“ಮಿಡಲ್ ಕ್ಲಾಸ್ ರಾಮಾಯಣ”; ಪಕ್ಕಾ ಕಾಮಿಡಿ.. ಮಸ್ತ್ ಮನರಂಜನೆ.. ಅದುವೇ ಸಿನಿಮಾದ ಹೂರಣ

Most read

ಬೆಂಗಳೂರು: “ಮಿಡಲ್ ಕ್ಲಾಸ್ ರಾಮಾಯಣ” ಟೈಟಲ್ ಕೇಳಿದಾಕ್ಷಣವೇ ಗೊತ್ತಾಗುತ್ತೆ ಇದೊಂದು ಮಿಡಲ್ ಕ್ಲಾಸ್ ಫ್ಯಾಮಿಲಿಯ ರಾಮಾಯಣ ಅಂತ.ಈ ಸಿನಿಮಾದ ಕಥಾನಾಯಕ ಕಪ್ಪು ಬಣ್ಣದ ಯುವತಿಯನ್ನು ಇಷ್ಟ ಪಟ್ಟು ಮದುವೆಯಾಗುತ್ತಾನೆ. ಕಪ್ಪು ಬಣ್ಣದವಳನ್ನೇ ಏಕೆ ಆರಿಸಿಕೊಂಡ ಮತ್ತು ಮದುವೆ ನಂತರ ಹೀರೋ ಏನೆಲ್ಲಾ ಕಷ್ಟಪಕಾರ್ಪಣ್ಯಗಳನ್ನು ಎದುರಿಸುತ್ತಾ ಬಂದ ಘಟನಾವಳಿಗಳ ನಡುವೆ ಸಾಗುವ ಕಥೆಯೇ ಮಿಡಲ್ ಕ್ಲಾಸ್ ರಾಮಾಯಣದ ಹೂರಣ. ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿದ್ದು ರೆಸ್ಪಾನ್ಸ್ ಮಾತ್ರ ಅದ್ಭುತವಾಗಿದೆ.

ಅಂಜನಾದ್ರಿ ಪ್ರೊಡಕ್ಷನ್ ಹಾಗೂ ವಾವ್ ಸ್ಟುಡಿಯೋಸ್ ಅಡಿಯಲ್ಲಿ ಜಯರಾಮ್ ಗಂಗಪ್ಪನಹಳ್ಳಿ ಅವರು ನಿರ್ಮಾಣ ಮಾಡಿದ್ದಾರೆ. ಧನುಶ್ ಗೌಡ ವಿ ನಿರ್ದೇಶನ ಮಾಡಿದ್ದು, ಮೋಕ್ಷಿತಾ ಪೈ ಹಾಗೂ ವಿನು ಗೌಡ ಜೋಡಿಯಾಗಿ ನಟಿಸಿದ್ದಾರೆ.

ಸಿನಿಮಾ ಕುರಿತು ಮಾಹಿತಿ ನೀಡಿದ ನಟಿ ಮೋಕ್ಷಿತಾ ಪೈ ʼಇದು ನನ್ನ ಚೊಚ್ಚಲ ಸಿನಿಮಾ. ಸೀರಿಯಲ್ ಬೇರೆ, ರಿಯಾಲಿಟಿ ಶೋ ಬೇರೆ. ಒಂದು ಸಿನಿಮಾ ಮಾಡಿ ಅದನ್ನ ರಿಲೀಸ್ ಮಾಡೋದು ಇದೆಯಲ್ಲ, ಅದು ಮುಖ್ಯ. ಈಗ ನಮ್ಮ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾ ಬಿಡುಗಡೆ ಆಗ್ತಾ ಇದೆ. ಸಿನಿಮಾದಲ್ಲಿ ಎಲ್ಲೂ ಕಾಂಪ್ರೂಮೈಸ್ ಆಗದ ರೀತಿ ಸಿನಿಮಾ ಮಾಡಲಾಗಿದೆ.

