ಉಪ್ಪು ತಿಂದವರು ನೀರು ಕುಡಿಲಿ: HDK

Most read

ಹಾಸನದಲ್ಲಿ ಸಾವಿರಾರು ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ದೌರ್ಜನ್ಯ ನಡೆಸಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಜ್ವಲ್ ಚಿಕ್ಕಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ‌ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಎಸ್ ಐ ಟಿಗೆ ತನಿಖೆಗೆ ಆದೇಶ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. ನಾನಾಗಲಿ ನನ್ನ ತಂದೆಯಾಗಲಿ ಎಂದೂ ಸಹ ಹೆಣ್ಣು ಮಕ್ಕಳ ವಿಷಯವಾಗಿ ಗೌರವವಾಗಿ ನಡೆದುಕೊಂಡಿದ್ದೇವೆ ಮತ್ತು ಅವರ ಕಷ್ಟಗಳನ್ನು ಪರಿಹರಿಸಿ ಕಳಿಸಿದ್ದೇವೆ. ಎಸ್ ಐ ಟಿ ತನಿಖೆ ಸಂಪೂರ್ಣವಾಗಿ ಬರಲಿ. ಈ ನೆಲದಲ್ಲಿ ಯಾರೇ ತಪ್ಪು ಮಾಡಿದ್ದರು ಅವರಿಗೆ ಶಿಕ್ಷೆಯಾಗಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ.

ಪ್ರಜ್ವಲ್ ವಿದೇಶಕ್ಕೆ ಓಡಿ ಹೋಗಿದ್ದಾರೆ ಎಂಬ ವಿಚಾರವಾಗಿ ಉತ್ತರಿಸಿದ ಅವರು, ಈ ವಿಚಾರಕ್ಕೂ ನಮಗೂ ಸಂಭಂದವಿಲ್ಲ, ಪ್ರಜ್ವಲ್ ಓಡಿ ಹೋಗಿದ್ರೆ ಎಸ್ ಐಟಿ ಕರ್ಕೊಂಡ್ ಬರತ್ತೆ ಬಿಡಿ ಎಂದು ಹೇಳಿದ್ದಾರೆ.

More articles

Latest article