ಹಿಂದಿ ದಬ್ಬಾಳಿಕೆ ಭಾಷೆಯಾದರೆ ಧಿಕ್ಕರಿಸುತ್ತೇವೆ: ಅಮಿತ್‌ ಶಾಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು

Most read

ಬೆಂಗಳೂರು: ಹಿಂದಿಯನ್ನು ಒಂದು ಸಂವಹನದ ಭಾಷೆಯಾಗಿ ಗೌರವಿಸುತ್ತೇವೆ, ಪ್ರೀತಿಸುತ್ತೇವೆ, ಅದೇ ಹಿಂದಿ ದಬ್ಬಾಳಿಕೆಯ ಭಾಷೆಯಾದರೆ, ಯಜಮಾನಿಕೆಯ ಭಾಷೆಯಾದರೆ ಧಿಕ್ಕರಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಹಿಂದಿಯು ಬಳಕೆಯ ಭಾಷೆಯಾಗಿ ಸೀಮಿತವಾಗದೆ ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ ಹಾಗೂ ಪೊಲೀಸ್‌ ಭಾಷೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಖರ್ಗೆ ತಿರುಗೇಟು ನೀಡಿದ್ದಾರೆ..

ನಾನು ಚೆನ್ನಾಗಿ ಹಿಂದಿಯನ್ನು ಮಾತನಾಡಬಲ್ಲೆ, ಅದು ಅಗತ್ಯಕ್ಕೆ ಮಾತ್ರ, ಸಂವಹನಕ್ಕೆ ಮಾತ್ರ. ಕನ್ನಡ ನಮ್ಮ ಆತ್ಮಭಾಷೆ. ಭಾಷೆಗಳು ಬಾಂಧವ್ಯ ಬೆಸೆಯುವುದಕ್ಕೆ ಕಾರಣವಾಗಬೇಕೆ ಹೊರತು ಹೇರಿಕೆಯ ಮೂಲಕ ಸಂಘರ್ಷಕ್ಕೆ ಕಾರಣವಾಗಬಾರದು, ಕೇಂದ್ರ ಸರ್ಕಾರ ಭಾರತದ ಭಾಷಾ ವೈವಿಧ್ಯತೆಯನ್ನು ಗೌರವಿಸಬೇಕು, ಇಲ್ಲದಿದ್ದಲ್ಲಿ ಭಾಷೆಗಳ ಕಾರಣಕ್ಕೆ ಸಂಘರ್ಷ ಉಲ್ಬಣಿಸುತ್ತವೆ.

ಧರ್ಮ ರಾಜಕಾರಣದಿಂದ ಆಹಾರ ರಾಜಕಾರಣ, ಭಾಷಾ ರಾಜಕಾರಣದ ಕಡೆ ಹೊರಳಿರುವ ಕೇಂದ್ರ ಸರ್ಕಾರಕ್ಕೆ ಈ ಪ್ರಜ್ಞೆ ಇದ್ದರೆ ಕ್ಷೇಮ ಎಂದು ಶಾಗೆ ಖರ್ಗೆ ತಿರುಗೇಟು ನೀಡಿದ್ದಾರೆ.

More articles

Latest article