ಬಿಗ್ ಬಜೆಟ್ ಮೂವಿ ‘ಹಲಗಲಿ’ಯಿಂದ ಹೊರ ಬಂದ ಡಾರ್ಲಿಂಗ್ ಕೃಷ್ಣ : ಐತಿಹಾಸಿಕ ಸಿನಿಮಾ ಕೈಬಿಟ್ಟು ತಪ್ಪು ಮಾಡಿದರಾ..?

Most read

ಒಮ್ಮೊಮ್ಮೆ ಕೆಲವೊಂದು ಪಾತ್ರಗಳಿಗೆ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಆ ಒಂದು ಪಾತ್ರಕ್ಕೇನೆ ವರ್ಷಾನುಗಟ್ಟಲೇ ಕಾಯಬೇಕಾಗುತ್ತದೆ. ಅದಕ್ಕೆ ಬದ್ಧತೆ, ಶ್ರದ್ಧೆ ಕೊಂಚ ಜಾಸ್ತಿಯೇ ಬೇಕಾಗುತ್ತದೆ. ಈಗ ರಾಕಿಂಗ್ ಸ್ಟಾರ್ ಯಶ್ ಅವರನ್ನೇ ತೆಗೆದುಕೊಳ್ಳಿ. ವರ್ಷಾನುಗಟ್ಟಲೇ ಶ್ರದ್ಧೆಯಿಂದ ಮಾಡಿದ್ದಕ್ಕಲ್ಲವೇ ಕೆಜಿಎಫ್ ಸಿನಿಮಾ ಆಗಿದ್ದು, ಇಡೀ ದೇಶ ಕೊಂಡಾಡುತ್ತಿರುವುದು. ಆದರೆ ಈ ರೀತಿ ಒಂದೇ ಸಿನಿಮಾಗೆ ವರ್ಷಾನುಗಟ್ಟಲೇ ಸವೆಸುವುದು ಸಾಕಷ್ಟು ನಟರಿಗೆ ಇಷ್ಟವಾಗುವುದಿಲ್ಲ. ಇದೀಗ ಅದೇ ಸಾಲಿಗೆ ಡಾರ್ಲಿಂಗ್ ಕೃಷ್ಣ ಕೂಡ ಸೇರುತ್ತಾರೆ.

ಇತ್ತೀಚೆಗೆ ಬಿಗ್ ಬಜೆಟ್ ಸಿನಿಮಾ ಹಲಗಲಿ ಅನೌನ್ಸ್ ಆಗಿತ್ತು. ಇದಕ್ಕೆ ಡಾರ್ಲಿಂಗ್ ಕೃಷ್ಣ ನಾಯಕರಾಗಿದ್ದರು. ಆದರೆ ಇದೀಗ ಚಿತ್ರತಂಡದಿಂದ ಕೃಷ್ಣ ಹೊರಗೆ ಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ‌. ‘ಹಲಗಲಿ’ ಸಿನಿಮಾ ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧವನ್ನು ಮಾಡಿದ್ದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತ ಕಥೆಯಾಗಿತ್ತು. ಹತ್ತಾರು ವಿಶೇಷತೆಗಳಿಂದ ಈ ಸಿನಿಮಾ ಕೂಡಿತ್ತು. ಆದರೆ ಇಂಥ ಸಿನಿಮಾದಿಂದ ಡಾರ್ಲಿಂಗ್ ಕೃಷ್ಣ ಹೊರಗೆ ಬಂದಿರುವುದು ಶಾಕ್ ಎನಿಸಿದೆ.

ಈ ಸಿನಿಮಾ ಗತಕಾಲದ ಚರಿತ್ರೆಯನ್ನು ಹೇಳಲಿದೆ. ಹೀಗಾಗಿ ಸಮಯಾವಕಾಶ ಸಾಕಷ್ಟು ಬೇಕಾಗುತ್ತದೆ. ಇದೇ ಕಾರಣಕ್ಕೆ ನಿರ್ದೇಶಕ ಸುಕೇಶ್ ಹಾಗೂ ನಿರ್ಮಾಪಕ ಕಲ್ಯಾಣ ಚಕ್ರವರ್ತಿ ಧೂಳಿಪಾಳ್ಯ ಅವರು ಡಾರ್ಲಿಂಗ್ ಕೃಷ್ಣ ಅವರಿಗೆ ಎರಡು ವರ್ಷಗಳ ಕಾಲ ಈ ಸಿನಿಮಾಕ್ಕಾಗಿ ಸಮಯ ಮೀಸಲಿಡಲು ಕೇಳಿಕೊಂಡಿದ್ದಾರೆ. ಆದರೆ ಡಾರ್ಲಿಂಗ್ ಕೃಷ್ಣ ಹಲಗಲಿ ಅನೌನ್ಸ್ ಆದ ಮೇಲೆಯೇ ಫಾದರ್ ಚಿತ್ರಕ್ಕೂ ಮುಹೂರ್ತ ಮುಗಿಸಿಕೊಂಡಿದ್ದರು. ಇದು ಸಹಜವಾಗಿಯೇ ನಿರ್ದೇಶಕ, ನಿರ್ಮಾಪಕರಿಗೆ ಬೇಸರ ತರಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಡಾರ್ಲಿಂಗ್ ಕೃಷ್ಣ ಅವರು ಎರಡು ಸಿನಿಮಾ ಬ್ಯಾಲೆನ್ಸ್ ಮಾಡ್ತೀನಿ ಎಂದರು, ಬೇಡವೆಂದು ಬೇರೆ ನಾಯಕನ ಹುಡುಕಾಟ ನಡೆಸುತ್ತಿದ್ದಾರಂತೆ.

More articles

Latest article