SSLC ಫಲಿತಾಂಶ: 625 ಅಂಕಗಳನ್ನು ಪಡೆದ 22 ವಿದ್ಯಾರ್ಥಿಗಳು; ಮರು ಪರೀಕ್ಷೆ ದಿನಾಂಕ ಪ್ರಕಟ
- ಅಖಿಲ್ ಅಹ್ಮದ್ ನದಾಫ್ – ವಿಜಯಪುರ
- ಭಾವನಾ – ಬೆಂಗಳೂರು ಗ್ರಾಮಾಂತರ
- ಧನಲಕ್ಷ್ಮಿ ಎಂ – ಬೆಂಗಳೂರು ಉತ್ತರ
- ಧನುಷ್ – ಮೈಸೂರು
- ಧೃತಿ – ಮಂಡ್ಯ
- ಜಾಹ್ನವಿ – ಬೆಂಗಳೂರು ದಕ್ಷಿಣ
- ಮಧುಸೂದನ್ ರಾಜು – ಬೆಂಗಳೂರು ಉತ್ತರ
- ಮೊಹಮ್ಮದ್ ಮಸ್ತೂರ್ ಆದಿಲ್ – ತುಮಕೂರು
- ಮೌಲ್ಯ ಡಿ ರಾಜ್ – ಚಿತ್ರದುರ್ಗ
- ನಮನ – ಶಿವಮೊಗ್ಗ
- ನಮಿತಾ – ಬೆಂಗಳೂರು ದಕ್ಷಿಣ
- ನಂದನ್ – ಚಿತ್ರದುರ್ಗ
- ನಿತ್ಯಾ ಎಂ ಕುಲಕರ್ಣಿ – ಶಿವಮೊಗ್ಗ
- ರಂಜಿತಾ – ಬೆಂಗಳೂರು ಗ್ರಾಮಾಂತರ
- ರೂಪ ಚನ್ನಗೌಡ ಪಾಟೀಲ್ – ಬೆಳಗಾವಿ
- ಶಹಿಷ್ಣು – ಶಿವಮೊಗ್ಗ
- ಶಗುಫ್ತಾ ಅಂಜುಮ್ – ಸಿರಸಿ
- ಸ್ವಸ್ತಿ ಕಾಮತ್ – ಉಡುಪಿ
- ತನ್ಯಾ – ಮೈಸೂರು
- ಉತ್ಸವ್ ಪಾಟೀಲ್ – ಹಾಸನ
- ಯಶವಂತ್ ರೆಡ್ಡಿ – ಮಧುಗಿರಿ
- ಯುಕ್ತಿ – ಬೆಂಗಳೂರು ದಕ್ಷಿಣ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯ ಮುಖ್ಯಾಂಶಗಳು:
ಅನುತ್ತೀರ್ಣ ಆದವರಿಗೆ ಮತ್ತೆ ಪರೀಕ್ಷಾ ದಿನಾಂಕ ಪ್ರಕಟವಾಗಿದೆ. . SSLC-2 ಪರೀಕ್ಷೆ ಮೇ 26 ರಿಂದ ಜೂನ್ 2 ರವರೆಗೆ ನಡೆಯಲಿದೆ. ಮರು ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ. SSLC- 3 ಪರೀಕ್ಷೆ ಜೂ. 23ರಿಂದ ಜೂ. 30ರವರೆಗೆ ನಡೆಯಲಿದೆ. ಈ ಬಾರಿ ಗ್ರೇಸ್ ಮಾರ್ಕ್ಸ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇಂದಿನಿಂದಲೇ ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಮೇ-7 ರವರೆಗೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ಇರಲಿದೆ. ಮೇ 4 ರಿಂದ 11ನೇ ತಾರೀಖಿನವರೆಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಉಡುಪಿಯು ಶೇ.89.96 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದರೆ ಉತ್ತರ ಕನ್ನಡ ಜಿಲ್ಲೆ ಶೇ.83.19 ರಷ್ಟು ಫಲಿತಾಂಶಗಳೊಂದಿಗೆ ತೃತೀಯ ಸ್ಥಾನ ಗಳಿಸಿದೆ.