Tuesday, September 17, 2024

ರಾಧಿಕಾ ಪಂಡಿತ್ ನಿಂದಾನೇ ನನ್ನ ಗಂಡ‌ನನ್ನು ಉಳಿಸಿಕೊಳ್ಳುವುದಕ್ಕೆ ಆಗಿದ್ದು : ಖ್ಯಾತ ನಿರ್ಮಾಪಕಿ ಹೇಳಿದ ಮಾತು

Most read

ಕನ್ನಡ ಇಂಡಸ್ಟ್ರಿಯಲ್ಲಿ ರಾಧಿಕಾ ಪಂಡಿತ್ ಪುಟವಿಟ್ಟ ಚಿನ್ನದಂತ ಹೆಸರು ಮಾಡಿದ್ದಾರೆ. ಒಂದೇ ಒಂದು ಗಾಸಿಪ್ ಇಲ್ಲ, ನೆಗೆಟಿವ್ ಟ್ರೋಲ್ ಅಂತು ಆಗೋದೆ ಇಲ್ಲ. ಅದೆಲ್ಲದ್ದಕ್ಕಿಂತ ಹೆಚ್ಚಾಗಿ ಡೆಡಿಕೇಷನ್, ಬದ್ಧತೆ ಇದೆ. ಒಂದು ಸಿನಿಮಾ ಅಥವಾ ಸೀರಿಯಲ್ ಯಾವುದೇ ಒಪ್ಪಿಕೊಂಡರೂ, ಮಧ್ಯಕ್ಕೆ ಬಿಟ್ಟು ಓಡಿ ಬರುವ ನಟಿಯಲ್ಲ. ಅದನ್ನ ಮುಗಿಸಿಕೊಟ್ಟ ಮೇಲೆ ಮುಂದಕ್ಕೆ ಹೆಜ್ಜೆ ಇಡುತ್ತಾರೆ. ಅದೇ ಕಾರಣಕ್ಕೇನೆ ಇಂಡಸ್ಟ್ರಿಯಲ್ಲಿ ಇರುವ ತನಕವೂ ನಂಬರ್ ಒನ್ ನಟಿಯಾಗಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಇದ್ದವು. ಈಗಲೂ ಅವೆ ಕಮ್ ಬ್ಯಾಕ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅವರ ಬಗೆಗಿನ ಕ್ರೇಜ್ ಇನ್ನು ಹಾಗೇ ಇದೆ.

ಆದರೆ ರಾಧಿಕಾ ಪಂಡಿತ್ ಸ್ಪೆಷಲ್ ವಿಚಾರವೊಂದು ಈಗ ವೈರಲ್ ಆಗ್ತಾ ಇದೆ. ಇದು ಹಳೆಯ ವಿಡಿಯೋನೆ ಇರಬಹುದು. ಆದರೆ ಈ ಕ್ಷಣಕ್ಕೆ ಅದು ಸಾಕಷ್ಟು ಸದ್ದು ಮಾಡ್ತಾ ಇದೆ. ರಾಧಿಕಾ ಪಂಡಿತ್ ಹಾಗೂ ಯಶ್ ಇಬ್ಬರು ಎಂಟ್ರಿಯಾಗಿದ್ದು ನಂದಗೋಕುಲ ಎಂಬ ಧಾರಾವಾಹಿ ಮೂಲಕ. ಈ ಧಾರಾವಾಹಿಯನ್ನು ರೇಖಾ ರಾಣಿ ಕಶ್ಯಪ್ ನಿರ್ಮಾಣ ಮಾಡಿದ್ದರು. ಅವರ ಪತಿ ಅಶೋಕ್ ಕಶ್ಯಪ್ ನಿರ್ದೇಶನ ಮಾಡಿದ್ದರು. ಆ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಹೇಗೆ ಜೊತೆಯಾಗಿ ನಿಂತರು ಎಂಬುದನ್ನು ಹೇಳಿದ್ದಾರೆ.

