ಪ್ರೇಯಸಿಯನ್ನು ಕೊಂದ ನೌಕದಳ ನೌಕರ, ದೇಹ ಕತ್ತರಿಸಿ ತುಂಡುಗಳನ್ನು ಫ್ರಿಡ್ಜ್‌ನಲ್ಲಿಟ್ಟ!

ಮಿಂಗಲ್‌ ಆಪ್‌ ಮೂಲಕ ಪರಿಚಯ, ಡೇಟಿಂಗ್

ವಿಶಾಖಪಟ್ಟಣಂ : ಕಳೆದ 2024ರಲ್ಲಿ ಬೆಂಗಳೂರಿನ ವಯ್ಯಾಲಿಕಾವಲ್‌ನಲ್ಲಿ ಮಹಿಳೆಯನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಪ್ರಕರಣ ಹಾಗೂ ದೆಹಲಿಯ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣಗಳು ಮಾಸುವ ಮುನ್ನವೇ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇಂತಹದೇ ಘಟನೆ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. 

ಪೋಲಿಪಲ್ಲಿ ಮೌನಿಕಾ  ಎಂಬ 31 ವರ್ಷದ ಮಹಿಳೆಯನ್ನು  ನೌಕದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿಂತಡ ರವೀಂದ್ರ (30)  ಹತ್ಯೆ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಘಟನೆ ಬೆಳಕಿಗೆ ಬಂದಿದ್ದು,  ಈತನನ್ನು ಪೊಲೀಸರು ಬಂಧಿಸಿದ್ದಾರೆ.


ಘಟನೆಯ ವಿವರ :  ಚಿಂತದ ರವೀಂದ್ರ ಅವರ ಪತ್ನಿ ತವರು ಮನೆಗೆ ಹೋದಾಗ ಈ ಘಟನೆ ನಡೆದಿದೆ.  ಪ್ರಿಯತಮೆಯೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ  ವಿಶಾಖಪಟ್ಟಣದಲ್ಲಿರುವ ತಮ್ಮ ನಿವಾಸಕ್ಕೆ  ಪ್ರಿಯತಮೆ ಪೋಲಿಪಲ್ಲಿ ಮೌನಿಕಾಳನ್ನು ಕರೆಸಿಕೊಂಡಿದ್ದ. ಆದರೆ, ಇಬ್ಬರ ಭೇಟಿಯು ಮೌನಿಕಾಗೆ ಸಾವಿನ ಆಹ್ವಾನವಾಗಿ ಪರಿಣಮಿಸಿತು. ಭಾನುವಾರ ಸಂಜೆ ವೇಳೆಗೆ ಇಬ್ಬರ ನಡುವೆ ನಡೆದ ಜಗಳ ತಾರಕಕ್ಕೇರಿ ಮೌನಿಕಾ ಜೀವ ಕಳೆದುಕೊಳ್ಳುವ ಹಂತಕ್ಕೆ ತಲುಪಿ ತು. 

 ಆನ್‌ಲೈನ್‌ ಚಾಕು ಖರೀದಿ :  ರವೀಂದ್ರ ಮೌನಿಕಾಳನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎನ್ನಲಾಗಿದೆ. ನಂತರ ಆನ್‌ಲೈನ್  ಮೂಲಕ  ಚಾಕು ಖರೀದಿಸಿ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ ಎನ್ನಲಾಗಿದೆ. ಆರಂಭಿಕ ತನಿಖೆಯ ಪ್ರಕಾರ, ರವೀಂದ್ರ ತಲೆ, ಕಾಲುಗಳು ಮತ್ತು ಕೈಗಳನ್ನು ಮುಂಡದಿಂದ ಬೇರ್ಪಡಿಸಿದ್ದಾನೆ. ಕಾಲುಗಳು ಮತ್ತು ಸೊಂಟವನ್ನು ಟ್ರಾಲಿ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ, ಮುಂಡವನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ, ತಲೆ ಮತ್ತು ಕೈಗಳನ್ನು ಬೇರೆ ಸ್ಥಳಕ್ಕೆ ಸಾಗಿಸಿ, ಅಲ್ಲಿ ಅವುಗಳನ್ನು ಸುಟ್ಟುಹಾಕಿದ್ದಾನೆ ಎನ್ನಲಾಗಿದೆ.

