ಕಾರಣವೇ ಇಲ್ಲದೆ ನಟ ಚೇತನ್ ಚಂದ್ರಗೆ ರಕ್ತ ಬರುವಂತೆ ಹೊಡೆದ 20 ಜನ..!

Most read

ಬೆಂಗಳೂರು: ದೇವಸ್ಥಾನಕ್ಕೆ ಹೋಗಿ ಬರುವಾಗ ನಟ ಚೇತನ್ ಚಂದ್ರಗೆ ಪರಿಚಯವೇ ಇಲ್ಲದ ಗುಂಪೊಂದು ಹಿಗ್ಗಾಮುಗ್ಗ ಹೊಡೆದು, ರಕ್ತ ಬರುವಂತೆ ಮಾಡಿದ್ದಾರೆ. ಅವರ ಬಳಿಯಿದ್ದ ಪರ್ಸ್, ದುಡ್ಡು, ಚಿನ್ನಾಭರಣ ದೋಚಿಕೊಂಡಿದ್ದಾರೆ.

ಈ ಬಗ್ಗೆ ಮಧ್ಯರಾತ್ರಿಯಲ್ಲಿ ಚೇತನ್ ಚಂದ್ರ ವಿಡಿಯೋ ಮಾಡಿ ಬಿಟ್ಟಿದ್ದಾರೆ. ಮದ್ಯಪಾನ ಮಾಡಿದ್ದ ಗುಂಪೊಂದು ನನ್ನ ಕಾರನ್ನು ಅಡ್ಡ ಹಾಕಿದ್ದರು. ಸುಮಾರು 20ಕ್ಕೂ ಹೆಚ್ಚು ಜನ ಬಂದು ನನಗೆ ಮೈಯಲ್ಲೆಲ್ಲಾ ರಕ್ತ ಬರುವಂತೆ ಹೊಡೆದಿದ್ದಾರೆ. ಅವರು ಯಾಕೆ ಹೊಡೆದರು ಎಂಬುದು ಗೊತ್ತಿಲ್ಲ. ಕಗ್ಗಲೀಪುರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಇಲ್ಲೆ ಪಕ್ಕದಲ್ಲಿಯೇ ಇದ್ದ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ವಿಡಿಯೋ ನನ್ನ ಅಪ್ಪ, ಅಮ್ಮ, ಹೆಂಡತಿ ನೋಡಬಹುದು. ಆದರೆ ಗಾಬರಿಯಾಗಬೇಡಿ, ನನಗೆ ಏನು ಆಗಿಲ್ಲ. ಚೆನ್ನಾಗಿದ್ದೇನೆ. ಹುಷಾರಾಗಿದ್ದೇನೆ.

https://www.instagram.com/reel/C638_oryw6Y/?igsh=MWZteTlreDUwbnFnYw==

ನಿನ್ನೆ ಮದರ್ಸ್ ಡೇ ಹಿನ್ನೆಲೆ ಅಮ್ಮನನ್ನು ಹೊರಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿಂದ ದೇವಸ್ಥಾನಕ್ಕೆ ಹೋಗಿ ಬರುವಾಗ ಇಂಥದ್ದೊಂದು ಘಟನೆ ನಡೆದಿದೆ. ಅವನೊಬ್ಬ ಕಿರುಚಿಕೊಂಡು ಬಂದು ದಾರಿಗೆ ಅಡ್ಡ ಹಾಕಿದ. ಚೆನ್ನಾಗಿ ಕುಡಿದಿದ್ದ ಅನ್ನಿಸುತ್ತೆ. ರಾಬರಿ ಮಾಡುವುದಕ್ಕೆ ಬಂದಿದ್ದಾರೆ ಎಂದುಕೊಂಡೆ. ಅವನ ತಮ್ಮ, ತಂಗಿ ಅನ್ಸುತ್ತೆ ಓಡೋಡಿ ಬಂದರು. ಆಗಲೂ ಹೊಡೆದಿದ್ದಾರೆ. ಕಾರಿನ ಮಿರರ್ ಎಲ್ಲಾ ಹೊಡೆದು ಹಾಕಿದ್ದಾರೆ. ಈ ತರದ ಕೆಟ್ಟ ಜನ ತುಂಬಾ ಇದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದೀನಿ ಎಂದಿದ್ದಾರೆ. ವಿಡಿಯೋ ಮೂಲಕ ಈ ವಿಚಾರ ಹಂಚಿಕೊಂಡಿದ್ದು, ಚೇತನ್ ಚಂದ್ರ ಮೈಯೆಲ್ಲಾ ರಕ್ತಸಿಕ್ತವಾಗಿದೆ.

More articles

Latest article