ಆರ್‌ ಸಿಬಿ ಸಂಭ್ರಮದಲ್ಲಿ 11 ಸಾವು; ವಿಚಾರಣೆ ನಡೆಸಿದ ಹೈಕೋರ್ಟ್;‌ ಸರ್ಕಾರಕ್ಕೆ ಸರಣಿ ಪ್ರಶ್ನೆ, ಜೂನ್‌ 10ಕ್ಕೆ ಮತ್ತೆ ವಿಚಾರಣೆ

Most read

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಆರ್‌ ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟ ಘಟನೆ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ಆಟಗಾರರಿಗೆ ಸನ್ಮಾನ, ಎರಡು ಕಡೆ ಸಮಾರಂಭ ಆಯೋಜನೆ, ಮುನ್ನೆಚ್ಚರಿಕೆ ಸೇರಿದಂತೆ ಸರಣಿ ಪ್ರಶ್ನೆಗಳನ್ನು ಕೇಳಿದ ಹೈಕೋರ್ಟ್‌ ವಿಚಾರಣೆಯನ್ನು ಜೂನ್ 10 ಕ್ಕೆ ಮುಂದೂಡಿ 11 ಮಂದಿ ಸಾವಿನ ಬಗ್ಗೆ ವರದಿ ಕೇಳಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.  ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.

ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ತಮ್ಮ ವಾದ ಆಲಿಸುವಂತೆ ಕೆಲವು ವಕೀಲರು ತಮ್ಮ ವಾದವನ್ನೂ ಆಲಿಸುವಂತೆ ಮನವಿ ಮಾಡಿಕೊಂಡರು.

ಹೈಕೋರ್ಟ್ ನೀಡುವ ಸಲಹೆಗಳನ್ನು ಪಾಲಿಸಲು ಸರ್ಕಾರ ಬದ್ದ. ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರತಿರೋಧಿಸುವುದಿಲ್ಲ ಎಂದು  ಶಶಿಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದರು.

ಜೂನ್ 3 ರಂದು ಆರ್ ಸಿಬಿ ಐಪಿಎಲ್ ಮ್ಯಾಚ್ ಗೆಲುವು. ಭದ್ರತೆಗಾಗಿ ಬೆಂಗಳೂರು ಪೊಲೀಸರು ಸಿದ್ದತೆ ನಡೆಸಿದ್ದರು. 1643 ಪೊಲೀಸ್ ಸಿಬ್ಬಂದಿಯನ್ನ ಬಂದೋಬಸ್ತ್ ಗೆ ನೇಮಕ. ವಾಟರ್ ಟ್ಯಾಂಕರ್, ಕೆಎಸ್ ಆರ್ ಪಿ ತುಕಡಿ ಸೇರಿದಂತೆ ಹಲವು ವ್ಯವಸ್ಥೆ. ಐಪಿಎಲ್ ಮ್ಯಾಚ್ ಗೆ 789 ಸಿಬ್ಬಂದಿ ನೇಮಕವಾಗುತ್ತಿತ್ತು. ಆದರೆ ನಿನ್ನೆ 1600 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.

ಹೆಚ್ಚಿನ ಜನ ಸೇರಿದರೆ ಯಾವ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂಬ ಪ್ರಶ್ನೆಗೆ ಸ್ಟೇಡಿಯಂ ಬಳಿ 2 ಲಕ್ಷ ಜನ ಸೇರಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಿದ್ದರಿಂದ ಅನಾಹುತ ಸಂಭವಿಸಿದೆ. ಕೋಲಾರ, ಯಾದಗಿರಿ, ತುಮಕೂರು, ಭಾಗಗಳಿಂದಲೂ ಆಗಮಿಸಿದ್ದರು. ಹೀಗಾಗಿ ಈ ದುರಂತ ಸಂಭವಿಸಿದೆ ಎಂದು ಶಶಿಕಿರಣ್ ತಿಳಿಸಿದರು.