ಪತ್ನಿಗೆ ಹೇಳುವುದಾಗಿ ಕಿರುಕುಳ :  ನಂತರ ರವೀಂದ್ರ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತಮ್ಮ ಸಂಬಂಧದ ಸಮಯದಲ್ಲಿ ಮೌನಿಕಾ ತನ್ನಿಂದ 3.5 ಲಕ್ಷ ರೂ.ಗಳನ್ನು ತೆಗೆದುಕೊಂಡಿದ್ದಳು ಮತ್ತು ಆಗಾಗ್ಗೆ ತನ್ನ ಹೆಂಡತಿಗೆ ತಮ್ಮ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಆರೋಪಿ ಹೇಳಿಕೊಂಡಿದ್ದಾನೆ. ಮೌನಿಕಾ ಹತ್ಯೆಯಾದ ದಿನದಂದು ನಡೆದ ಜಗಳ ಸೇರಿದಂತೆ ಇಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.

ನಿರಂತರ ಬೆದರಿಕೆ :  2024 ರಲ್ಲಿ ರವೀಂದ್ರ  ಇನ್ನೊಬ್ಬ ಮಹಿಳೆಯನ್ನು ಮದುವೆಯಾದಾಗಿನಿಂದ ಮೌನಿಕಾಳಿಂದ ನಿರಂತರ ಕಿರುಕುಳ ಮತ್ತು ಬೆದರಿಕೆಗಳಿಂದ ಬೇಸತ್ತಿದ್ದರಿಂದ ಕೊಲೆಯನ್ನು ಯೋಜಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಮೌನಿಕಾಳ ತಲೆ ಕಾಣೆಯಾಗಿದೆ :  ಪೊಲೀಸರು ಅಪರಾಧ ಸ್ಥಳಕ್ಕೆ ಧಾವಿಸಿದಾಗ, ರೆಫ್ರಿಜರೇಟರ್ ಮತ್ತು ಮನೆಯೊಳಗೆ ಕತ್ತರಿಸಿದ ದೇಹದ ಭಾಗಗಳು ಕಂಡುಬಂದಿವೆ. ಮೌನಿಕಾಳ ತಲೆ ಕಾಣೆಯಾಗಿತ್ತು. ರವೀಂದ್ರ ಅದನ್ನು ಬೇರೆ ಸ್ಥಳದಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕಾಣೆಯಾದ ದೇಹದ ಭಾಗಗಳನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಡೇಟಿಂಗ್‌ ಆಪ್‌ ಮೂಲಕ ಪರಿಚಯ :  ಡೇಟಿಂಗ್‌ ಆಪ್‌ ಮಿಂಗಲ್‌ನಲ್ಲಿ ಪರಿಚಯ. ಬಳಿಕ ಲವ್‌, ಸಂಬಂಧ  ಕೊಲೆಯಲ್ಲಿ ಅಂತ್ಯ.  ಭಾರತೀಯ ನೌಕಾಪಡೆ (ಐಎನ್ಎಸ್) ಡೇಗಾದಲ್ಲಿ ನಿಯೋಜಿತರಾಗಿದ್ದ 30 ವರ್ಷದ ನೌಕಾಪಡೆಯ ಅಧಿಕಾರಿ ರವೀಂದ್ರ, 2021 ರಲ್ಲಿ ‘ಮಿಂಗಲ್’ ಎಂಬ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ 31 ವರ್ಷದ ಮೌನಿಕಾ ಅವರೊಂದಿಗೆ ಡೇಟಿಂಗ್ ಮಾಡಿದರು. ಇಬ್ಬರೂ ವಿಶಾಖಪಟ್ಟಣದಾದ್ಯಂತ ಪಾರ್ಕ್‌ ಮತ್ತು ಸಿನಿಮಾಗಳಿಗೆ ತೆರಳುತ್ತಿದ್ದರು . ಹೀಗಾಗಿ,  ಅವರ ನಡುವೆ ಪ್ರಣಯ ಸಂಬಂಧ ಬೆಳೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಈ ಪ್ರಕರಣವು ಮೇ 18, 2022 ರಂದು ಶ್ರದ್ಧಾ ವಾಕರ್ ಅವರ ಕ್ರೂರ ಹತ್ಯೆಯನ್ನು ನೆನಪಿಸುತ್ತದೆ. ಹಾಗೆಯೇ ಬೆಂಗಳೂರಿನಲ್ಲೂ ಇಂತಹದೇ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.

