Sunday, September 8, 2024

ಕೋಲಾರದಲ್ಲಿ ವಿಚಾರ ಕ್ರಾಂತಿಗೆ ಆಹ್ವಾನ- 50

Most read

ಕುವೆಂಪು ಅವರ ʻವಿಚಾರ ಕ್ರಾಂತಿಗೆ ಆಹ್ವಾನ-50 ವರ್ಷʼ ಕಾರ್ಯಕ್ರಮ

ಕೋಲಾರ : ರಾಷ್ಟ್ರಕವಿ ಕುವೆಂಪು ಅವರ ಪ್ರಸಿದ್ಧ ವಿಚಾರ ಕ್ರಾಂತಿಗೆ ಆಹ್ವಾನ ಕೃತಿಗೆ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ‘ವಿಚಾರ ಕ್ರಾಂತಿಗೆ ಆಹ್ವಾನ- 50’ ಕಾರ್ಯಕ್ರಮವು ಕೋಲಾರದಲ್ಲಿ ಆಯೋಜನೆಗೊಂಡಿದೆ.‌

ದಿನಾಂಕ: 24-02-2024ರ ಶನಿವಾರ, ಬೆಳಿಗ್ಗೆ 10.30ಕ್ಕೆ ಕೋಲಾರ, ಅಂತರಗಂಗೆ ರಸ್ತೆ, ಪತ್ರಕರ್ತರ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಂಸ್ಕೃತಿ ಚಿಂತಕರಾದ ಎಲ್.ಎನ್. ಮುಕುಂದರಾಜ್ ಅವರು ಉದ್ಘಾಟನೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಮರ್ಶಕರಾದ ಡಾ. ವಿ. ಚಂದ್ರಶೇಖರ ನಂಗಲಿ, ವಹಿಸಿಕೊಳ್ಳಲಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ವಿವಿ, ಆದಿಮ ಹಾಗೂ ಸಮುದಾಯಗಳು ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ.

More articles

Latest article