Sunday, September 8, 2024

ದರ್ಶನ್ ಹಾಗೂ ವಿಜಯಲಕ್ಷ್ಮೀಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ : ಈ ಹೊತ್ತಲ್ಲಿ ಪವಿತ್ರಾ ಗೌಡ ಕರ್ಮದ ಸ್ಟೇಟಸ್ ಹಾಕಿದ್ದೇಕೆ..?

Most read

ದರ್ಶನ್ ಹಾಗೂ ವಿಜಯಲಕ್ಷ್ಮೀ ದಾಂಪತ್ಯ ಜೀವನಕ್ಕೆ 24 ವರ್ಷ. 2003ರಲ್ಲಿ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಇಬ್ಬರಿಗೂ ಮುದ್ದಾದ ಮಗನಿದ್ದಾನೆ. ವಿನೀಶ್ ಈಗಾಗಲೇ ತಂದೆಯ ಜೊತೆಗೆ ಎರಡು ಸಿನಿಮಾ ಕೂಡ ಮಾಡಿದ್ದಾನೆ. ಇತ್ತಿಚೆಗಷ್ಟೇ ವಿಜಯಲಕ್ಷ್ಮೀ ಹಾಗೂ ಕುಟುಂಬದವರು ದುಬೈ ಪ್ರವಾಸಕ್ಕೆ ಹೋಗಿದ್ದರು. ಮಕ್ಕಳಿಗೆ ಶಾಲೆಯಲ್ಲಿ ಬೇಸಿಗೆ ರಜೆ ಇದ್ದ ಕಾರಣಕ್ಕೆ ದಿನಕರ್ ಮಕ್ಕಳನ್ನು ಕರೆದುಕೊಂಡು ಹೋಗಿದ್ದರು ಎಂಬ ಮಾತಿದೆ. ಇದೇ ಸಂಧರ್ಭದಲ್ಲಿ ಆ್ಯನಿವರ್ಸರಿ ಕೂಡ ಬಂದಿದೆ. ದುಬೈನಲ್ಲೂ ದರ್ಶನ್ ಗೆ ಅಭಿಮಾನಿಗಳ ಸಂಖ್ಯೆ ಏನು ಕಡಿಮೆ ಇಲ್ಲ. ಎಲ್ಲರೂ ಸೇರಿ ದರ್ಶನ್ ಹಾಗೂ ವಿಜಯಲಕ್ಷ್ಮೀ ಮದುವೆ ವಾರ್ಷಿಕೋತ್ಸವವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ಫೋಟೋ, ವಿಡಿಯೋಗಳು ಸಾಮಾನ್ಯವಾಗಿ ದರ್ಶನ್ ಅಭಿಮಾನಿಗಳ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಅಣ್ಣ ಅತ್ತಿಗೆಗೆ ವಿಶ್ ಕೂಡ ಮಾಡಿದ್ದಾರೆ.

ನಿರ್ಮಾಪಕಿ ಶೈಲಜಾ ನಾಗ್ ಕೂಡ ಈ ಫೋಟೋವೊಂದನ್ನು ಹಾಕಿಕೊಂಡು ವಿಶ್ ಮಾಡಿದ್ದರು. ಅದನ್ನ ವಿಜಯಲಕ್ಷ್ಮೀ ದರ್ಶನ್ ಶೇರ್ ಮಾಡಿಕೊಂಡಿದ್ದರು. ಇದಾದ ಎರಡು ಗಂಟೆಗೆ ಪವಿತ್ರಾ ಗೌಡ ಅವರ ಸ್ಟೇಟಸ್ ನಲ್ಲಿ ಕರ್ಮ ರಿಟರ್ನ್ಸ್ ವಿಡಿಯೋ ಅಪ್ಲೋಡ್ ಆಗಿದೆ. ಅದರಲ್ಲೂ ದರ್ಶನ್ ಕರ್ಮದ ಬಗ್ಗೆ ಮಾತನಾಡಿರುವ ವಿಡಿಯೋ ಅದಾಗಿದೆ.

ವಿಜಯಲಕ್ಷ್ಮೀ ಹಾಗೂ ಪವಿತ್ರಾ ನಡುವಿನ ಗಲಾಟೆ ಗುಟ್ಟಾಗಿ ಏನು ಉಳಿದಿಲ್ಲ. ವಿಜಯಲಕ್ಷ್ಮೀ ಇತ್ತಿಚೆಗೆ ಪವಿತ್ರಾ ಅವರ ಗಂಡನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಚ್ಚರಿಕೆ ನೀಡಿದ್ದರು. ಪವಿತ್ರಾ ಕೂಡ ಅದೇ ಸಮಯಕ್ಕೆ ದರ್ಶನ್ ಹಾಗೂ ನನ್ನದು ಹತ್ತು ವರ್ಷದ ನಂಟು ಎಂದು ರೊಚ್ಚಿಗೆದ್ದಿದ್ದರು. ಆದರೆ ಇದೆಲ್ಲಾ ಗಲಾಟೆಯಾದ ಮೇಲೆ ದರ್ಶನ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಹೆಂಡತಿಯ ಜೊತೆಗೆ. ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪವಿತ್ರಾ ಫೋಟೋ ಬಿಡುವುದು ನಡೆದೆ ಇದೆ. ಆದರೆ ಈಗ ಕರ್ಮ ರಿಟರ್ನ್ ಅಂತ ಯಾರಿಗೆ ಹೇಳಿದರು ಎಂಬುದೇ ಅನುಮಾನ. ದರ್ಶನ್ ಅವರಿಗಾ..? ಇಲ್ಲ ಫೋಟೋ ಹಂಚಿಕೊಂಡ ಶೈಲಜಾ ನಾಗ್ ಅವರಿಗಾ ತಿಳಿಯದಾಗಿದೆ. ಆದರೆ ಈ ವಿಚಾರವಂತು ಸಖತ್ ಸದ್ದು ಮಾಡ್ತಿದೆ. ಚರ್ಚೆಗೆ ಕಾರಣವಾಗಿದೆ.

More articles

Latest article