ವಿಶಾಖಪಟ್ಟಣಂ : ಕಳೆದ 2024ರಲ್ಲಿ ಬೆಂಗಳೂರಿನ ವಯ್ಯಾಲಿಕಾವಲ್‌ನಲ್ಲಿ ಮಹಿಳೆಯನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಪ್ರಕರಣ ಹಾಗೂ ದೆಹಲಿಯ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣಗಳು ಮಾಸುವ ಮುನ್ನವೇ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇಂತಹದೇ ಘಟನೆ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. 

ಪೋಲಿಪಲ್ಲಿ ಮೌನಿಕಾ  ಎಂಬ 31 ವರ್ಷದ ಮಹಿಳೆಯನ್ನು  ನೌಕದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿಂತಡ ರವೀಂದ್ರ (30)  ಹತ್ಯೆ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಘಟನೆ ಬೆಳಕಿಗೆ ಬಂದಿದ್ದು,  ಈತನನ್ನು ಪೊಲೀಸರು ಬಂಧಿಸಿದ್ದಾರೆ.


ಘಟನೆಯ ವಿವರ :  ಚಿಂತದ ರವೀಂದ್ರ ಅವರ ಪತ್ನಿ ತವರು ಮನೆಗೆ ಹೋದಾಗ ಈ ಘಟನೆ ನಡೆದಿದೆ.  ಪ್ರಿಯತಮೆಯೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ  ವಿಶಾಖಪಟ್ಟಣದಲ್ಲಿರುವ ತಮ್ಮ ನಿವಾಸಕ್ಕೆ  ಪ್ರಿಯತಮೆ ಪೋಲಿಪಲ್ಲಿ ಮೌನಿಕಾಳನ್ನು ಕರೆಸಿಕೊಂಡಿದ್ದ. ಆದರೆ, ಇಬ್ಬರ ಭೇಟಿಯು ಮೌನಿಕಾಗೆ ಸಾವಿನ ಆಹ್ವಾನವಾಗಿ ಪರಿಣಮಿಸಿತು. ಭಾನುವಾರ ಸಂಜೆ ವೇಳೆಗೆ ಇಬ್ಬರ ನಡುವೆ ನಡೆದ ಜಗಳ ತಾರಕಕ್ಕೇರಿ ಮೌನಿಕಾ ಜೀವ ಕಳೆದುಕೊಳ್ಳುವ ಹಂತಕ್ಕೆ ತಲುಪಿ ತು. 

 ಆನ್‌ಲೈನ್‌ ಚಾಕು ಖರೀದಿ :  ರವೀಂದ್ರ ಮೌನಿಕಾಳನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎನ್ನಲಾಗಿದೆ. ನಂತರ ಆನ್‌ಲೈನ್  ಮೂಲಕ  ಚಾಕು ಖರೀದಿಸಿ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ ಎನ್ನಲಾಗಿದೆ. ಆರಂಭಿಕ ತನಿಖೆಯ ಪ್ರಕಾರ, ರವೀಂದ್ರ ತಲೆ, ಕಾಲುಗಳು ಮತ್ತು ಕೈಗಳನ್ನು ಮುಂಡದಿಂದ ಬೇರ್ಪಡಿಸಿದ್ದಾನೆ. ಕಾಲುಗಳು ಮತ್ತು ಸೊಂಟವನ್ನು ಟ್ರಾಲಿ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ, ಮುಂಡವನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ, ತಲೆ ಮತ್ತು ಕೈಗಳನ್ನು ಬೇರೆ ಸ್ಥಳಕ್ಕೆ ಸಾಗಿಸಿ, ಅಲ್ಲಿ ಅವುಗಳನ್ನು ಸುಟ್ಟುಹಾಕಿದ್ದಾನೆ ಎನ್ನಲಾಗಿದೆ.

