ಮೃತ ನಟಿ ಪವಿತ್ರಾ ಬಗ್ಗೆ ಏನಿದು ಸುದ್ದಿ..? ಚಂದ್ರಕಾಂತ್ ಅವರ ಹೆಂಡ್ತಿಗೆ ಮೋಸ ಮಾಡಿದ್ರಾ..?

Most read

ಕಳೆದ ವಾರವಷ್ಟೇ ಕಿರುತೆರೆ ನಟಿ ಪವಿತ್ರಾ ಜಯರಾಂ ಆಕ್ಸಿಡೆಂಟ್ ನಿಂದ ಸಾವನ್ನಪ್ಪಿದ್ದರು. ಅವರ ಜೊತೆಗೆ ಇದ್ದಂತ ಚಂದ್ರಕಾಂತ್ ಅವರು ಕೂಡ ಇದೀಗ ಆತ್ಮಹತ್ಯೆ ಮಾಡಿಕೊಂಡು ನಿಧನರಾಗಿದ್ದಾರೆ. ತ್ರಿನಯನಿ ಧಾರಾವಾಹಿಯಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಒಂದೇ ಮನೆಯಲ್ಲಿಯೇ ವಾಸವಾಗಿದ್ದರು. ಆದರೆ ಇದೀಗ ಅದೇ ಮನೆಯಲ್ಲಿ ಚಂದ್ರಕಾಂತ್ ಸಾವನ್ನಪ್ಪಿದ್ದಾರೆ. ಚಂದ್ರಕಾಂತ್ ಸಾವಿನ ಬಗ್ಗೆ ಅವರ ಪತ್ನಿ ಮಾತನಾಡಿದ್ದು, ಪವಿತ್ರಾ ಮೇಲೆ ಆರೋಪ ಮಾಡಿದ್ದಾರೆ. ಪವಿತ್ರಾ ಹಾಗೂ ನನ್ನ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ.

ಚಂದ್ರಕಾಂತ್ ಶಿಲ್ಪಾ ಎನ್ನುವವರನ್ನು ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಸಾವಿನ ಬಳಿಕ ಮಾತನಾಡಿದ ಶಿಲ್ಪಾ, ತನ್ನ ಪತಿಯ ಬಾಳಲ್ಲಿ ಪವಿತ್ರಾ ಆಗಮನ ಆದಮೇಲೆ ನನ್ನ ಸಂಸಾರ ಹಾಳಾಯ್ತು. ಚಂದ್ರಕಾಂತ್ ಹಾಗೂ ನಾನು ಪ್ರೀತಿ ಮಾಡುತ್ತಿದ್ದೆವು. ನಮ್ಮಿಬ್ಬರ ಪ್ರೀತಿಗೆ ಮನೆಯವರು ಒಪ್ಪಿರಲಿಲ್ಲ. ಅವರೆಲ್ಲರ ವಿರೋಧದ ನಡುವೆಯೂ ಮದುವೆಯಾದೆವು. ಮದುವೆಯಾದ ಮೇಲೆ ಏನೇ ಸಮಸ್ಯೆ ಬಂದರು ಮನೆಯವರಿಗೆ ಹೇಳುತ್ತಿರಲಿಲ್ಲ. ನನ್ನ ಗಂಡ ಮನೆಗೆ ಬಾರದೆ ಇದ್ದರೂ ಮಕ್ಕಳನ್ನು ನಾನೇ ಸಾಕಿದ್ದೇನೆ. ಪವಿತ್ರಾ ಹಾಗೂ ನನ್ನ ಪತಿ ರಿಲೇಷನ್ ಶಿಪ್ ನಲ್ಲಿ ಇರುವ ವಿಚಾರ ನನಗೆ ಗೊತ್ತಿತ್ತು. ಲಾಕ್ ಡೌನ್ ಸಮಯದಲ್ಲಿ ಇಬ್ಬರು ಒಟ್ಟಿಗೆ ಇದ್ದರು.

ಆ ಬಳಿಕವೇ ಚಂದ್ರಕಾಂತ್ ವಿಚಿತ್ರವಾಗಿ ಆಡುವುದಕ್ಕೆ ಶುರು ಮಾಡಿದರು. ನನಗೆ ಹಿಂಸೆ ನೀಡುತ್ತಿದ್ದರು. ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ನಮ್ಮ ಸಂಸಾರ ಚೆನ್ನಾಗಿಯೇ ಇತ್ತು ಆದರೆ ನಮ್ಮ ಬಾಳಲ್ಲಿ ಪವಿತ್ರಾ ಬಂದ ಮೇಲೆ ಸಮಸ್ಯೆ ಶುರುವಾಯಿತು ಎಂದು ನೋವು ತೋಡಿಕೊಂಡಿದ್ದಾರೆ.

More articles

Latest article