ಈ ಘಟನೆಗೆ ಯಾರು ಹೊಣೆ ? ಕ್ರಿಕೆಟ್ ಅಸೋಸಿಯೇಷನ್‌ ಅಥವಾ ಭದ್ರತೆಗಿದ್ದ ಪೊಲೀಸರೇ ಎಂದೂ ನ್ಯಾಯಾಲಯ ಪ್ರಶ್ನಿಸಿತು. ಆರ್ ಸಿಬಿ ಮ್ಯಾನೇಜ್ ಮೆಂಟ್ ಕಾರ್ಯಕ್ರಮ ಆಯೋಜಿಸತ್ತು. ಸ್ಟೇಡಿಯಂನ ಎಲ್ಲ ವ್ಯವಸ್ಥೆಗಳನ್ನು  ಅವರೇ ಮಾಡುತ್ತಾರೆ. ರಾಯಲ್ ಚಾಲೆಂಜರ್ಸ್ ಟಿಕೆಟ್ ಹಂಚಿಕೆ ಮಾಡುತ್ತದೆ. ಬೆಂಗಳೂರಿನತ್ತ ಮುಂಜಾನೆ 4 ಗಂಟೆಯಿಂದಲೇ ಜನ ಬರುತ್ತಿದ್ದರು. 35 ಸಾವಿರ ಜನ ಸೇರುವ ನಿರೀಕ್ಷೆ ಇತ್ತು. ಅದಕ್ಕೂ ಮೀರಿ ಜನ ಬಂದಿದ್ದಾರೆ. ಸಾವನ್ನಪ್ಪಿದ್ದವರಲ್ಲಿ ಒಬ್ಬರು ಕೊಯಂಬತ್ತೂರಿನವರೂ ಸೇರಿದ್ದಾರೆ. ಕಬ್ಬನ್ ರೋಡ್ ಗೇಟ್ 6 ಬಳಿ ಎರಡು ಸಾವು ಸಂಭವಿಸಿದೆ. ಕ್ವೀನ್ಸ್ ರೋಡ್ ಬಳಿಯ ಗೇಟ್ ನಲ್ಲೂ ಸಾವು ಸಂಭವಿಸಿದೆ ಎಂದು ವಿವರಿಸಿದರು.

 ಚಿನ್ನಸ್ವಾಮಿ ಸ್ಟೇಡಿಯಂಗೆ 21 ಗೇಟ್ ಗಳಿವೆ. ಎಲ್ಲ ಗೇಟ್ ಗಳು ತೆರೆದಿತ್ತೆಂಬ ಮಾಹಿತಿಯಿದೆ ಎಂದು ಎಜಿ ತಿಳಿಸಿದಾಗ ಮತ್ತೊಬ್ಬ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.  21 ಗೇಟ್ ಗಳಲ್ಲಿ 3 ಗೇಟ್ ಓಪನ್ ಮಾಡಿದ್ದೇ ಅನಾಹುತಕ್ಕೆ ಕಾರಣ. ಗೇಟ್ ನಂಬರ್ 7ರಲ್ಲಿ 7 ಸಾವುಗಳಾಗಿವೆ. ಕೇವಲ 3 ಗೇಟ್ ಗಳನ್ನು ಮಾತ್ರ ಮೊದಲಿಗೆ ತೆಗೆಯಲಾಗಿತ್ತು ಎಂದು ಪಿಐಎಲ್ ಸಲ್ಲಿಸಿರುವ ವಕೀಲರು ಮಾಹಿತಿ ನೀಡಿದರು.

ವಿಧಾನಸೌಧ, ಚಿನ್ನಸ್ವಾಮಿ ಎರಡೂ ಕಡೆ ಕಾರ್ಯಕ್ರಮ ಮಾಡಿದ್ದರಿಂದ ಸಮಸ್ಯೆ ಎಂದು ವಕೀಲ ಹೇಮಂತ್ ರಾಜ್ ವಾದಿಸಿದರು. ಸರ್ಕಾರದಿಂದ 4 ಸ್ಪಷ್ಟನೆಗಳು ಬೇಕು. 1. ಕಾರ್ಯಕ್ರಮ ಮಾಡಿದ್ದು ಯಾರು? 2. ಆಟಗಾರರು ಯಾವ ದೇಶಕ್ಕೆ ಆಡಿದ್ದರು? 3. ಎರಡೂ ಕಡೆ ಕಾರ್ಯಕ್ರಮ ಮಾಡಲು ಸೂಚಿಸಿದ್ದು ಯಾರು 4. ಸರ್ಕಾರ ಹೇಗೆ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತ್ತು ಎಂದು ಪ್ರಶ್ನಿಸಿದರು.  ಆರ್ ಸಿಬಿ ಆಟಗಾರರು ರಾಜ್ಯ ಅಥವಾ, ದೇಶಕ್ಕೆ ಆಡುತ್ತಿಲ್ಲ. ರಾಜ್ಯ ಸರ್ಕಾರ ಇವರನ್ನು ಗೌರವಿಸುವ ಅಗತ್ಯವೂ ಇರಲಿಲ್ಲ ಎಂದು ವಾದಿಸಿದರು.

More articles

Latest article