ಕಾರು ಕೆರೆಗೆ ಉರುಳಿ ಕಾಮ್ರೇಡ್ ವೆಂಕಟೇಶ್ ಸಾವು

ಮುದುವಾಡಿ ಕೆರೆ ಏರಿಯ ಮೇಲೆ ಆಯಾ ತಪ್ಪಿ ಕೆರೆಗೆ ಬಿದ್ದ ಕಾರು

ಕೋಲಾರ : ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಕಾಮ್ರೇಡ್ ಟಿ.ಎಂ. ವೆಂಕಟೇಶ್ ಕಳೆದ ರಾತ್ರಿ ಸುಮಾರು ಒಂದು ಗಂಟೆ ಸಮಯದಲ್ಲಿ ತನ್ನ ಇಂಡಿಕಾ ಕಾರಿನಲ್ಲಿ  ಸ್ವಗ್ರಾಮ ತೊರದೇವಂಡಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ, ಮುದುವಾಡಿ ಕೆರೆ ಏರಿಯ ಮೇಲೆ ಆಯಾ ತಪ್ಪಿದ  ಕಾರು ಕೆರೆಗೆ ಉರುಳಿದ ಪರಿಣಾಮ ವೆಂಕಟೇಶ್ ಅವರು ಕಾರಿನ ಸಮೇತ ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ್ದಾರೆ.

ಜನಾನುರಾಗಿ ಯಾಗಿದ್ದ ಕಾಮ್ರೇಡ್ ಟಿ ಎಂ ವೆಂಕಟೇಶ್ ರವರು ನಾಳೆಯಿಂದ ಮೂರು ದಿನಗಳ ಕಾಲ ಕೋಲಾರ ನಗರದ ಹಳೆ ಬಸ್ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದ್ದ  ಕರ್ನಾಟಕ ಪ್ರಾಂತ ರೈತ ಸಂಘದ 18ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದರು.

ಕಳೆದ ರಾತ್ರಿಯೂ ಸಹ  ನಾಳೆಯ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಮುಗಿಸಿಕೊಂಡು  ರಾತ್ರಿ ತನ್ನ ಕಾರಿನಲ್ಲಿ ಮನೆಯತ್ತ ಮರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕೋಲಾರ : ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಕಾಮ್ರೇಡ್ ಟಿ.ಎಂ. ವೆಂಕಟೇಶ್ ಕಳೆದ ರಾತ್ರಿ ಸುಮಾರು ಒಂದು ಗಂಟೆ ಸಮಯದಲ್ಲಿ ತನ್ನ ಇಂಡಿಕಾ ಕಾರಿನಲ್ಲಿ  ಸ್ವಗ್ರಾಮ ತೊರದೇವಂಡಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ, ಮುದುವಾಡಿ ಕೆರೆ ಏರಿಯ ಮೇಲೆ ಆಯಾ ತಪ್ಪಿದ  ಕಾರು ಕೆರೆಗೆ ಉರುಳಿದ ಪರಿಣಾಮ ವೆಂಕಟೇಶ್ ಅವರು ಕಾರಿನ ಸಮೇತ ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ್ದಾರೆ.

ಜನಾನುರಾಗಿ ಯಾಗಿದ್ದ ಕಾಮ್ರೇಡ್ ಟಿ ಎಂ ವೆಂಕಟೇಶ್ ರವರು ನಾಳೆಯಿಂದ ಮೂರು ದಿನಗಳ ಕಾಲ ಕೋಲಾರ ನಗರದ ಹಳೆ ಬಸ್ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದ್ದ  ಕರ್ನಾಟಕ ಪ್ರಾಂತ ರೈತ ಸಂಘದ 18ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದರು.

ಕಳೆದ ರಾತ್ರಿಯೂ ಸಹ  ನಾಳೆಯ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಮುಗಿಸಿಕೊಂಡು  ರಾತ್ರಿ ತನ್ನ ಕಾರಿನಲ್ಲಿ ಮನೆಯತ್ತ ಮರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.

More articles

Latest article

Most read