ಜೋಷಿ ವಿರುದ್ಧ ಸ್ವತಂತ್ರ ಸ್ಪರ್ಧೆ: ಧರ್ಮಯುದ್ಧದ ಘೋಷಣೆ ಮೊಳಗಿಸಿದ ದಿಂಗಾಲೇಶ್ವರ ಸ್ವಾಮೀಜಿ

Most read

ಹುಬ್ಬಳ್ಳಿ: ಸ್ವಾರ್ಥ ರಾಜಕಾರಣದ ವಿರುದ್ಧ ಧರ್ಮಯುದ್ಧ ನಡೆಸುವುದಾಗಿ ಘೋಷಿಸಿರುವ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಧರ್ಮ ಯುದ್ಧ ಈಗ ಆರಂಭವಾಗಿದೆ, ಚುನಾವಣೆ ಮುಗಿದ ಬಳಿಕವೂ ಈ ಧರ್ಮಯುದ್ಧ ಮುಂದುವರೆಯಲಿದೆ ಎಂದು ಸ್ವಾಮೀಜಿ ರಣಕಹಳೆ ಮೊಳಗಿಸಿದ್ದಾರೆ.

ಸುದ್ದಿ ಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ಕಟ್ಟಿದವರು ಲಿಂಗಾಯಿತರು, ರೆಡ್ಡಿಗಳು, ಕುರುಬರು. ಈ ಎಲ್ಲ ಸಮುದಾಯಗಳೂ ಬಿಜೆಪಿಯಿಂದ ನೋವು ಅನುಭವಿಸಿವೆ ಎಂದು ಹೇಳಿದರು.

ಎಲ್ಲ ನೊಂದ ಸಮಾಜಗಳು ತಮ್ಮ ಬಳಿ ಬಂದು ನೋವು ತೋಡಿಕೊಂಡಿವೆ. ಈ ಕಾರಣದಿಂದ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಅವರು ಘೋಷಿಸಿದರು.

More articles

Latest article