ರವರೆಗೆ ಸ್ಚಚ್ಚತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ನೂರಾರು ಶವಗಳನ್ನು ನನ್ನ ಮೂಲಕ ಬಲವಂತವಾಗಿ ಹೂತು ಹಾಕಿಸಲಾಗಿದೆ.ಕೆಲವು ಪ್ರಕರಣಗಳಲ್ಲಿ ಲೈಂಗಿಕ ಕಿರುಕುಳ ನಡೆದಿದ್ದ ಚಿನ್ಹೆಗಳೂ ಇದ್ದವು. ಈ ರೀತಿ ಶವಗಳನ್ನು ಹೂತು ಹಾಕಿರುವ ಸುಮಾರು  13 ಸ್ಥಳಗಳನ್ನು ಗುರುತಿಸಬಲ್ಲೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದ.

ಬಿಎನ್‌ ಎಸ್‌ ಎಸ್‌ ಸೆ. 183 ಅಡಿಯಲ್ಲಿ ಆರಂಭಿಕ ಹೇಳಿಕೆ ದಾಖಲು: ಜುಲೈ11 ರಂದು ಚಿನ್ನಯ್ಯ ಬೆಳ್ತಂಗಡಿ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಬಿ ಎನ್‌ ಎಸ್‌ ಎಸ್‌ ಸೆ. 183 ಅಡಿಯಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿರುತ್ತಾನೆ. ಸಾಕ್ಷಿಯಾಗಿ ತಲೆ ಬುರುಡೆ ಮತ್ತು ಕೆಲವು ಮೂಳೆಗಳನ್ನು ಹಾಜರುಪಡಿಸಿರುತ್ತಾನೆ.

ಎಸ್‌ ಐಟಿ ಸ್ಥಾಪನೆ: ಈ ಆರೋಪಗಳನ್ನು ಕುರಿತು ತನಿಖೆ ನಡೆಸುವಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ನಂತರ ರಾಜ್ಯ ಸರ್ಕಾರ ಜುಲೈ 19 ರಂದು ಎಸ್‌ ಐಟಿ ರಚಿಸುತ್ತದೆ.

ಚಿನ್ನಯ್ಯ ಬಂಧನ: ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಆಗಸ್ಟ್‌ 23ರಂದು ಎಸ್‌ ಐಟಿಯು ಚಿನ್ನಯ್ಯನನ್ನು ಬಂಧಿಸುತ್ತದೆ. ಈತ ನೀಡಿದ ತಲೆ ಬುರುಡೆ ಮನುಷ್ಯರದ್ದು ಅಲ್ಲ ಎಂದು ವಿಧಿ ವಿಜ್ಞಾನದ ಪರೀಕ್ಷೆಯಲ್ಲಿ ಸಾಬೀತಾಗುತ್ತದೆ. ನಂತರ ಈತ ತಾನು ಒತ್ತಡದಿಂದಾಗಿ ಸುಳ್ಳು ಹೇಳಿಕೆ ನೀಡಿದ್ದಾಗಿ ಒಪ್ಪಿಕೊಂಡಿರುತ್ತಾನೆ.

ಎರಡನೇ ಹೇಳಿಕೆ ದಾಖಲು: ಚಿನ್ನಯ್ಯನನ್ನು ಬಂಧಿಸಿದ ನಂತರ ಆತನಿಂದ ಹೊಸ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ. ಈ ಹೇಳಿಕೆಯನ್ನು ಸೆಪ್ಟಂಬರ್‌ 23, 25 ಮತ್ತು 27ರಂದು ದಾಖಲಿಸಿಕೊಳ್ಳಲಾಗಿರುತ್ತದೆ. ಈ ಸಂದರ್ಭದಲ್ಲಿ ಆತ ಕೆಲವರ ಒತ್ತಡದಿಂದಾಗಿ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿರುತ್ತಾನೆ.

More articles

Latest article