ನಾಯಕಿ ಮಾತಿಗೆ ತಲೆದೂಗಿ ಅಭಿಪ್ರಾಯ ಹಂಚಿಕೊಂಡ ಹೀರೋ ವಿನು ಗೌಡ, ನಾನು ಸಿನಿಮಾ ಇಂಡಸ್ಟ್ರಿಗೆ ಅಂತ ಬಂದವನಲ್ಲ. ಒಂದೊಂದು ಹೆಜ್ಜೆಗೂ ಸಾಕಷ್ಟು ಕಷ್ಟಪಟ್ಟಿದ್ದೀವಿ. ಮೂರು  ವರ್ಷದಿಂದ ಪ್ಲ್ಯಾನ್ ಮಾಡಿಕೊಂಡು ಬಂದಿದ್ದೇನೆ. ಸಿನಿಮಾದಲ್ಲಿ ನನ್ನ ಪಾತ್ರ ವಿಭಿನ್ನವಾಗಿದ್ದು, ಪಕ್ಕಾ ಪೈಸಾ ವಸೂಲ್‌ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ದೇಶಕ ಧನುಶ್ ಗೌಡ ವಿ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ಮೊದಲು ʼರೆಬೆಲ್ ಹುಡುಗರುʼ ಎಂಬ ಸಿನಿಮಾ ನಿರ್ದೇಶನ ಮಾಡಿದ್ದೆ. ಮಿಡಲ್ ಕ್ಲಾಸ್ ರಾಮಾಯಣ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಸಿದ್ಧವಾಗಿದೆ. ಆದರೆ ಮೊದಲು ಕನ್ನಡ ಭಾಷೆಯಲ್ಲಿ ತರೆಗೆ ಬರಲಿದೆ. ಈ ಕಥೆ ಚಿಕ್ಕಬಳ್ಳಾಪುರದ ನಂದಿ ಬಗ್ಗೆ ಮಾಡ್ತಾ ಇರುವಂತಹ ಸಿನಿಮಾ. ಕಥೆಗೆ ರೆಗ್ಯುಲರ್ ಪ್ಯಾಟ್ರನ್ ಇಲ್ಲ. ಕಮರ್ಷಿಯಲ್ ಸಾಂಗ್, ಕಮರ್ಷಿಯಲ್ ಫೈಟ್ ಸಿನಿಮಾದಲ್ಲಿ ಇಲ್ಲ. ಆದರೆ ಕಥೆ ಮಅತ್ರ ತುಂಬಾ ಎಂಟರ್‌ ಟೈನ್‌ ಮೆಂಟ್ ಆಗಿದೆ ಎಂದಿದ್ದಾರೆ.

ನಿರ್ಮಾಪಕ ಜಯರಾಮ್ ಗಂಗಪ್ಪನಹಳ್ಳಿ ಮಾತನಾಡಿ, ತುಂಬಾ ಭರವಸೆ ಇಟ್ಟುಕೊಂಡು ಸಿನಿಮಾ‌ ಮಾಡಿದ್ದೀವಿ ಎಲ್ಲರೂ ಬೆಂಬಲಿಸಬೇಕು. ಫ್ಯಾಮಿಲಿ ಎಂಟರ್‌ ಟೈನ್‌ ಮೆಂಟ್ ಸಿನಿಮಾ. ಯಾವುದೇ‌ ಮುಜುಗರವಿಲ್ಲದೆ ಇಡೀ ಕುಟುಂಬ ಖುಷಿಯಿಂದ ಕೂತು ಸಿನಿಮಾ ನೋಡಬಹುದು ಎಂದಿದ್ದಾರೆ.

ಅಲೆಕ್ಸ್ ಸಂಗೀತ ನೀಡಿದ್ದರೆ, ಡಿಒಪಿ ಕೆಲಸ ವಿನೋದ್ ಲೋಕಣ್ಣನವರ್ ನಿರ್ವಹಿಸಿದ್ದಾರೆ. ಉದಯ್ ಕುಮಾರ್ ಹಾಗೂ ಧನುಷ್ ಗೌಡ ವಿ ಸಂಭಾಷಣೆ ಮತ್ತು ಚಿತ್ರಕಥೆಯ ಹೊಣೆ ಹೊತ್ತಿದ್ದಾರೆ.  

ಎಸ್ ನಾರಾಯಣ್, ವೀಣಾ ಸುಂದರ್, ‌ಮಜಾಭಾರತ ಜಗ್ಗಪ್ಪ , ಯುಕ್ತ ಪೆರ್ವಿ, ಬಾಲರಾಜ್ ವಾಡಿ , ವಿಜಯ್ ಚಂದೂರ್, ಬ್ಯಾಂಕ್ ಜನಾರ್ಧನ್ , ಸುಂದರ್ ವೀಣಾ, ಶೋಭರಾಜ್, ತುಕಾಲಿ ಸಂತೋಷ,  ಹುಲಿ ಕಾರ್ತಿಕ್, ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

More articles

Latest article