ಮತ್ತೆ ಅಬ್ಬರಿಸಿದ ಮಳೆ: ಹೊಳೆಗಳಾದ ರಸ್ತೆಗಳು, ಶಾಲಾ ಮಕ್ಕಳ ಪರದಾಟ

Most read

ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದ್ದು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಗೊಂಡಿದ್ದು, ರಸ್ತೆಗಳ ಮೇಲೆ ಹೊಳೆಯಂತೆ ಮಳೆ ನೀರು ಹರಿಯುತ್ತಿದೆ.

ಸಕಲೇಶಪುರ ತಾಲ್ಲೂಕಿನ, ಮಠಸಾಗರದ ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಜನರು ಅಪಾಯವಿದ್ದರೂ ಇದೇ ಸೇತುವೆ ಮೇಲೆ ಸಂಚರಿಸುವಂತಾಗಿದೆ.

ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ ಪಡುತ್ತಿದ್ದಾರೆ. ಹರಿಯುತ್ತಿರುವ ‌ನೀರಿನಲ್ಲಿ ವಿದ್ಯಾರ್ಥಿಗಳನ್ನು ಹೊತ್ತು ತಂದು ಶಾಲೆಗೆ ಕಳುಹಿಸುತ್ತಿರುವ ಪೋಷಕರ ದೃಶ್ಯಗಳು ಈ ಭಾಗದಲ್ಲಿ ಸಾಮಾನ್ಯವಾಗಿದೆ.

ಹೆನ್ಲಿ-ಕೃಷ್ಣಾಪುರ-ಮಠಸಾಗರ ಸಕಲೇಶಪುರ ಮಾರ್ಗದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಶಾಲೆಗೆ ರಜೆ ನೀಡದ ಜಿಲ್ಲಾಧಿಕಾರಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

More articles

Latest article