ನವದೆಹಲಿ : ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ 2025 ರ ಅಂತಿಮ ಫಲಿತಾಂಶವನ್ನು ಆಯೋಗವು ಮಾರ್ಚ್ 6ರಂದು ಪ್ರಕಟಿಸಿದೆ.
ಈ ಬಾರಿ ಅನುಜ್ ಅಗ್ನಿಹೋತ್ರಿ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ತಮಿಳುನಾಡು ಮೂಲದ ರಾಜೇಶ್ವರಿ ಸುವೆ ಎಂ. ಅವರು ಇಡೀ ದೇಶಕ್ಕೇ ಎರಡನೇ ರ್ಯಾಂಕ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅವರು ಈ ಬಾರಿಯ ‘ಮಹಿಳಾ ಟಾಪರ್’ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ದೇಶಕ್ಕೇ ಪ್ರಥಮ ಸ್ಥಾನ ಪಡೆದಿರುವ ಅನುಜ್ ಅಗ್ನಿಹೋತ್ರಿ ಅವರು ರಾಜಸ್ಥಾನದ ಜೋಧ್ಪುರ ಮೂಲದವರು. 2023ರಲ್ಲಿ ಜೋಧ್ಪುರದ ಪ್ರತಿಷ್ಠಿತ ಏಮ್ಸ್ ನಲ್ಲಿ ಎಂಬಿಬಿಎಸ್ ಪದವಿ ಪೂರೈಸಿರುವ ಇವರು, ಪ್ರಸ್ತುತ ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಗರಿಕ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ತವ್ಯದ ಜೊತೆಯಲ್ಲೇ ಕಠಿಣ ಪರಿಶ್ರಮ ಹಾಕಿ ಓದಿರುವ ಅವರು ಈಗ ಈ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ರಾಜೇಶ್ವರಿ ಅವರ ಯಶೋಗಾಥೆ ವೃತ್ತಿಜೀವನ ಮತ್ತು ಉನ್ನತ ಕನಸುಗಳನ್ನು ಒಟ್ಟಿಗೆ ಸರಿದೂಗಿಸುವ ಪ್ರತಿಯೊಬ್ಬರಿಗೂ ಅತ್ಯುತ್ತಮ ಉದಾಹರಣೆಯಾಗಿದೆ. ತಮಿಳುನಾಡು ಲೋಕಸೇವಾ ಆಯೋಗದ ಗ್ರೂಪ್ 1 ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಅವರು, ಪ್ರಸ್ತುತ ‘ಡೆಪ್ಯುಟಿ ಕಲೆಕ್ಟರ್’ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕದ ಟಾಪರ್ : ಕರ್ನಾಟಕದ 22 ಅಭ್ಯರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರಲ್ಲಿ ಕಿರಣ್ ಕಮಾಟೆ ಅವರು ಅಖಿಲ ಭಾರತ ಮಟ್ಟದಲ್ಲಿ 53ನೇ ರ್ಯಾಂಕ್ ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರ. ಹಾಗೆಯೇ, 82ನೇ ರ್ಯಾಂಕ್ ಪಡೆದ ಸಂದೀಪ್ ಬಡಾದ್ ಅವರು ರಾಜ್ಯಕ್ಕೆ ದ್ವಿತೀಯ ಟಾಪರ್ ಆಗಿದ್ದಾರೆ.
ಕರ್ನಾಟಕದ 22 ಸಾಧಕರ ಪಟ್ಟಿ
53ನೇ ರ್ಯಾಂಕ್ – ಕಿರಣ್ ಕಮಾಟೆ
82ನೇ ರ್ಯಾಂಕ್ – ಸಂದೀಪ್ ಬಡಾದ್
169ನೇ ರ್ಯಾಂಕ್ – ಶ್ರೇಯಾಂಶ್ ಗೋಮ್ಸ್
310ನೇ ರ್ಯಾಂಕ್ – ಚಿನ್ಮಯೀ ಪಿ.
389ನೇ ರ್ಯಾಂಕ್ – ಮನೋಜ್ ಜಿ. ಎಸ್.
436ನೇ ರ್ಯಾಂಕ್ – ಎ. ಮಧು
462ನೇ ರ್ಯಾಂಕ್ – ವರುಣ್ ಗೌಡ ಪಿ.
469ನೇ ರ್ಯಾಂಕ್ – ನಿವೇದಿತಾ ಸಿ. ಭಾವಿಮಣಿ
504ನೇ ರ್ಯಾಂಕ್ – ವಿಶಾಖ ಕದಂ
525ನೇ ರ್ಯಾಂಕ್ – ಸೂರಜ್ ಕೆ. ಎಲ್.
554ನೇ ರ್ಯಾಂಕ್ – ಧನಂಜಯ ಆರ್.
556ನೇ ರ್ಯಾಂಕ್ – ಉಲ್ಲಾಸ್ ಎಂ. ಎಸ್.
622ನೇ ರ್ಯಾಂಕ್ – ಮುತ್ತೇಶ್ ಗೌಡ ಎ. ಎಸ್.
641ನೇ ರ್ಯಾಂಕ್ – ಸಾಗರ್ ಎ.
660ನೇ ರ್ಯಾಂಕ್ – ಪಾಂಡುರಂಗ ಎಸ್. ಕಂಬಳಿ
661ನೇ ರ್ಯಾಂಕ್ – ಚಂದನ್ ವೈ.
664ನೇ ರ್ಯಾಂಕ್ – ಬಸವರಾಜ್ ಎಂ. ಜವಳಿ
720ನೇ ರ್ಯಾಂಕ್ – ಪ್ರವೀಣ ಹೆಚ್. ಟಿ.
732ನೇ ರ್ಯಾಂಕ್ – ಯತೀಶ್ ಎಂ. ಎ.
739ನೇ ರ್ಯಾಂಕ್ – ಬಸವರಾಜ್ ಎಂ. ಪಾಟೀಲ್
786ನೇ ರ್ಯಾಂಕ್ – ಅನಿರುದ್ಧ್ ಕಟ್ಟಿಮನಿ
880ನೇ ರ್ಯಾಂಕ್ – ಚಂದ್ರಶೇಖರ್

