ವಿಮಾನ ಪತನ: ಮೃತ ಪಟ್ಟವರದ್ದುಒಂದೊಂದು ಕಥೆ ಮತ್ತು ವ್ಯಥೆ

Most read

ಅಹಮದಾಬಾದ್: ಗುಜರಾತ್‌ ನ ಅಹಮದಾಬಾದ್‌ ನಿಂದ ಲಂಡನ್‌ ಗೆ ಹೊರಟಿದ್ದ ಏರ್ ಇಂಡಿಯಾದ ಎಐ–171 ವಿಮಾನ ಪತನಗೊಂಡಿದ್ದು ಬಹುತೇಕ ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ ಮತ್ತು ವ್ಯಥೆ.

ಈ ದುರಂತದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರೂ ಅಸು ನೀಗಿದ್ದಾರೆ. ಲಂಡನ್‌ ನಲ್ಲಿರುವ ಮಗಳ ಮನೆಗೆ ಹೊರಟಿದ್ದ ಅವರು ಮಸಣ ಸೇರಿದ್ದಾರೆ. 

ಒಂದೇ ಕುಟುಂಬದ ಐವರು ಅಸು ನೀಗಿದ್ದಾರೆ. ಪ್ರತೀಕ್‌ ಜೋಶಿ ಅವರ ಪತ್ನಿ ಡಾ. ಕೋಮಿ ವ್ಯಾಸ್‌ ಮತ್ತು ಅವರ ಮೂವರು ಮಕ್ಕಳು ಮೃಥಪಟ್ಟಿದ್ದಾರೆ. ರಾಜಸ್ಥಾನ ಮೂಲದ ಇವರು ಲಂಡನ್‌ ನಲ್ಲಿ ಶಾಶ್ವತವಾಗಿ ನೆಲೆಸಲು ಹೊರಟಿದ್ದರು.

ಈ ವರ್ಷದ ಆರಂಭದಲ್ಲಿ ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್‌ಪುರೋಹಿತ್ ಮತ್ತು ಮನ್ಫೂಲ್ ಸಿಂಗ್ ವಿವಾಹವಾಗಿದ್ದರು. ಲಂಡನ್‌ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪತಿಯನ್ನು ಭೇಟಿ ಮಾಡಲು ಹೊರಟಿದ್ದ ಖುಷ್ಬೂ ಬಾರದ ಲೋಕಕ್ಕೆ ಹೊರಟಿದ್ದಾರೆ. ಇದೇ ವಿಮಾನದಲ್ಲಿ ಅವರೂ ಪ್ರಯಾಣಿಸುತ್ತಿದ್ದರು.

ಪವಾಡದಂತೆ ಬದುಕುಳಿದ ರಾಣಾ ಆನಂದಿಬೆನ್‌:

ವಿಮಾನದ ತುರ್ತು ನಿರ್ಗಮನ ಬಾಗಿಲು ಬಳಿಯ ಸಂಖ್ಯೆ 11-ಎ ಆಸನದಲ್ಲಿ ಕುಳಿತಿದ್ದ ರಾಣಾ ಆನಂದಿಬೆನ್‌ ಎಂಬ ಪ್ರಯಾಣಿಕರು ಬದುಕುಳಿದಿದ್ದಾರೆ. ಅಹಮದಾಬಾದ್ ಪೊಲೀಸ್ ಕಮಿಷನರ್ ಜಿ.ಎಸ್. ಮಲಿಕ್ ಈ ವಿಷಯ ತಿಳಿಸಿದ್ದು, ರಾಣಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

ತಲಾ ರೂ.1 ಕೋಟಿ ಪರಿಹಾರ:ಟಾಟಾ ಸಂಸ್ಥೆ ಪ್ರಕಟಣೆ:

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ನೀಡುವುದಾಗಿ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷ ಎನ್. ಚಂದ್ರಶೇಖರನ್ ಪ್ರಕಟಿಸಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರು ಮತ್ತು ಗಾಯಾಳುಗಳಿಗೆ ಅಗತ್ಯ ನೆರವು ಒದಗಿಸುತ್ತೇವೆ ಎಂದು ಚಂದ್ರಶೇಖರನ್ ತಿಳಿಸಿದ್ದಾರೆ. ದುರಂತದಲ್ಲಿ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಟಾಟಾ ಸಮೂಹವೇ ಭರಿಸಲಿದೆ ಎಂದೂ ತಿಳಿಸಿದ್ದಾರೆ.

More articles

Latest article