https://www.instagram.com/reel/C7dObxePLLY/?igsh=MWFlZnF2Ynd0NGZzMQ==

‘ರಾಧಿಕಾ ಪಂಡಿತ್ ಹಳೆಯ ಋಣವನ್ನು ಸಂದಾಯ ಮಾಡಬೇಕಾಗಿದೆ. ಯಾವುದೇ ಧಾರಾವಾಹಿ ನಿರ್ಮಾಪಕರಾಗಲಿ, ದುಡ್ಡು, ಶ್ರಮ ಹಾಗೂ ಟ್ಯಾಲೆಂಟ್​ ಹಾಕುತ್ತಾರೆ. ಮುಖ್ಯವಾಗಿ ಜೀವನವನ್ನೇ ಅದಕ್ಕಾಗಿ ಮುಡಿಪಾಗಿ ಇಡುತ್ತಾರೆ. ಯಾವುದೇ ಒಬ್ಬ ಕಲಾವಿದ ಮಧ್ಯೆನೇ ಕೈ ಕೊಟ್ಟು ಹೋದರೇ ನಾವು ಮಣ್ಣು ಪಾಲಾಗುತ್ತೇವೆ. ತುಂಬಾ ಜನ ಆರ್ಟಿಸ್ಟ್​ಗಳಿಗೆ ಗೊತ್ತಿಲ್ಲ. ಅರ್ಧದಲ್ಲೇ ಬಿಟ್ಟು ಹೊರಟು ಹೋಗುತ್ತಾರೆ. ಆದರೆ ನಾನು ಧಾರಾವಾಹಿ ಮಾಡಬೇಕಾದರೇ ರಾಧಿಕಾಗೆ ಸಿನಿಮಾ ಆಫರ್​ಗಳು ಬಂದಿತ್ತು. ತುಂಬಾ ಒಳ್ಳೆ ಒಳ್ಳೆಯ ಸಿನಿಮಾ ಆಫರ್​ಗಳು ಬಂತು. ಆದರೆ ಈಕೆ ಹೋಗಲಿಲ್ಲ. ಇದರ ಜೊತೆಗೆ ಅಶೋಕ್ ಕಶ್ಯಪ್‌ ಅವರಿಗೆ ಬ್ಲಡ್ ಕ್ಯಾನ್ಸರ್‌ ಇದೆ ಅಂತ ಗೊತ್ತಾಯ್ತು. ಆದರೂ ಕೂಡ ಕಡೆಯ ದಿನದವರೆಗೂ, ಕೊನೆಯ ಕ್ಷಣದವರೆಗೂ ನಾವು ಸೀರಿಯಲ್​​ ಮಗಿಸುವವರೆಗೂ ಈಕೆ ನಮ್ಮ ಜೊತೆ ಇದಿದ್ದರಿಂದ ನಾನು ಸೀರಿಯಲ್​ಗೆ ಹಾಕಿದ್ದ ದುಡ್ಡು ವಾಪಸ್​ ಬಂತು. ನನಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದ್ದರಿಂದ ಆ ಹಣದಿಂದ ನಾನು ಅಶೋಕ್ ಕಶ್ಯಪ್‌ ಅವರನ್ನು ಉಳಿಸಿಕೊಳ್ಳುವುದಕ್ಕೆ ಆಯ್ತು. ನಿನಗೆ ಎಷ್ಟು ಥ್ಯಾಂಕ್ಸ್​​ ಹೇಳಿದ್ರೂ ಸಾಕಾಗಲ್ಲ. ಒಂದು ಆರ್ಟಿಸ್ಟ್​ ಮನೆ ಹಾಳು ಮಾಡಬಹುದು ಅಥವಾ ಉದ್ಧಾರ ಮಾಡ್ತಾರೆ. ನಿಮ್ಮಂತ ಆರ್ಟಿಸ್ಟ್​ಗಳು ಕರ್ನಾಟಕಕ್ಕೆ ಬೇಕು’ ಎಂದಿದ್ದಾರೆ.

More articles

Latest article