ಪತ್ನಿಗೆ ಹೇಳುವುದಾಗಿ ಕಿರುಕುಳ :  ನಂತರ ರವೀಂದ್ರ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತಮ್ಮ ಸಂಬಂಧದ ಸಮಯದಲ್ಲಿ ಮೌನಿಕಾ ತನ್ನಿಂದ 3.5 ಲಕ್ಷ ರೂ.ಗಳನ್ನು ತೆಗೆದುಕೊಂಡಿದ್ದಳು ಮತ್ತು ಆಗಾಗ್ಗೆ ತನ್ನ ಹೆಂಡತಿಗೆ ತಮ್ಮ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಆರೋಪಿ ಹೇಳಿಕೊಂಡಿದ್ದಾನೆ. ಮೌನಿಕಾ ಹತ್ಯೆಯಾದ ದಿನದಂದು ನಡೆದ ಜಗಳ ಸೇರಿದಂತೆ ಇಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.

ನಿರಂತರ ಬೆದರಿಕೆ :  2024 ರಲ್ಲಿ ರವೀಂದ್ರ  ಇನ್ನೊಬ್ಬ ಮಹಿಳೆಯನ್ನು ಮದುವೆಯಾದಾಗಿನಿಂದ ಮೌನಿಕಾಳಿಂದ ನಿರಂತರ ಕಿರುಕುಳ ಮತ್ತು ಬೆದರಿಕೆಗಳಿಂದ ಬೇಸತ್ತಿದ್ದರಿಂದ ಕೊಲೆಯನ್ನು ಯೋಜಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಮೌನಿಕಾಳ ತಲೆ ಕಾಣೆಯಾಗಿದೆ :  ಪೊಲೀಸರು ಅಪರಾಧ ಸ್ಥಳಕ್ಕೆ ಧಾವಿಸಿದಾಗ, ರೆಫ್ರಿಜರೇಟರ್ ಮತ್ತು ಮನೆಯೊಳಗೆ ಕತ್ತರಿಸಿದ ದೇಹದ ಭಾಗಗಳು ಕಂಡುಬಂದಿವೆ. ಮೌನಿಕಾಳ ತಲೆ ಕಾಣೆಯಾಗಿತ್ತು. ರವೀಂದ್ರ ಅದನ್ನು ಬೇರೆ ಸ್ಥಳದಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕಾಣೆಯಾದ ದೇಹದ ಭಾಗಗಳನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಡೇಟಿಂಗ್‌ ಆಪ್‌ ಮೂಲಕ ಪರಿಚಯ :  ಡೇಟಿಂಗ್‌ ಆಪ್‌ ಮಿಂಗಲ್‌ನಲ್ಲಿ ಪರಿಚಯ. ಬಳಿಕ ಲವ್‌, ಸಂಬಂಧ  ಕೊಲೆಯಲ್ಲಿ ಅಂತ್ಯ.  ಭಾರತೀಯ ನೌಕಾಪಡೆ (ಐಎನ್ಎಸ್) ಡೇಗಾದಲ್ಲಿ ನಿಯೋಜಿತರಾಗಿದ್ದ 30 ವರ್ಷದ ನೌಕಾಪಡೆಯ ಅಧಿಕಾರಿ ರವೀಂದ್ರ, 2021 ರಲ್ಲಿ ‘ಮಿಂಗಲ್’ ಎಂಬ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ 31 ವರ್ಷದ ಮೌನಿಕಾ ಅವರೊಂದಿಗೆ ಡೇಟಿಂಗ್ ಮಾಡಿದರು. ಇಬ್ಬರೂ ವಿಶಾಖಪಟ್ಟಣದಾದ್ಯಂತ ಪಾರ್ಕ್‌ ಮತ್ತು ಸಿನಿಮಾಗಳಿಗೆ ತೆರಳುತ್ತಿದ್ದರು . ಹೀಗಾಗಿ,  ಅವರ ನಡುವೆ ಪ್ರಣಯ ಸಂಬಂಧ ಬೆಳೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಈ ಪ್ರಕರಣವು ಮೇ 18, 2022 ರಂದು ಶ್ರದ್ಧಾ ವಾಕರ್ ಅವರ ಕ್ರೂರ ಹತ್ಯೆಯನ್ನು ನೆನಪಿಸುತ್ತದೆ. ಹಾಗೆಯೇ ಬೆಂಗಳೂರಿನಲ್ಲೂ ಇಂತಹದೇ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.

More articles

Latest article

Most read