ಗುಂಡಿಕ್ಕಿ ಇಬ್ಬರ ಹತ್ಯೆ: ಬೆಚ್ಚಿ ಬಿದ್ದ ಹಾಸನ

Most read

ಹಾಸನ: ಹೊಯ್ಸಳ ನಗರದಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳನ್ನು ಗುಂಡಿಟ್ಟು ಸಾಯಿಸಿರುವ ಘಟನೆ ನಡೆದಿದೆ.

ಶುಂಠಿ ವ್ಯಾಪಾರಿಯಾದ ಶರಾಫತ್‌ ಅಲಿ ಮತ್ತು ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಮೃತಪಟ್ಟ ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಬೇಕಿದೆ.

ಹತ್ಯೆಗೀಡಾದ ಶರಾಫತ್‌ ಅಲಿ ಶುಂಠಿ ವ್ಯಾಪಾರದ ಜೊತೆ ರಿಯಲ್‌ ಎಸ್ಟೇಟ್‌ ನಲ್ಲೂ ತೊಡಗಿಸಿಕೊಂಡಿದ್ದರು. ವ್ಯವಹಾರದಲ್ಲಿ ನಡೆದಿರಬಹುದಾದ ವಿವಾದದಿಂದ ಕೊಲೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಘಟನಾಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ತನಿಖೆ ಆರಂಬಿಸಿದ್ದಾರೆ.

More articles

Latest article